<p><strong>ಬದನವಾಳು (ಮೈಸೂರು ಜಿಲ್ಲೆ):</strong> ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಲ್ಲಿನ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಕಾರ್ಯನಿರ್ವಹಿಸುವವರೊಂದಿಗೆ ಭಾನುವಾರ ಸಂವಾದ ನಡೆಸಿ, ಅವರ ಸಂಕಷ್ಟವನ್ನು ಆಲಿಸಿದರು.</p>.<p>ಅಲ್ಲಿ ನಡೆಯವ ಕಾರ್ಯದ ಬಗ್ಗೆ ಮಾಹಿತಿ ಪಡೆದ ಅವರು, ಹತ್ತಿಯ ಕೊರತೆ ಕಾರಣದಿಂದ ಕೇಂದ್ರದಲ್ಲಿ ಕೆಲಸ ಕಳೆದುಕೊಂಡಿರುವ 40 ಮಹಿಳೆಯರ ಬವಣೆಯನ್ನು ಸಹನೆಯಿಂದ ಅಲಿಸಿದರು.</p>.<p>‘ನೂಲುವುದು ಹೇಗೆ, ಕೈಯಲ್ಲಿ ಮಾಡುತ್ತೀರೋ, ಯಂತ್ರದಲ್ಲೋ, ದಾರದಲ್ಲಿ ಎಷ್ಟು ಮೀಟರ್ ಬಟ್ಟೆ ಮಾಡಬಹುದು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು. ‘ಇದರಿಂದ ಎಷ್ಟು ಗಳಿಸುತ್ತೀರಿ’ ಎಂಬ ಪ್ರಶ್ನೆಯನ್ನೂ ಹಾಕಿದರು. ಕನ್ನಡಕ್ಕೆ ಅನುದಾನ ಮಾಡುತ್ತಿದ್ದ ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸಂವಹನಕ್ಕೆ ಸಹಕರಿಸಿದರು.</p>.<p>‘ಇವರಿಗೆ ಕೆಲಸಕ್ಕೆ ತಕ್ಕಂತೆ ಗಳಿಕೆ ಸಿಗುತ್ತಿಲ್ಲ. ಸರ್ಕಾರವು ಹತ್ತಿಯನ್ನು ಸರಿಯಾಗಿ ಪೂರೈಸದಿದ್ದರಿಂದ ಕೆಲಸ ಕಡಿಮೆಯಾಗಿದೆ. ಪರಿಣಾಮ, ಬಹಳಷ್ಟು ಮಂದಿಗೆ ಕೆಲಸವೇ ಇಲ್ಲದಂತಾಗಿದೆ’ ಎಂದು ಸಿದ್ದರಾಮಯ್ಯ ತಿಳಿಸಿದರು.</p>.<p>ಇದಕ್ಕೆ ದನಿಗೂಡಿಸಿದ ಮಹಿಳೆಯರು, ‘ಆರು ತಿಂಗಳಿಂದ ಕೆಲಸವಿದೆ ಜೀವನ ನಡೆಸುವುದೇ ಕಷ್ಟವಾಗಿದೆ. ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಮಹಿಳೆಯರು ಅಳಲು ತೋಡಿಕೊಂಡರು. ‘ನಮಗೆ ಕೂಡಲೇ ಕೆಲಸ ಕೊಡಿಸಿ’ ಎಂದು ಕೋರಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, ‘ಇನ್ನಾರು ತಿಂಗಳು ಕಾಯಿರಿ. ನಮ್ಮದೇ ಸರ್ಕಾರ ಬರುತ್ತದೆ. ಮಾರುಕಟ್ಟೆ ದರಕ್ಕೆ ಅನುಗುಣವಾಗಿ ವೇತನ ಸಿಗುವಂತೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು. ಇದಕ್ಕೆ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದನಿಗೂಡಿಸಿದರು.</p>.<p>ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಇದ್ದರು.</p>.<p>‘ಕೇಂದ್ರದಲ್ಲಿ 50 ಮಂದಿ ಇದ್ದು, ಈಗ ಹತ್ತು ಮಂದಿಗಷ್ಟೆ ಕೆಲಸವಿದೆ. ನಮ್ಮ ನೋವು ಆಲಿಸಿದ ರಾಹುಲ್ ಸ್ಪಂದಿಸುವ ಭರವಸೆ ನೀಡಿದ್ದಾರೆ. ಎಲ್ಲರಿಗೂ ಕೊಟ್ಟಂತೆ ಇವರಿಗೂ ಮನವಿ ನೀಡಿದ್ದೇವೆ. ಏನಾಗುತ್ತದೆಯೋ ನೋಡಬೇಕು’ ಎಂದು ರತ್ನಮ್ಮ ಮತ್ತು ಸುಧಾಮಣಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p><strong>ಓದಿ...<a href="http://prajavani.net/district/mysuru/badanavalu-village-bharat-jodo-yatra-rahul-gandhi-dk-shivakumar-siddaramaiah-congress-977067.html" target="_blank">ಭಾರತ್ ಜೋಡೊ ಯಾತ್ರೆ: ಬದನವಾಳು ಗ್ರಾಮದಲ್ಲಿ ಸಂಚಲನ ಮೂಡಿಸಿದ ರಾಹುಲ್ ನಡೆ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬದನವಾಳು (ಮೈಸೂರು ಜಿಲ್ಲೆ):</strong> ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಲ್ಲಿನ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಕಾರ್ಯನಿರ್ವಹಿಸುವವರೊಂದಿಗೆ ಭಾನುವಾರ ಸಂವಾದ ನಡೆಸಿ, ಅವರ ಸಂಕಷ್ಟವನ್ನು ಆಲಿಸಿದರು.</p>.<p>ಅಲ್ಲಿ ನಡೆಯವ ಕಾರ್ಯದ ಬಗ್ಗೆ ಮಾಹಿತಿ ಪಡೆದ ಅವರು, ಹತ್ತಿಯ ಕೊರತೆ ಕಾರಣದಿಂದ ಕೇಂದ್ರದಲ್ಲಿ ಕೆಲಸ ಕಳೆದುಕೊಂಡಿರುವ 40 ಮಹಿಳೆಯರ ಬವಣೆಯನ್ನು ಸಹನೆಯಿಂದ ಅಲಿಸಿದರು.</p>.<p>‘ನೂಲುವುದು ಹೇಗೆ, ಕೈಯಲ್ಲಿ ಮಾಡುತ್ತೀರೋ, ಯಂತ್ರದಲ್ಲೋ, ದಾರದಲ್ಲಿ ಎಷ್ಟು ಮೀಟರ್ ಬಟ್ಟೆ ಮಾಡಬಹುದು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು. ‘ಇದರಿಂದ ಎಷ್ಟು ಗಳಿಸುತ್ತೀರಿ’ ಎಂಬ ಪ್ರಶ್ನೆಯನ್ನೂ ಹಾಕಿದರು. ಕನ್ನಡಕ್ಕೆ ಅನುದಾನ ಮಾಡುತ್ತಿದ್ದ ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸಂವಹನಕ್ಕೆ ಸಹಕರಿಸಿದರು.</p>.<p>‘ಇವರಿಗೆ ಕೆಲಸಕ್ಕೆ ತಕ್ಕಂತೆ ಗಳಿಕೆ ಸಿಗುತ್ತಿಲ್ಲ. ಸರ್ಕಾರವು ಹತ್ತಿಯನ್ನು ಸರಿಯಾಗಿ ಪೂರೈಸದಿದ್ದರಿಂದ ಕೆಲಸ ಕಡಿಮೆಯಾಗಿದೆ. ಪರಿಣಾಮ, ಬಹಳಷ್ಟು ಮಂದಿಗೆ ಕೆಲಸವೇ ಇಲ್ಲದಂತಾಗಿದೆ’ ಎಂದು ಸಿದ್ದರಾಮಯ್ಯ ತಿಳಿಸಿದರು.</p>.<p>ಇದಕ್ಕೆ ದನಿಗೂಡಿಸಿದ ಮಹಿಳೆಯರು, ‘ಆರು ತಿಂಗಳಿಂದ ಕೆಲಸವಿದೆ ಜೀವನ ನಡೆಸುವುದೇ ಕಷ್ಟವಾಗಿದೆ. ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಮಹಿಳೆಯರು ಅಳಲು ತೋಡಿಕೊಂಡರು. ‘ನಮಗೆ ಕೂಡಲೇ ಕೆಲಸ ಕೊಡಿಸಿ’ ಎಂದು ಕೋರಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, ‘ಇನ್ನಾರು ತಿಂಗಳು ಕಾಯಿರಿ. ನಮ್ಮದೇ ಸರ್ಕಾರ ಬರುತ್ತದೆ. ಮಾರುಕಟ್ಟೆ ದರಕ್ಕೆ ಅನುಗುಣವಾಗಿ ವೇತನ ಸಿಗುವಂತೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು. ಇದಕ್ಕೆ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದನಿಗೂಡಿಸಿದರು.</p>.<p>ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಇದ್ದರು.</p>.<p>‘ಕೇಂದ್ರದಲ್ಲಿ 50 ಮಂದಿ ಇದ್ದು, ಈಗ ಹತ್ತು ಮಂದಿಗಷ್ಟೆ ಕೆಲಸವಿದೆ. ನಮ್ಮ ನೋವು ಆಲಿಸಿದ ರಾಹುಲ್ ಸ್ಪಂದಿಸುವ ಭರವಸೆ ನೀಡಿದ್ದಾರೆ. ಎಲ್ಲರಿಗೂ ಕೊಟ್ಟಂತೆ ಇವರಿಗೂ ಮನವಿ ನೀಡಿದ್ದೇವೆ. ಏನಾಗುತ್ತದೆಯೋ ನೋಡಬೇಕು’ ಎಂದು ರತ್ನಮ್ಮ ಮತ್ತು ಸುಧಾಮಣಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<p><strong>ಓದಿ...<a href="http://prajavani.net/district/mysuru/badanavalu-village-bharat-jodo-yatra-rahul-gandhi-dk-shivakumar-siddaramaiah-congress-977067.html" target="_blank">ಭಾರತ್ ಜೋಡೊ ಯಾತ್ರೆ: ಬದನವಾಳು ಗ್ರಾಮದಲ್ಲಿ ಸಂಚಲನ ಮೂಡಿಸಿದ ರಾಹುಲ್ ನಡೆ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>