<blockquote>ಕೇಂದ್ರ ಸಂಸ್ಕೃತಿ ಸಚಿವಾಲಯ ಸಹಯೋಗ | ಪ್ರಸಾರ ಭಾರತಿಯಿಂದ ದಾಖಲೀಕರಣ | ಸಾರ್ವಜನಿಕರಿಗೆ ಮುಕ್ತ ಪ್ರವೇಶ </blockquote>.<p><strong>ಮೈಸೂರು:</strong> ಕರ್ನಾಟಕ ಸಂಗೀತದ ಪ್ರಧಾನ ವಾದ್ಯಗಳಾದ ಮೃದಂಗ ಹಾಗೂ ವೀಣೆಯಲ್ಲಿ ವಿದ್ವಾನ್ ಎಚ್.ಎಲ್.ಶಿವಶಂಕರಸ್ವಾಮಿ ಹಾಗೂ ವಿದುಷಿ ಎಸ್.ವಿ.ಸಹನಾ ನಾದ ಸುಧೆ ಹರಿಸಿದರು.</p>.<p>ಕುವೆಂಪುನಗರದ ಗಾನಭಾರತೀ ವೀಣೆಶೇಷಣ್ಣ ಭವನದಲ್ಲಿ ‘ಆಕಾಶವಾಣಿ ಮೈಸೂರು’, ತನ್ನ 91ನೇ ವರ್ಷಾಚರಣೆ ಪ್ರಯುಕ್ತ ಆಯೋಜಿಸಿದ್ದ ‘67ನೇ ಆಕಾಶವಾಣಿ ಸಂಗೀತ ಸಮ್ಮೇಳನ’ದಲ್ಲಿ ‘ಮೃದಂಗ ತರಂಗ’ವು ಸಹೃದಯರಲ್ಲಿ ಭಾವದಲೆಗಳನ್ನು ಎಬ್ಬಿಸಿದರೆ, ‘ವೀಣಾ ವಾದನ’ವು ಮನ ಸೋಲುವಂತೆ ಮಾಡಿತ್ತು. </p>.<p>ಸಪ್ತ ಸ್ವರಗಳನ್ನು ಹೊಮ್ಮಿಸುವ ಮೃದಂಗಗಳನ್ನು ಸಾಲಾಗಿ ಇರಿಸಿ, ರಾಗಗಳನ್ನು ಹೊಮ್ಮಿಸಿ, ಲಯ ವೈವಿಧ್ಯದ ಜಾದೂವನ್ನು ಶಿವಶಂಕರಸ್ವಾಮಿ ತೆರೆದಿಟ್ಟರು. ‘ಬೃಂದಾವನ ಸಾರಂಗ’ ರಾಗದಲ್ಲಿ ಸಂಗೀತ ಕಛೇರಿ ಆರಂಭಿಸಿದ ಅವರು, ‘ತಿಶ್ರಾ’, ‘ಚತುಶ್ರ’, ‘ಕಾಂಡಾ’, ‘ಮಿಶ್ರಾ’, ‘ಸಂಕೀರ್ಣ’ ನಡೆಗಳನ್ನು ಅನಾವರಣಗೊಳಿಸಿದರು. </p>.<p>‘ಮೃದಂಗ’ಗಳಲ್ಲಿ ಹೊಮ್ಮುತ್ತಿದ್ದ ಸಪ್ತ ಸ್ವರಕ್ಕೆ ಕೊಳಲಿನಲ್ಲಿ ಸಮೀರ್ ರಾವ್ ಹಾಗೂ ವಯಲಿನ್ನಲ್ಲಿ ಜೋತ್ಸ್ಯಾ ಶ್ರೀಕಾಂತ್ ಹಾಗೂ ಕೀಬೋರ್ಡ್ನಲ್ಲಿ ಸಂಗೀತ್ ಥಾಮಸ್ ಅವರು ನಾದವನ್ನು ಸೇರಿಸಿ ಭಾವ ತೀವ್ರತೆಯನ್ನು ಹೆಚ್ಚಿಸಿದರು. </p>.<p>ತಬಲಾದಲ್ಲಿ ಆದರ್ಶ್ ಶೆಣೈ, ಡೋಲಾಕ್ನಲ್ಲಿ ಅನುಷ್ ಶೆಟ್ಟಿ ಸಾಥ್ ನೀಡಿದರು. ಅಷ್ಟೂ ವಾದ್ಯಗಳಲ್ಲಿ ಹೊಮ್ಮಿದ ‘ಫ್ಯೂಷನ್’ ಸಂಗೀತವು ನೋಡುಗರನ್ನು ಚಕಿತಗೊಳಿಸಿತು. </p>.<p>ಕೊನೆಯಲ್ಲಿ ಬಂಕಿಮ್ ಚಂದ್ರ ಚಟರ್ಜಿ ಅವರ ‘ದೇಶ್’ ರಾಗ, ‘ಆದಿ ತಾಳ’ದಲ್ಲಿ ಸಂಯೋಜನೆಗೊಂಡಿರುವ ‘ವಂದೇ ಮಾತರಂ’ ಗೀತೆಯನ್ನು ನುಡಿಸಿದಾಗ, ಪ್ರೇಕ್ಷಕರ ಹೃದಯದಾಳದಲ್ಲಿನ ದೇಶಪ್ರೇಮವು ಇಡೀ ಸಭಾಗೃಹವನ್ನು ಭಾವುಕತೆಯಲ್ಲಿ ಮೀಯಿಸಿತ್ತು. </p>.<p><strong>ಸಹನಾ ಮೋಡಿ:</strong> </p><p>ಎಸ್.ವಿ.ಸಹನಾ ಅವರ ವೀಣಾ ವಾದನ ಗಮನಸೆಳೆಯಿತು. ‘ಖಮಾಜ್’ ರಾಗದ ಮುತ್ತಯ್ಯ ಭಾಗವತಾರ್ ಕೃತಿ ‘ಮಾತೇ ಮಲಯಧ್ವಜ ಪಾಂಡ್ಯ ಸಂಜಾತೆ’ ಮೂಲಕ ಕಛೇರಿ ಆರಂಭಿಸಿದರು. </p>.<p>ಕರ್ನಾಟಕ ಸಂಗೀತದ ವಾಗ್ಗೇಯಕಾರ ತ್ಯಾಗರಾಜರ ‘ಅಮೃತವರ್ಷಿಣಿ’ ರಾಗದ ‘ಸರಸಿರುಹ ನಯನೆ’ ಕೃತಿಯನ್ನು ನುಡಿಸಿ ಮಂತ್ರಮುಗ್ಧಗೊಳಿಸಿದರು. ಅವರಿಗೆ ಮೃದಂಗದಲ್ಲಿ ಅರ್ಜುನ್ ಕುಮಾರ್, ಘಟಂನಲ್ಲಿ ಜಿ.ಎಸ್.ರಾಮಾನುಜನ್ ಸಾಥ್ ನೀಡಿದರು. </p>.<p>ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದ ಕಛೇರಿಯನ್ನು ಪ್ರಸಾರ ಭಾರತಿಯು ದಾಖಲೀಕರಿಸಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಕೇಂದ್ರ ಸಂಸ್ಕೃತಿ ಸಚಿವಾಲಯ ಸಹಯೋಗ | ಪ್ರಸಾರ ಭಾರತಿಯಿಂದ ದಾಖಲೀಕರಣ | ಸಾರ್ವಜನಿಕರಿಗೆ ಮುಕ್ತ ಪ್ರವೇಶ </blockquote>.<p><strong>ಮೈಸೂರು:</strong> ಕರ್ನಾಟಕ ಸಂಗೀತದ ಪ್ರಧಾನ ವಾದ್ಯಗಳಾದ ಮೃದಂಗ ಹಾಗೂ ವೀಣೆಯಲ್ಲಿ ವಿದ್ವಾನ್ ಎಚ್.ಎಲ್.ಶಿವಶಂಕರಸ್ವಾಮಿ ಹಾಗೂ ವಿದುಷಿ ಎಸ್.ವಿ.ಸಹನಾ ನಾದ ಸುಧೆ ಹರಿಸಿದರು.</p>.<p>ಕುವೆಂಪುನಗರದ ಗಾನಭಾರತೀ ವೀಣೆಶೇಷಣ್ಣ ಭವನದಲ್ಲಿ ‘ಆಕಾಶವಾಣಿ ಮೈಸೂರು’, ತನ್ನ 91ನೇ ವರ್ಷಾಚರಣೆ ಪ್ರಯುಕ್ತ ಆಯೋಜಿಸಿದ್ದ ‘67ನೇ ಆಕಾಶವಾಣಿ ಸಂಗೀತ ಸಮ್ಮೇಳನ’ದಲ್ಲಿ ‘ಮೃದಂಗ ತರಂಗ’ವು ಸಹೃದಯರಲ್ಲಿ ಭಾವದಲೆಗಳನ್ನು ಎಬ್ಬಿಸಿದರೆ, ‘ವೀಣಾ ವಾದನ’ವು ಮನ ಸೋಲುವಂತೆ ಮಾಡಿತ್ತು. </p>.<p>ಸಪ್ತ ಸ್ವರಗಳನ್ನು ಹೊಮ್ಮಿಸುವ ಮೃದಂಗಗಳನ್ನು ಸಾಲಾಗಿ ಇರಿಸಿ, ರಾಗಗಳನ್ನು ಹೊಮ್ಮಿಸಿ, ಲಯ ವೈವಿಧ್ಯದ ಜಾದೂವನ್ನು ಶಿವಶಂಕರಸ್ವಾಮಿ ತೆರೆದಿಟ್ಟರು. ‘ಬೃಂದಾವನ ಸಾರಂಗ’ ರಾಗದಲ್ಲಿ ಸಂಗೀತ ಕಛೇರಿ ಆರಂಭಿಸಿದ ಅವರು, ‘ತಿಶ್ರಾ’, ‘ಚತುಶ್ರ’, ‘ಕಾಂಡಾ’, ‘ಮಿಶ್ರಾ’, ‘ಸಂಕೀರ್ಣ’ ನಡೆಗಳನ್ನು ಅನಾವರಣಗೊಳಿಸಿದರು. </p>.<p>‘ಮೃದಂಗ’ಗಳಲ್ಲಿ ಹೊಮ್ಮುತ್ತಿದ್ದ ಸಪ್ತ ಸ್ವರಕ್ಕೆ ಕೊಳಲಿನಲ್ಲಿ ಸಮೀರ್ ರಾವ್ ಹಾಗೂ ವಯಲಿನ್ನಲ್ಲಿ ಜೋತ್ಸ್ಯಾ ಶ್ರೀಕಾಂತ್ ಹಾಗೂ ಕೀಬೋರ್ಡ್ನಲ್ಲಿ ಸಂಗೀತ್ ಥಾಮಸ್ ಅವರು ನಾದವನ್ನು ಸೇರಿಸಿ ಭಾವ ತೀವ್ರತೆಯನ್ನು ಹೆಚ್ಚಿಸಿದರು. </p>.<p>ತಬಲಾದಲ್ಲಿ ಆದರ್ಶ್ ಶೆಣೈ, ಡೋಲಾಕ್ನಲ್ಲಿ ಅನುಷ್ ಶೆಟ್ಟಿ ಸಾಥ್ ನೀಡಿದರು. ಅಷ್ಟೂ ವಾದ್ಯಗಳಲ್ಲಿ ಹೊಮ್ಮಿದ ‘ಫ್ಯೂಷನ್’ ಸಂಗೀತವು ನೋಡುಗರನ್ನು ಚಕಿತಗೊಳಿಸಿತು. </p>.<p>ಕೊನೆಯಲ್ಲಿ ಬಂಕಿಮ್ ಚಂದ್ರ ಚಟರ್ಜಿ ಅವರ ‘ದೇಶ್’ ರಾಗ, ‘ಆದಿ ತಾಳ’ದಲ್ಲಿ ಸಂಯೋಜನೆಗೊಂಡಿರುವ ‘ವಂದೇ ಮಾತರಂ’ ಗೀತೆಯನ್ನು ನುಡಿಸಿದಾಗ, ಪ್ರೇಕ್ಷಕರ ಹೃದಯದಾಳದಲ್ಲಿನ ದೇಶಪ್ರೇಮವು ಇಡೀ ಸಭಾಗೃಹವನ್ನು ಭಾವುಕತೆಯಲ್ಲಿ ಮೀಯಿಸಿತ್ತು. </p>.<p><strong>ಸಹನಾ ಮೋಡಿ:</strong> </p><p>ಎಸ್.ವಿ.ಸಹನಾ ಅವರ ವೀಣಾ ವಾದನ ಗಮನಸೆಳೆಯಿತು. ‘ಖಮಾಜ್’ ರಾಗದ ಮುತ್ತಯ್ಯ ಭಾಗವತಾರ್ ಕೃತಿ ‘ಮಾತೇ ಮಲಯಧ್ವಜ ಪಾಂಡ್ಯ ಸಂಜಾತೆ’ ಮೂಲಕ ಕಛೇರಿ ಆರಂಭಿಸಿದರು. </p>.<p>ಕರ್ನಾಟಕ ಸಂಗೀತದ ವಾಗ್ಗೇಯಕಾರ ತ್ಯಾಗರಾಜರ ‘ಅಮೃತವರ್ಷಿಣಿ’ ರಾಗದ ‘ಸರಸಿರುಹ ನಯನೆ’ ಕೃತಿಯನ್ನು ನುಡಿಸಿ ಮಂತ್ರಮುಗ್ಧಗೊಳಿಸಿದರು. ಅವರಿಗೆ ಮೃದಂಗದಲ್ಲಿ ಅರ್ಜುನ್ ಕುಮಾರ್, ಘಟಂನಲ್ಲಿ ಜಿ.ಎಸ್.ರಾಮಾನುಜನ್ ಸಾಥ್ ನೀಡಿದರು. </p>.<p>ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದ ಕಛೇರಿಯನ್ನು ಪ್ರಸಾರ ಭಾರತಿಯು ದಾಖಲೀಕರಿಸಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>