<p><strong>ಹುಣಸೂರು:</strong> ಅಪ್ರತಿಮ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರನ್ನು ರಾಜ್ಯ ರಾಜಕಾರಣಕ್ಕೆ ಕೊಡುಗೆ ನೀಡಿರುವುದು ಹುಣಸೂರು ಕ್ಷೇತ್ರ ಎನ್ನುವ ಹೆಮ್ಮೆ ಇಲ್ಲಿನವರಾಗಿ ನಮಗಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.</p>.<p>ನಗರದ ಹೊರ ವಲಯದ ದೇವರಾಜ ಅರಸು110 ನೇ ಜಯಂತಿ ಕಾರ್ಯಕ್ರಮದಲ್ಲಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಅರಸು ಸಾಧನೆ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಸಮಸಮಾಜದ ಪರಿಕಲ್ಪನೆಯಲ್ಲಿ ಭೂ ಸುಧಾರಣೆ, ಹಾವನೂರು ವರದಿ ಜಾರಿಗೊಳಿಸಿದರು ಎಂದರು.</p>.<p>ಮೈಸೂರು ರಾಜ್ಯ ಎಂಬ ಹೆಸರನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿ ರಾಜ್ಯದ ಅಭಿವೃದ್ಧಿ ಪಥಕ್ಕೆ ಹೊಸ ಮೈಲುಗಲ್ಲು ಹಾಕಿದ ವ್ಯಕ್ತಿತ್ವ ಅವರದು. ಸಮಾಜದ ಕಟ್ಟಕಡೆಯ ವ್ಯಕ್ತಿ ಸಮಾಜಮುಖಿಯಾಗಿ ಹೊರ ಹೊಮ್ಮುವ ದೂರದೃಷ್ಠಿ ಹೊಂದಿದ್ದರು ಎಂದರು.</p>.<p> ಉಪ ವಿಭಾಗಾಧಿಕಾರಿ ವಿಜಯ್ ಕುಮಾರ್ ಮಾತನಾಡಿ, ದೇವರಾಜ ಅರಸು ಕುರಿತು ಅವರ ಸಾಧನೆ ಮಾತಿಗೆ ಸೀಮಿತವಾಗದೆ, ಭವಿಷ್ಯದ ಯುವಕರು ಮೈಗೂಡಿಸಿಕೊಳ್ಳಬೇಕು ಎಂದರು. ಅರಸು ಜಯಂತಿ ಅಂಗವಾಗಿ ಕ್ಷೇತ್ರದಲ್ಲಿ ಅರಸು ಜೊತೆಗಿನ ರಾಜಕಾರಣ ಮಾಡಿದ ಎಚ್.ಎಸ್. ಶಿವಯ್ಯ,ರಾಮೇಗೌಡ ಅವರನ್ನು ಗೌರವಿಸಿದರು.</p>.<p>ತಹಶೀಲ್ದಾರ್ ಮಂಜುನಾಥ್ , ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕ ಕುಮಾರ್ ಮಾತನಾಡಿದರು. ಇ.ಒ.ಹೊಂಗಯ್ಯ,ನಗರಸಭೆ ಆಯುಕ್ತೆ ಮಾನಸ, ಬಿಸಿಎಂ ಇಲಾಖೆ ಅಧಿಕಾರಿ ಆರತಿ, ಕಸಾಪ ಅಧ್ಯಕ್ಷ ಮಹದೇವ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್, ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಸೇರಿದಂತೆ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು:</strong> ಅಪ್ರತಿಮ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರನ್ನು ರಾಜ್ಯ ರಾಜಕಾರಣಕ್ಕೆ ಕೊಡುಗೆ ನೀಡಿರುವುದು ಹುಣಸೂರು ಕ್ಷೇತ್ರ ಎನ್ನುವ ಹೆಮ್ಮೆ ಇಲ್ಲಿನವರಾಗಿ ನಮಗಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.</p>.<p>ನಗರದ ಹೊರ ವಲಯದ ದೇವರಾಜ ಅರಸು110 ನೇ ಜಯಂತಿ ಕಾರ್ಯಕ್ರಮದಲ್ಲಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಅರಸು ಸಾಧನೆ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಸಮಸಮಾಜದ ಪರಿಕಲ್ಪನೆಯಲ್ಲಿ ಭೂ ಸುಧಾರಣೆ, ಹಾವನೂರು ವರದಿ ಜಾರಿಗೊಳಿಸಿದರು ಎಂದರು.</p>.<p>ಮೈಸೂರು ರಾಜ್ಯ ಎಂಬ ಹೆಸರನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿ ರಾಜ್ಯದ ಅಭಿವೃದ್ಧಿ ಪಥಕ್ಕೆ ಹೊಸ ಮೈಲುಗಲ್ಲು ಹಾಕಿದ ವ್ಯಕ್ತಿತ್ವ ಅವರದು. ಸಮಾಜದ ಕಟ್ಟಕಡೆಯ ವ್ಯಕ್ತಿ ಸಮಾಜಮುಖಿಯಾಗಿ ಹೊರ ಹೊಮ್ಮುವ ದೂರದೃಷ್ಠಿ ಹೊಂದಿದ್ದರು ಎಂದರು.</p>.<p> ಉಪ ವಿಭಾಗಾಧಿಕಾರಿ ವಿಜಯ್ ಕುಮಾರ್ ಮಾತನಾಡಿ, ದೇವರಾಜ ಅರಸು ಕುರಿತು ಅವರ ಸಾಧನೆ ಮಾತಿಗೆ ಸೀಮಿತವಾಗದೆ, ಭವಿಷ್ಯದ ಯುವಕರು ಮೈಗೂಡಿಸಿಕೊಳ್ಳಬೇಕು ಎಂದರು. ಅರಸು ಜಯಂತಿ ಅಂಗವಾಗಿ ಕ್ಷೇತ್ರದಲ್ಲಿ ಅರಸು ಜೊತೆಗಿನ ರಾಜಕಾರಣ ಮಾಡಿದ ಎಚ್.ಎಸ್. ಶಿವಯ್ಯ,ರಾಮೇಗೌಡ ಅವರನ್ನು ಗೌರವಿಸಿದರು.</p>.<p>ತಹಶೀಲ್ದಾರ್ ಮಂಜುನಾಥ್ , ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕ ಕುಮಾರ್ ಮಾತನಾಡಿದರು. ಇ.ಒ.ಹೊಂಗಯ್ಯ,ನಗರಸಭೆ ಆಯುಕ್ತೆ ಮಾನಸ, ಬಿಸಿಎಂ ಇಲಾಖೆ ಅಧಿಕಾರಿ ಆರತಿ, ಕಸಾಪ ಅಧ್ಯಕ್ಷ ಮಹದೇವ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್, ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಸೇರಿದಂತೆ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>