<p><strong>ಮೈಸೂರು</strong>: ಜಿಲ್ಲೆಯಾದ್ಯಂತ ದೀಪಾವಳಿ (ಬಲಿಪಾಡ್ಯಮಿ) ಹಬ್ಬವನ್ನು ಜನರು ಬುಧವಾರ ಸಂಭ್ರಮದಿಂದ ಆಚರಿಸಿದರು. </p>.<p>ಮಳಿಗೆಗಳು, ಅಂಗಡಿಗಳು, ಹೋಟೆಲ್ಗಳು, ಕಾರ್ಖಾನೆಗಳು ಹಾಗೂ ಮನೆಗಳಲ್ಲಿ ಲಕ್ಷ್ಮಿಪೂಜೆ ನೆರವೇರಿಸಿದ ಜನರು ಸಿಹಿ ಖಾದ್ಯ ತಯಾರಿಸಿ ಸವಿದರು. ಸಂಜೆಯಾಗುತ್ತಿದ್ದಂತೆ ಮನೆಯಂಗಳದಲ್ಲಿ ಹಣತೆಗಳನ್ನು ಸಾಲಾಗಿ ಹಚ್ಚಿದರು.</p>.<p><strong>ದಿನವಿಡೀ ಮಳೆ:</strong> ಇಡೀ ಮಳೆ ಸುರಿದ ಕಾರಣ ಚಳಿಯ ವಾತಾವರಣವಿತ್ತು. ರಾತ್ರಿ 9 ಗಂಟೆ ಮೇಲೆ ಮಳೆ ಬಿಡುವು ನೀಡಿದ್ದರಿಂದ ಚಿಣ್ಣರು, ಯುವಕರು ವಿವಿಧ ಬಗೆಯ ಪಟಾಕಿಗಳನ್ನು ಹಚ್ಚಿ ಬೆಳಕಿನ ಚಿತ್ತಾರ ಮೂಡಿಸಿದರು. ಮಧ್ಯರಾತ್ರಿ ವರೆಗೂ ಪಟಾಕಿಗಳ ಸದ್ದು ಜೋರಾಗಿತ್ತು. ಆಕಾಶ ಬುಟ್ಟಿಗಳನ್ನು ಬಿಟ್ಟ ಮಕ್ಕಳು ಸಂತಸ ಪಟ್ಟರು. </p>.<p>ಗ್ರಾಮೀಣ ಪ್ರದೇಶದ ಅಲ್ಲಲ್ಲಿ ರಾಸುಗಳಿಗೆ ಕಿಚ್ಚು ಹಾಯಿಸಲಾಯಿತು. ಬಣ್ಣದ ಬಲೂನು, ಬಣ್ಣಗಳಿಂದ ರಾಸುಗಳನ್ನು ಅಲಂಕರಿಸಲಾಗಿತ್ತು. ಎತ್ತಿನಗಾಡಿ ಸ್ಪರ್ಧೆಗಳೂ ನಡೆದವು. </p>.<p>ಚಾಮುಂಡಿ ಬೆಟ್ಟದ ದೇಗುಲದಲ್ಲಿ ಸಂಜೆ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ಆರಂಭವಾಯಿತು. ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದಿದ್ದರು. ಹೂವಿನಿಂದ ಗೋವನ್ನು ಅಲಂಕರಿಸಲಾಗಿತ್ತು. ಅಕ್ಕಿ, ಬೆಲ್ಲ, ಹಣ್ಣು, ಸಿಹಿ ತಿಂಡಿಯನ್ನು ಗೋವಿಗೆ ತಿನಿಸಲಾಯಿತು.</p>.<p>ನಂಜನಗೂಡಿನ ನಂಜುಂಡೇಶ್ವರ, ತಲಕಾಡಿನ ವೈದ್ಯನಾಥೇಶ್ವರ, ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಸೇರಿದಂತೆ ಮುಜರಾಯಿ ಇಲಾಖೆ ವ್ಯಾಪ್ತಿಯ ದೇಗುಲಗಳಲ್ಲಿಯೂ ವಿಶೇಷ ಪೂಜೆ ನಡೆಯಿತು.</p>.<p><strong>11 ಮಂದಿಗೆ ಗಾಯ:</strong> ಮೂರು ದಿನಗಳ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿತದಿಂದ 11 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 6 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. </p>.<p>ಗಾಯಗೊಳ್ಳುವವರ ಚಿಕಿತ್ಸೆಗೆ ಆಸ್ಪತ್ರೆಯ ಕಣ್ಣಿನ ವಿಭಾಗದಲ್ಲಿ ವಿಶೇಷ ಚಿಕಿತ್ಸಾ ಘಟಕ ತೆರೆಯಲಾಗಿತ್ತು. ಕೆಲವರಿಗೆ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ವಾಪಸಾಗಿದ್ದಾರೆ. </p>.<p><strong>ಹೊಗೆ</strong>: ದೀಪಾವಳಿ ಹಬ್ಬದ ಕಡೇ ದಿನ ಮಧ್ಯರಾತ್ರಿ ವರೆಗೂ ಎಲ್ಲ ಪಟಾಕಿಗಳನ್ನು ಹೊಡೆದ ಕಾರಣ ನಗರವು ಹೊಗೆಯಿಂದ ಆವರಿಸಿತ್ತು. ಮುಂಜಾನೆಯ ಮಂಜು ಮುಸುಕಿದಂತೆ ನಾಗರಿಕರಿಗೆ ಭಾಸವಾಯ್ತು. ಹಳ್ಳದ ಭಾಗವಿದ್ದ ಭಾಗಗಳಲ್ಲಿ ಹೊಗೆಯು ತುಂಬಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಜಿಲ್ಲೆಯಾದ್ಯಂತ ದೀಪಾವಳಿ (ಬಲಿಪಾಡ್ಯಮಿ) ಹಬ್ಬವನ್ನು ಜನರು ಬುಧವಾರ ಸಂಭ್ರಮದಿಂದ ಆಚರಿಸಿದರು. </p>.<p>ಮಳಿಗೆಗಳು, ಅಂಗಡಿಗಳು, ಹೋಟೆಲ್ಗಳು, ಕಾರ್ಖಾನೆಗಳು ಹಾಗೂ ಮನೆಗಳಲ್ಲಿ ಲಕ್ಷ್ಮಿಪೂಜೆ ನೆರವೇರಿಸಿದ ಜನರು ಸಿಹಿ ಖಾದ್ಯ ತಯಾರಿಸಿ ಸವಿದರು. ಸಂಜೆಯಾಗುತ್ತಿದ್ದಂತೆ ಮನೆಯಂಗಳದಲ್ಲಿ ಹಣತೆಗಳನ್ನು ಸಾಲಾಗಿ ಹಚ್ಚಿದರು.</p>.<p><strong>ದಿನವಿಡೀ ಮಳೆ:</strong> ಇಡೀ ಮಳೆ ಸುರಿದ ಕಾರಣ ಚಳಿಯ ವಾತಾವರಣವಿತ್ತು. ರಾತ್ರಿ 9 ಗಂಟೆ ಮೇಲೆ ಮಳೆ ಬಿಡುವು ನೀಡಿದ್ದರಿಂದ ಚಿಣ್ಣರು, ಯುವಕರು ವಿವಿಧ ಬಗೆಯ ಪಟಾಕಿಗಳನ್ನು ಹಚ್ಚಿ ಬೆಳಕಿನ ಚಿತ್ತಾರ ಮೂಡಿಸಿದರು. ಮಧ್ಯರಾತ್ರಿ ವರೆಗೂ ಪಟಾಕಿಗಳ ಸದ್ದು ಜೋರಾಗಿತ್ತು. ಆಕಾಶ ಬುಟ್ಟಿಗಳನ್ನು ಬಿಟ್ಟ ಮಕ್ಕಳು ಸಂತಸ ಪಟ್ಟರು. </p>.<p>ಗ್ರಾಮೀಣ ಪ್ರದೇಶದ ಅಲ್ಲಲ್ಲಿ ರಾಸುಗಳಿಗೆ ಕಿಚ್ಚು ಹಾಯಿಸಲಾಯಿತು. ಬಣ್ಣದ ಬಲೂನು, ಬಣ್ಣಗಳಿಂದ ರಾಸುಗಳನ್ನು ಅಲಂಕರಿಸಲಾಗಿತ್ತು. ಎತ್ತಿನಗಾಡಿ ಸ್ಪರ್ಧೆಗಳೂ ನಡೆದವು. </p>.<p>ಚಾಮುಂಡಿ ಬೆಟ್ಟದ ದೇಗುಲದಲ್ಲಿ ಸಂಜೆ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ಆರಂಭವಾಯಿತು. ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದಿದ್ದರು. ಹೂವಿನಿಂದ ಗೋವನ್ನು ಅಲಂಕರಿಸಲಾಗಿತ್ತು. ಅಕ್ಕಿ, ಬೆಲ್ಲ, ಹಣ್ಣು, ಸಿಹಿ ತಿಂಡಿಯನ್ನು ಗೋವಿಗೆ ತಿನಿಸಲಾಯಿತು.</p>.<p>ನಂಜನಗೂಡಿನ ನಂಜುಂಡೇಶ್ವರ, ತಲಕಾಡಿನ ವೈದ್ಯನಾಥೇಶ್ವರ, ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಸೇರಿದಂತೆ ಮುಜರಾಯಿ ಇಲಾಖೆ ವ್ಯಾಪ್ತಿಯ ದೇಗುಲಗಳಲ್ಲಿಯೂ ವಿಶೇಷ ಪೂಜೆ ನಡೆಯಿತು.</p>.<p><strong>11 ಮಂದಿಗೆ ಗಾಯ:</strong> ಮೂರು ದಿನಗಳ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿತದಿಂದ 11 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 6 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. </p>.<p>ಗಾಯಗೊಳ್ಳುವವರ ಚಿಕಿತ್ಸೆಗೆ ಆಸ್ಪತ್ರೆಯ ಕಣ್ಣಿನ ವಿಭಾಗದಲ್ಲಿ ವಿಶೇಷ ಚಿಕಿತ್ಸಾ ಘಟಕ ತೆರೆಯಲಾಗಿತ್ತು. ಕೆಲವರಿಗೆ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ವಾಪಸಾಗಿದ್ದಾರೆ. </p>.<p><strong>ಹೊಗೆ</strong>: ದೀಪಾವಳಿ ಹಬ್ಬದ ಕಡೇ ದಿನ ಮಧ್ಯರಾತ್ರಿ ವರೆಗೂ ಎಲ್ಲ ಪಟಾಕಿಗಳನ್ನು ಹೊಡೆದ ಕಾರಣ ನಗರವು ಹೊಗೆಯಿಂದ ಆವರಿಸಿತ್ತು. ಮುಂಜಾನೆಯ ಮಂಜು ಮುಸುಕಿದಂತೆ ನಾಗರಿಕರಿಗೆ ಭಾಸವಾಯ್ತು. ಹಳ್ಳದ ಭಾಗವಿದ್ದ ಭಾಗಗಳಲ್ಲಿ ಹೊಗೆಯು ತುಂಬಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>