<p><strong>ಮೈಸೂರು:</strong> ಸರ್ಕಾರದಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ನಿರುದ್ಯೋಗಿಗಳು ಹಾಗೂ ವಿದ್ಯಾರ್ಥಿ ಸಂಘಟನೆ ಸದಸ್ಯರು ಮಾನಸ ಗಂಗೋತ್ರಿ ಆವರಣದ ಕ್ಲಾಕ್ ಟವರ್ ಬಳಿ ಶುಕ್ರವಾರ ಪ್ರತಿಭಟಿಸಿದರು.</p>.<p>‘ನಾಲ್ಕೈದು ಪದವಿ ತೆಗೆದುಕೊಂಡರೂ ಕನಿಷ್ಠ ಸರ್ಕಾರಿ ಉದ್ಯೋಗ ದೊರೆಯುತ್ತಿಲ್ಲ. ವಿದ್ಯಾರ್ಥಿಗಳು ಹೆಚ್ಚುಹೆಚ್ಚು ಓದಿದ ಕಾರಣಕ್ಕೆ ಚಿತ್ರಹಿಂಸೆಗೆ ಗುರಿಯಾಗಿದ್ದು, ಮಾನಸಿಕವಾಗಿ ವಿಚಲಿತವಾಗಿದ್ದಾರೆ. ಪ್ರಧಾನಿ 10 ವರ್ಷದ ಹಿಂದೆಯೇ ವಾರ್ಷಿಕವಾಗಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಅತಿ ಹೆಚ್ಚು ಉದ್ಯೋಗಗಳು ನಷ್ಟವಾಗಿ ಉದ್ಯೋಗ ಕ್ಷೇತ್ರದಲ್ಲಿ ನೇಮಕಾತಿ ನಡೆಯುತ್ತಿಲ್ಲ’ ಎಂದು ಆರೋಪಿಸಿದರು.</p>.<p>‘ರಾಜ್ಯ ಸರ್ಕಾರದಲ್ಲಿ 2,73,386 ಮಂಜೂರಾದ ಖಾಲಿ ಹುದ್ದೆಗಳಿವೆ. ಈ ಹುದ್ದೆ ಭರ್ತಿ ಮಾಡದೆ ಒಳ ಮೀಸಲಾತಿ, ಜಾತಿ ಸಮೀಕ್ಷೆ ನೆಪವೊಡ್ಡಿ ನೇಮಕಾತಿಯನ್ನು ನಾಜೂಕಾಗಿ ಮುಂದಕ್ಕೆ ಹಾಕುವ ಸರ್ಕಾರ ಇದೆಲ್ಲದರ ಅಣಕದಂತೆ ಖಾಸಗಿ ಉದ್ಯೋಗ ಮೇಳವನ್ನು ಏರ್ಪಡಿಸುತ್ತಿದೆ’ ಎಂದು ಟೀಕಿಸಿದರು.</p>.<p>‘ವಿದ್ಯಾರ್ಥಿ ಯುವಜನರ ಕಷ್ಟವನ್ನು ಕೇಳುವ ಯಾವ ಹೋರಾಟಗಾರರೂ ಮಾಧ್ಯಮಗಳೂ, ಮುತ್ಸದ್ಧಿ ವ್ಯಕ್ತಿಗಳು ನಮಗೆ ಕಾಣುತ್ತಿಲ್ಲ. ಕೂಡಲೇ ಖಾಲಿಯಿರುವ ಹುದ್ದೆ ಭರ್ತಿ ಮಾಡಬೇಕು’ ಎಂದು ಆಗ್ರಹಿಸಿದರು.</p>.<p>ಸಂಶೋಧಕರಾದ ಪ್ರದೀಪ್ ಮುಮ್ಮಡಿ, ಶಿವಶಂಕರ್, ವಿಶ್ವಪ್ರಸಾದ್, ಕಾರ್ತಿಕ್, ಶರತ್ ಬಂಡಳ್ಳಿ, ರವಿ ಕೊಳ್ಳೆಗಾಲ, ವಿದ್ಯಾರ್ಥಿಗಳಾದ ಕೃಷ್ಣ ಗಣಿಗನೂರು, ಸತೀಶ್ ಹೊಸಕೋಟೆ, ನಾಗೇಂದ್ರ, ಚಿರಾಗ್, ಸುಮಂತ್, ನಿತಿನ್, ಶ್ವೇತಾ, ಜಯಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಸರ್ಕಾರದಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ನಿರುದ್ಯೋಗಿಗಳು ಹಾಗೂ ವಿದ್ಯಾರ್ಥಿ ಸಂಘಟನೆ ಸದಸ್ಯರು ಮಾನಸ ಗಂಗೋತ್ರಿ ಆವರಣದ ಕ್ಲಾಕ್ ಟವರ್ ಬಳಿ ಶುಕ್ರವಾರ ಪ್ರತಿಭಟಿಸಿದರು.</p>.<p>‘ನಾಲ್ಕೈದು ಪದವಿ ತೆಗೆದುಕೊಂಡರೂ ಕನಿಷ್ಠ ಸರ್ಕಾರಿ ಉದ್ಯೋಗ ದೊರೆಯುತ್ತಿಲ್ಲ. ವಿದ್ಯಾರ್ಥಿಗಳು ಹೆಚ್ಚುಹೆಚ್ಚು ಓದಿದ ಕಾರಣಕ್ಕೆ ಚಿತ್ರಹಿಂಸೆಗೆ ಗುರಿಯಾಗಿದ್ದು, ಮಾನಸಿಕವಾಗಿ ವಿಚಲಿತವಾಗಿದ್ದಾರೆ. ಪ್ರಧಾನಿ 10 ವರ್ಷದ ಹಿಂದೆಯೇ ವಾರ್ಷಿಕವಾಗಿ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಅತಿ ಹೆಚ್ಚು ಉದ್ಯೋಗಗಳು ನಷ್ಟವಾಗಿ ಉದ್ಯೋಗ ಕ್ಷೇತ್ರದಲ್ಲಿ ನೇಮಕಾತಿ ನಡೆಯುತ್ತಿಲ್ಲ’ ಎಂದು ಆರೋಪಿಸಿದರು.</p>.<p>‘ರಾಜ್ಯ ಸರ್ಕಾರದಲ್ಲಿ 2,73,386 ಮಂಜೂರಾದ ಖಾಲಿ ಹುದ್ದೆಗಳಿವೆ. ಈ ಹುದ್ದೆ ಭರ್ತಿ ಮಾಡದೆ ಒಳ ಮೀಸಲಾತಿ, ಜಾತಿ ಸಮೀಕ್ಷೆ ನೆಪವೊಡ್ಡಿ ನೇಮಕಾತಿಯನ್ನು ನಾಜೂಕಾಗಿ ಮುಂದಕ್ಕೆ ಹಾಕುವ ಸರ್ಕಾರ ಇದೆಲ್ಲದರ ಅಣಕದಂತೆ ಖಾಸಗಿ ಉದ್ಯೋಗ ಮೇಳವನ್ನು ಏರ್ಪಡಿಸುತ್ತಿದೆ’ ಎಂದು ಟೀಕಿಸಿದರು.</p>.<p>‘ವಿದ್ಯಾರ್ಥಿ ಯುವಜನರ ಕಷ್ಟವನ್ನು ಕೇಳುವ ಯಾವ ಹೋರಾಟಗಾರರೂ ಮಾಧ್ಯಮಗಳೂ, ಮುತ್ಸದ್ಧಿ ವ್ಯಕ್ತಿಗಳು ನಮಗೆ ಕಾಣುತ್ತಿಲ್ಲ. ಕೂಡಲೇ ಖಾಲಿಯಿರುವ ಹುದ್ದೆ ಭರ್ತಿ ಮಾಡಬೇಕು’ ಎಂದು ಆಗ್ರಹಿಸಿದರು.</p>.<p>ಸಂಶೋಧಕರಾದ ಪ್ರದೀಪ್ ಮುಮ್ಮಡಿ, ಶಿವಶಂಕರ್, ವಿಶ್ವಪ್ರಸಾದ್, ಕಾರ್ತಿಕ್, ಶರತ್ ಬಂಡಳ್ಳಿ, ರವಿ ಕೊಳ್ಳೆಗಾಲ, ವಿದ್ಯಾರ್ಥಿಗಳಾದ ಕೃಷ್ಣ ಗಣಿಗನೂರು, ಸತೀಶ್ ಹೊಸಕೋಟೆ, ನಾಗೇಂದ್ರ, ಚಿರಾಗ್, ಸುಮಂತ್, ನಿತಿನ್, ಶ್ವೇತಾ, ಜಯಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>