<p><strong>ಹುಣಸೂರು:</strong> ‘ರಾಜ್ಯ ರೈತ ಸಂಘ ತನ್ನ ಹೋರಾಟವನ್ನು ಗಾಂಧಿ ತತ್ವ ಆದರ್ಶ ಮಾರ್ಗದಲ್ಲಿ ದಶಕಗಳಿಂದ ಹೋರಾಟ ಮಾಡಿ ರೈತರಿಗೆ ನ್ಯಾಯಕೊಡಿಸುವಲ್ಲಿ ತೊಡಗಿದೆ’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಹೇಳಿದರು.</p>.<p>ತಾಲ್ಲೂಕಿನ ಕುಪ್ಪೆ ಗ್ರಾಮದಲ್ಲಿ ರೈತ ಸಂಘ ಉದ್ಘಾಟಿಸಿ ಮಾತನಾಡಿ, ‘ರೈತ ಸಂಘ ಹುಟ್ಟು ಪಡೆದಿರುವುದು ಅನ್ನದಾತರಿಗೆ ನ್ಯಾಯಕೊಡಿಸಲು. ರೈತರಿಗೆ ಮಾರುಕಟ್ಟೆಯಿಂದ ಪ್ರತಿಯೊಂದು ಹಂತದಲ್ಲೂ ಮೋಸವಾಗುತ್ತಿದೆ. ಈ ಬಗ್ಗೆ ರೈತ ಸಂಘಟನೆ ತೀವ್ರತರವಾದ ಹೋರಾಟ ನಡೆಸಿ ಇತ್ತೀಚಿಗೆ ವಾಣಿಜ್ಯ ಬೆಳೆ ಸೇರಿದಂತೆ ಇತರೆ ಆಹಾರ ಪದಾರ್ಥಗಳಿಗೆ ಬೆಂಬಲ ಬೆಲೆ ಸರ್ಕಾರ ನೀಡಿ ರೈತನ ಆರ್ಥಿಕ ಶಕ್ತಿ ದ್ವಿಗುಣವಾಗಲು ಪೂರಕವಾಗಿದೆ’ ಎಂದು ತಿಳಿಸಿದರು.</p>.<p>‘ರೈತ ಸಂಘದ ಒಗ್ಗಟ್ಟಿನ ಹೋರಾಟದ ಫಲ ಮತ್ತು ಗಾಂಧಿ ಅವರ ತತ್ವ ಆದರ್ಶವನ್ನು ರೈತ ಸಂಘ ಅಳವಡಿಸಿಕೊಳ್ಳಲಾಗಿ ನಮ್ಮ ಹೋರಾಟಕ್ಕೆ ಸರ್ಕಾರದ ಸ್ಪಂದನೆ ಸಿಕ್ಕಿದೆ’ ಎಂದರು.</p>.<p>ರೈತ ಸಂಘ ಹಲವು ವಿಷಯಗಳಲ್ಲಿ ಜಡ್ಡುಗಟ್ಟಿದ ಸರ್ಕಾರವನ್ನು ಬಡಿದೆಬ್ಬಿಸಲು ಉಗ್ರ ಹೋರಾಟ ನಡೆಸಿದ್ದರೂ, ಅದರಲ್ಲೂ ಗಾಂಧಿ ಅದರ್ಶ ಅಳವಡಿಸಿಕೊಳ್ಳಲಾಗಿದೆ. ರೈತ ಚಳವಳಿ ಮತ್ತು ಗಾಂಧಿ ಚಳವಳಿ ಎರಡೂ ಒಂದು ನಾಣ್ಯದ ಎರಡು ಮುಖವಿದ್ದಂತೆ ಎಂದು ತಿಳಿಸಿದರು.</p>.<p>ತಾಲ್ಲೂಕು ಘಟಕದ ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ಮಾತನಾಡಿದರು. ಬಸವರಾಜೇಗೌಡ, ಅಗ್ರಹಾರ ರಾಮೇಗೌಡ, ತಂಬಾಕು ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋದೂರು ಶಿವಣ್ಣ, ಗೌರವಾಧ್ಯಕ್ಷ ಚಂದ್ರೇಗೌಡ,ರವಿ.ಮಹೇಶ್, ಮಹದೇವು, ಶಂಕರ್, ಮಾದೇವು, ವೆಕಟೇಶ, ಗ್ರಾಮದ ಯಜಮಾನ ಅಣ್ಣೇಗೌಡ, ಕುಪ್ಪೆ ಗ್ರಾಮ ಘಟಕದ ಅಧ್ಯಕ್ಷ ದಶರಥ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು:</strong> ‘ರಾಜ್ಯ ರೈತ ಸಂಘ ತನ್ನ ಹೋರಾಟವನ್ನು ಗಾಂಧಿ ತತ್ವ ಆದರ್ಶ ಮಾರ್ಗದಲ್ಲಿ ದಶಕಗಳಿಂದ ಹೋರಾಟ ಮಾಡಿ ರೈತರಿಗೆ ನ್ಯಾಯಕೊಡಿಸುವಲ್ಲಿ ತೊಡಗಿದೆ’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಹೇಳಿದರು.</p>.<p>ತಾಲ್ಲೂಕಿನ ಕುಪ್ಪೆ ಗ್ರಾಮದಲ್ಲಿ ರೈತ ಸಂಘ ಉದ್ಘಾಟಿಸಿ ಮಾತನಾಡಿ, ‘ರೈತ ಸಂಘ ಹುಟ್ಟು ಪಡೆದಿರುವುದು ಅನ್ನದಾತರಿಗೆ ನ್ಯಾಯಕೊಡಿಸಲು. ರೈತರಿಗೆ ಮಾರುಕಟ್ಟೆಯಿಂದ ಪ್ರತಿಯೊಂದು ಹಂತದಲ್ಲೂ ಮೋಸವಾಗುತ್ತಿದೆ. ಈ ಬಗ್ಗೆ ರೈತ ಸಂಘಟನೆ ತೀವ್ರತರವಾದ ಹೋರಾಟ ನಡೆಸಿ ಇತ್ತೀಚಿಗೆ ವಾಣಿಜ್ಯ ಬೆಳೆ ಸೇರಿದಂತೆ ಇತರೆ ಆಹಾರ ಪದಾರ್ಥಗಳಿಗೆ ಬೆಂಬಲ ಬೆಲೆ ಸರ್ಕಾರ ನೀಡಿ ರೈತನ ಆರ್ಥಿಕ ಶಕ್ತಿ ದ್ವಿಗುಣವಾಗಲು ಪೂರಕವಾಗಿದೆ’ ಎಂದು ತಿಳಿಸಿದರು.</p>.<p>‘ರೈತ ಸಂಘದ ಒಗ್ಗಟ್ಟಿನ ಹೋರಾಟದ ಫಲ ಮತ್ತು ಗಾಂಧಿ ಅವರ ತತ್ವ ಆದರ್ಶವನ್ನು ರೈತ ಸಂಘ ಅಳವಡಿಸಿಕೊಳ್ಳಲಾಗಿ ನಮ್ಮ ಹೋರಾಟಕ್ಕೆ ಸರ್ಕಾರದ ಸ್ಪಂದನೆ ಸಿಕ್ಕಿದೆ’ ಎಂದರು.</p>.<p>ರೈತ ಸಂಘ ಹಲವು ವಿಷಯಗಳಲ್ಲಿ ಜಡ್ಡುಗಟ್ಟಿದ ಸರ್ಕಾರವನ್ನು ಬಡಿದೆಬ್ಬಿಸಲು ಉಗ್ರ ಹೋರಾಟ ನಡೆಸಿದ್ದರೂ, ಅದರಲ್ಲೂ ಗಾಂಧಿ ಅದರ್ಶ ಅಳವಡಿಸಿಕೊಳ್ಳಲಾಗಿದೆ. ರೈತ ಚಳವಳಿ ಮತ್ತು ಗಾಂಧಿ ಚಳವಳಿ ಎರಡೂ ಒಂದು ನಾಣ್ಯದ ಎರಡು ಮುಖವಿದ್ದಂತೆ ಎಂದು ತಿಳಿಸಿದರು.</p>.<p>ತಾಲ್ಲೂಕು ಘಟಕದ ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ಮಾತನಾಡಿದರು. ಬಸವರಾಜೇಗೌಡ, ಅಗ್ರಹಾರ ರಾಮೇಗೌಡ, ತಂಬಾಕು ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋದೂರು ಶಿವಣ್ಣ, ಗೌರವಾಧ್ಯಕ್ಷ ಚಂದ್ರೇಗೌಡ,ರವಿ.ಮಹೇಶ್, ಮಹದೇವು, ಶಂಕರ್, ಮಾದೇವು, ವೆಕಟೇಶ, ಗ್ರಾಮದ ಯಜಮಾನ ಅಣ್ಣೇಗೌಡ, ಕುಪ್ಪೆ ಗ್ರಾಮ ಘಟಕದ ಅಧ್ಯಕ್ಷ ದಶರಥ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>