<p><strong>ಮೈಸೂರು: ‘</strong>ದೇಶದ ಭೂ ಸ್ವರೂಪ ಹಾಗೂ ಪ್ರಾಕೃತಿಕ ಇತಿಹಾಸವು ಜ್ಞಾನದ ಗಣಿಯಾಗಿದ್ದು, ಹಿಮಾಲಯ, ಪರ್ಯಾಯ ಪ್ರಸ್ಥಭೂಮಿ, ಕರಾವಳಿಯು ಜೀವವೈವಿಧ್ಯದ ವಿಸ್ಮಯವಾಗಿದೆ’ ಎಂದು ಲೇಖಕ ಸ್ಟೀಫನ್ ಆಲ್ಟರ್ ಹೇಳಿದರು. </p>.<p>‘ಫಾರ್ ದ ಫಾರೆಸ್ಟ್’ ಗೋಷ್ಠಿಯಲ್ಲಿ ಮಾತನಾಡಿ, ‘ಜೀವವೈವಿಧ್ಯ ಅರಿಯಲು ವೈಜ್ಞಾನಿಕ ನಿರೂಪಣೆಯ ಜೊತೆಗೆ ಇಲ್ಲಿನ ಜಾನಪದ ಕಥನ, ಚಿತ್ರಕಲೆಗಳನ್ನು ನೋಡಬೇಕು. ಮಧ್ಯಪ್ರದೇಶದ ಭೀಮಬೆಡ್ಕ ಗುಹೆಯಲ್ಲಿ ಸಾವಿರಾರು ವರ್ಷಗಳ ಹಿಂದೆ ಚಿತ್ರಿಸಿದ ಚಿತ್ರಗಳು ದೇಶದ ವನ್ಯಪ್ರಾಣಿಗಳ ಸಮೃದ್ಧಿಯನ್ನು ಹೇಳುತ್ತದೆ. ಅಲ್ಲಿ ಬರೆಯಲಾದ ಕಾಡೆಮ್ಮೆ, ಈಗ ಆ ಪ್ರದೇಶದಿಂದಲೇ ಅಳಿದಿದೆ’ ಎಂದರು. </p>.<p>‘ಬೇಟೆಗಾರರೂ ಪ್ರಾಕೃತಿಕ ಇತಿಹಾಸ ತಿಳಿಯಲು ಕೊಡುಗೆ ನೀಡಿದ್ದಾರೆ. ಚಿತ್ರಕಲೆಯ ಜೊತೆಗೆ ಅವರಿಗಿದ್ದ ವನ್ಯಜೀವಿಗಳ ಕುರಿತ ಜ್ಞಾನ ಕುತೂಹಲಕಾರಿಯಾಗಿದೆ. ಪ್ರಾಣಿಗಳ ಸ್ವಭಾವ, ಗಾಳಿಯ ಭಾಷೆ, ವನ್ಯಜೀವಿಗಳು ತಮ್ಮ ಅಸ್ತಿತ್ವಕ್ಕಾಗಿ ಹೊರಡಿಸುವ ಧ್ವನಿಗಳು ಇವೆಲ್ಲದರ ಅರಿವು ಇರುತ್ತದೆ’ ಎಂದು ಹೇಳಿದರು. </p>.<p>‘ಮಾನವ– ವನ್ಯಜೀವಿ ಸಂಘರ್ಷವೂ ದಶಕಗಳಿಂದ ಹೆಚ್ಚಾಗುತ್ತಿದೆ. ಅದನ್ನು ತಪ್ಪಿಸಲು ಕಾರಿಡಾರ್ಗಳ ರಕ್ಷಣೆ ಆಗಬೇಕು’ ಎಂದರು. </p>.<h2>ಅಳಿವಿನಂಚಿಗೆ ಮಹಶೀರ್:</h2><p> ‘ಕಾವೇರಿ ನದಿಯಲ್ಲಿ ಕಾಣಸಿಗುವ ಮಹಶೀರ್ ಮೀನು ಅಳಿವಿನಂಚಿಗೆ ತಲುಪಿದೆ. ಮೀನುಗಾರಿಕೆ ಅಕ್ರಮವಾಗಿ ನಡೆಯುತ್ತಿದ್ದು, ನಾಡಬಾಂಬ್ ಸ್ಪೋಟಿಸಿ, ಸೆರೆ ಹಿಡಿಯಲಾಗುತ್ತಿದೆ. ಅವುಗಳ ರಕ್ಷಣೆ ಅಗತ್ಯವಾಗಿದೆ’ ಎಂದು ‘ವೈಲ್ಡ್ಲೈಫ್ ಅಸೋಸಿಯೇಷನ್ ಆಫ್ ಸೌತ್ ಇಂಡಿಯಾ’ದ ಸುಶೀಲ್ ಗ್ಯಾನ್ಚಂದ್ ಹೇಳಿದರು. </p>.<p>‘40ರ ದಶಕದಲ್ಲಿ ನಗರದಲ್ಲಿ ನೆಲೆಸಿದ್ದ ಆಸ್ಟ್ರೇಲಿಯಾದ ಮೂಲದ ‘ಟ್ಯಾಕ್ಸಿಡೆರ್ಮಿ’ ತಜ್ಞ ವ್ಯಾನ್ ಈಗನ್, ಸಂಗ್ರಹಿಸಿದ್ದ ‘ಮಹಶೀರ್’ ಅಸ್ತಿಪಂಜರವಿದೆ. ದೇಶದಲ್ಲಿನ 5 ಜಾತಿಯ ಮಹಶೀರ್ ಮೀನುಗಳಲ್ಲಿ ಹಂಪ್ಬ್ಯಾಕ್ ಮಹಶೀರ್ ಮೀನು ಕಾವೇರಿ ಹಾಗೂ ಉಪನದಿಗಳಲ್ಲಿ ಮಾತ್ರ ಕಾಣಸಿಗುತ್ತದೆ. ನದಿಯ ಆರೋಗ್ಯ ಕಾಪಾಡುವುದರೊಂದಿಗೆ ಹಾಗೂ ಬೇಟೆಯನ್ನು ತಪ್ಪಿಸಬೇಕಿದೆ’ ಎಂದು ಹೇಳಿದ ಅವರು, ‘ಶಾರ್ಪ್ ಶೂಟರ್’ ಆಗಿ, ನರಭಕ್ಷಕ ಹುಲಿಯನ್ನು ಕೊಂದ ಘಟನೆಯನ್ನೂ ವಿವರಿಸಿದರು. </p>.<p>‘ಬಂಡೀಪುರದ ಹೆಡಿಯಾಲ ಅರಣ್ಯ ವಲಯದಲ್ಲಿ ಹುಲಿಯೊಂದು ಹಲವು ಜನರನ್ನು ಕೊಂದಿತ್ತು. ವಯಸ್ಸಾದ ಕಾರಣ ಅದನ್ನು ಕೊಲ್ಲಲೇಬೇಕಾಗಿತ್ತು’ ಎಂದರು. </p>.<p>ಪ್ರಿಯಾ ದವೀದರ್ ಸಂವಾದ ನಡೆಸಿಕೊಟ್ಟರು. </p>.<div><div class="bigfact-title">ಪ್ರದರ್ಶನವೇ ಪ್ರಾರ್ಥನೆ: ಇಳಾ</div><div class="bigfact-description"> ‘ಹಾಡುವಾಗ ಅಭಿನಯಿಸುತ್ತೇನೆ. ಅಭಿನಯಿಸುವಾಗ ಹಾಡುತ್ತೇನೆ. ವೇದಿಕೆಯೇ ನನಗೆ ದೇಗುಲ ಪ್ರದರ್ಶನವೇ ಪ್ರಾರ್ಥನೆ’ ಎಂದು ಗಾಯಕಿ ಇಳಾ ಅರುಣ್ ಹೇಳಿದರು. ಲೇಖಕಿಯರಾದ ಅಂಜುಲಾ ಬೇಡಿ ಹಾಗೂ ರೀನಾ ಪೆರಿರಾ ಅವರೊಂದಿಗೆ ಆತ್ಮಕಥನ ‘ಪರ್ದೆ ಕೆ ಪೀಚೆ’ ಕುರಿತು ಮಾತನಾಡುತ್ತಾ ತಮ್ಮ ತಾಯಿಯನ್ನು ನೆನೆದರು. </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: ‘</strong>ದೇಶದ ಭೂ ಸ್ವರೂಪ ಹಾಗೂ ಪ್ರಾಕೃತಿಕ ಇತಿಹಾಸವು ಜ್ಞಾನದ ಗಣಿಯಾಗಿದ್ದು, ಹಿಮಾಲಯ, ಪರ್ಯಾಯ ಪ್ರಸ್ಥಭೂಮಿ, ಕರಾವಳಿಯು ಜೀವವೈವಿಧ್ಯದ ವಿಸ್ಮಯವಾಗಿದೆ’ ಎಂದು ಲೇಖಕ ಸ್ಟೀಫನ್ ಆಲ್ಟರ್ ಹೇಳಿದರು. </p>.<p>‘ಫಾರ್ ದ ಫಾರೆಸ್ಟ್’ ಗೋಷ್ಠಿಯಲ್ಲಿ ಮಾತನಾಡಿ, ‘ಜೀವವೈವಿಧ್ಯ ಅರಿಯಲು ವೈಜ್ಞಾನಿಕ ನಿರೂಪಣೆಯ ಜೊತೆಗೆ ಇಲ್ಲಿನ ಜಾನಪದ ಕಥನ, ಚಿತ್ರಕಲೆಗಳನ್ನು ನೋಡಬೇಕು. ಮಧ್ಯಪ್ರದೇಶದ ಭೀಮಬೆಡ್ಕ ಗುಹೆಯಲ್ಲಿ ಸಾವಿರಾರು ವರ್ಷಗಳ ಹಿಂದೆ ಚಿತ್ರಿಸಿದ ಚಿತ್ರಗಳು ದೇಶದ ವನ್ಯಪ್ರಾಣಿಗಳ ಸಮೃದ್ಧಿಯನ್ನು ಹೇಳುತ್ತದೆ. ಅಲ್ಲಿ ಬರೆಯಲಾದ ಕಾಡೆಮ್ಮೆ, ಈಗ ಆ ಪ್ರದೇಶದಿಂದಲೇ ಅಳಿದಿದೆ’ ಎಂದರು. </p>.<p>‘ಬೇಟೆಗಾರರೂ ಪ್ರಾಕೃತಿಕ ಇತಿಹಾಸ ತಿಳಿಯಲು ಕೊಡುಗೆ ನೀಡಿದ್ದಾರೆ. ಚಿತ್ರಕಲೆಯ ಜೊತೆಗೆ ಅವರಿಗಿದ್ದ ವನ್ಯಜೀವಿಗಳ ಕುರಿತ ಜ್ಞಾನ ಕುತೂಹಲಕಾರಿಯಾಗಿದೆ. ಪ್ರಾಣಿಗಳ ಸ್ವಭಾವ, ಗಾಳಿಯ ಭಾಷೆ, ವನ್ಯಜೀವಿಗಳು ತಮ್ಮ ಅಸ್ತಿತ್ವಕ್ಕಾಗಿ ಹೊರಡಿಸುವ ಧ್ವನಿಗಳು ಇವೆಲ್ಲದರ ಅರಿವು ಇರುತ್ತದೆ’ ಎಂದು ಹೇಳಿದರು. </p>.<p>‘ಮಾನವ– ವನ್ಯಜೀವಿ ಸಂಘರ್ಷವೂ ದಶಕಗಳಿಂದ ಹೆಚ್ಚಾಗುತ್ತಿದೆ. ಅದನ್ನು ತಪ್ಪಿಸಲು ಕಾರಿಡಾರ್ಗಳ ರಕ್ಷಣೆ ಆಗಬೇಕು’ ಎಂದರು. </p>.<h2>ಅಳಿವಿನಂಚಿಗೆ ಮಹಶೀರ್:</h2><p> ‘ಕಾವೇರಿ ನದಿಯಲ್ಲಿ ಕಾಣಸಿಗುವ ಮಹಶೀರ್ ಮೀನು ಅಳಿವಿನಂಚಿಗೆ ತಲುಪಿದೆ. ಮೀನುಗಾರಿಕೆ ಅಕ್ರಮವಾಗಿ ನಡೆಯುತ್ತಿದ್ದು, ನಾಡಬಾಂಬ್ ಸ್ಪೋಟಿಸಿ, ಸೆರೆ ಹಿಡಿಯಲಾಗುತ್ತಿದೆ. ಅವುಗಳ ರಕ್ಷಣೆ ಅಗತ್ಯವಾಗಿದೆ’ ಎಂದು ‘ವೈಲ್ಡ್ಲೈಫ್ ಅಸೋಸಿಯೇಷನ್ ಆಫ್ ಸೌತ್ ಇಂಡಿಯಾ’ದ ಸುಶೀಲ್ ಗ್ಯಾನ್ಚಂದ್ ಹೇಳಿದರು. </p>.<p>‘40ರ ದಶಕದಲ್ಲಿ ನಗರದಲ್ಲಿ ನೆಲೆಸಿದ್ದ ಆಸ್ಟ್ರೇಲಿಯಾದ ಮೂಲದ ‘ಟ್ಯಾಕ್ಸಿಡೆರ್ಮಿ’ ತಜ್ಞ ವ್ಯಾನ್ ಈಗನ್, ಸಂಗ್ರಹಿಸಿದ್ದ ‘ಮಹಶೀರ್’ ಅಸ್ತಿಪಂಜರವಿದೆ. ದೇಶದಲ್ಲಿನ 5 ಜಾತಿಯ ಮಹಶೀರ್ ಮೀನುಗಳಲ್ಲಿ ಹಂಪ್ಬ್ಯಾಕ್ ಮಹಶೀರ್ ಮೀನು ಕಾವೇರಿ ಹಾಗೂ ಉಪನದಿಗಳಲ್ಲಿ ಮಾತ್ರ ಕಾಣಸಿಗುತ್ತದೆ. ನದಿಯ ಆರೋಗ್ಯ ಕಾಪಾಡುವುದರೊಂದಿಗೆ ಹಾಗೂ ಬೇಟೆಯನ್ನು ತಪ್ಪಿಸಬೇಕಿದೆ’ ಎಂದು ಹೇಳಿದ ಅವರು, ‘ಶಾರ್ಪ್ ಶೂಟರ್’ ಆಗಿ, ನರಭಕ್ಷಕ ಹುಲಿಯನ್ನು ಕೊಂದ ಘಟನೆಯನ್ನೂ ವಿವರಿಸಿದರು. </p>.<p>‘ಬಂಡೀಪುರದ ಹೆಡಿಯಾಲ ಅರಣ್ಯ ವಲಯದಲ್ಲಿ ಹುಲಿಯೊಂದು ಹಲವು ಜನರನ್ನು ಕೊಂದಿತ್ತು. ವಯಸ್ಸಾದ ಕಾರಣ ಅದನ್ನು ಕೊಲ್ಲಲೇಬೇಕಾಗಿತ್ತು’ ಎಂದರು. </p>.<p>ಪ್ರಿಯಾ ದವೀದರ್ ಸಂವಾದ ನಡೆಸಿಕೊಟ್ಟರು. </p>.<div><div class="bigfact-title">ಪ್ರದರ್ಶನವೇ ಪ್ರಾರ್ಥನೆ: ಇಳಾ</div><div class="bigfact-description"> ‘ಹಾಡುವಾಗ ಅಭಿನಯಿಸುತ್ತೇನೆ. ಅಭಿನಯಿಸುವಾಗ ಹಾಡುತ್ತೇನೆ. ವೇದಿಕೆಯೇ ನನಗೆ ದೇಗುಲ ಪ್ರದರ್ಶನವೇ ಪ್ರಾರ್ಥನೆ’ ಎಂದು ಗಾಯಕಿ ಇಳಾ ಅರುಣ್ ಹೇಳಿದರು. ಲೇಖಕಿಯರಾದ ಅಂಜುಲಾ ಬೇಡಿ ಹಾಗೂ ರೀನಾ ಪೆರಿರಾ ಅವರೊಂದಿಗೆ ಆತ್ಮಕಥನ ‘ಪರ್ದೆ ಕೆ ಪೀಚೆ’ ಕುರಿತು ಮಾತನಾಡುತ್ತಾ ತಮ್ಮ ತಾಯಿಯನ್ನು ನೆನೆದರು. </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>