<p>ಮೈಸೂರು: ‘ಮೊಗಳ್ಳಿ ಗಣೇಶ ಅವರ ಬುಗುರಿ ಜಗತ್ತಿನ ಶ್ರೇಷ್ಠ ಕಥೆಯಲ್ಲೊಂದು. ಶತಮಾನಗಳಿಂದ ಎಲ್ಲ ಸಮುದಾಯಗಳಲ್ಲಿರುವ ಕ್ರೌರ್ಯಕ್ಕೆ ಬುಗುರಿಯು ಸಂಕೇತವಾಗಿದೆ’ ಎಂದು ವಿಮರ್ಶಕ ಪ್ರೊ.ಕೃಷ್ಣಮೂರ್ತಿ ಹನೂರು ಹೇಳಿದರು.</p>.<p>ರಂಗಾಯಣದ ಶ್ರೀರಂಗದಲ್ಲಿ ‘ಮೈಸೂರು ವಿವಿಧ ರಂಗಸಂಘಟನೆಗಳ ಒಕ್ಕೂಟ’ ಮತ್ತು ‘ಪ್ರೊ.ಮೊಗಳ್ಳಿ ಗಣೇಶ್ ಸಾಹಿತ್ಯಾಭಿಮಾನಿ ಬಳಗ’ ಹಾಗೂ ಮೈಸೂರು ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗವು ಮಂಗಳವಾರ ಆಯೋಜಿಸಿದ್ದ ಮೊಗಳ್ಳಿ ಗಣೇಶ್ ನುಡಿನಮನದಲ್ಲಿ ಮಾತನಾಡಿದರು. </p>.<p>‘ಹೊಲಸಿನಲ್ಲಿ ಬಿದ್ದ ಬುಗುರಿ, ಮತ್ತೆ ಕೈಗೆ ಬರುವುದೆಂಬ ಕನಸು ಕಾಣುವ ಬುಗುರಿ ಕಥೆಯ ಹುಡುಗನಂತೆ ಗಣೇಶ ಇದ್ದರು. ಆ ಕಲಾತ್ಮಕ ಕಥೆ ಬರೆದಾಗ ಅವರಿಗೆ 25 ವರ್ಷವಷ್ಟೇ. ಕ್ರೌರ್ಯ ನೋಡಿದ ಕಥೆಯಲ್ಲಿನ ಹುಡುಗ ‘ನಮ್ಮವ್ವನ ಹೊಟ್ಟೆ ಒಳಗೆ ಹೋಗಿ ಕುಳಿತುಕೊಳ್ಳಬೇಕು’ ಎನ್ನುತ್ತಾನೆ. ಇದೇ ಮಾತನ್ನು ಕುಮಾರವ್ಯಾಸನೂ ಹೇಳಿದ್ದ. ಮೊಗಳ್ಳಿ ಮತ್ತು ಕುಮಾರವ್ಯಾಸ ಇಬ್ಬರ ಪ್ರತಿಭೆಯೂ ಒಂದೇ ಆಗಿತ್ತು’ ಎಂದು ಬಣ್ಣಿಸಿದರು. </p>.<p>‘ಯುದ್ಧರಂಗದಲ್ಲಿ ಎಲ್ಲ ಸಾವು– ನೋವು, ಕ್ರೌರ್ಯವನ್ನು ನೋಡುತ್ತಾ ಅಡ್ಡಾಡುವ ಅಶಾಂತ ಸೈನಿಕನಂತೆ ಗಣೇಶ ಕಾಣುತ್ತಿದ್ದರು. ಎಲ್ಲವನ್ನು ಅಕ್ಷರ ರೂಪಕ್ಕೆ ಇಳಿಸುವ ಪ್ರತಿಭಾನ್ವಿತ ಕಥೆಗಾರನೂ ಆಗಿದ್ದರು’ ಎಂದರು. </p>.<p>ವಿಮರ್ಶಕ ಪ್ರೊ.ಕಾಳೇಗೌಡ ನಾಗವಾರ, ‘ದಮನಿತ ಸಮುದಾಯಗಳ ದನಿಯಾಗಿದ್ದ ಮೊಗಳ್ಳಿ ಮೇಲೆ ಲಂಕೇಶ್ ಅವರಿಗೆ ಅಗಾಧ ಪ್ರೀತಿ ಇತ್ತು. ಕಥೆಗಳಲ್ಲಿ ಪ್ರತಿ ಪದವು ಹೊರಡಿಸುವ ಧ್ವನಿಯಲ್ಲಿ ಒಳನೋಟ ಇರುತ್ತಿತ್ತು’ ಎಂದರು. </p>.<p>ರಂಗಕರ್ಮಿ ಸಿ.ಬಸವಲಿಂಗಯ್ಯ, ‘ಅವರು ದಲಿತ ಅಸ್ಮಿತೆಯ ಪ್ರತೀಕ. ತಕರಾರಿನ ಜನಸಂಸ್ಕೃತಿಯ ಚಿಂತಕರಾಗಿದ್ದರು. ದಲಿತ ಜಾನಪದ ಲೋಕವನ್ನು ಸಾಹಿತ್ಯದಲ್ಲಿ ದಾಖಲಿಸಿದ್ದರು. ವ್ಯವಸ್ಥೆ ಬಗ್ಗೆ ಅಸಾಧ್ಯ ಸಿಟ್ಟು ಇತ್ತು. ಹೀಗಾಗಿ ಅವರ ಮೇಲೆ ವೈಯಕ್ತಿಕ ಅಸಹನೆ ಉಳ್ಳವರೂ, ನಾಜೂಕಯ್ಯಗಳು, ವೈರಿಗಳು ಇದ್ದರು’ ಎಂದರು. </p>.<p>ಸಂಬಂಧಿ ಧನಂಜಯ ಎಲಿಯೂರು, ಪ್ರಸಾರಾಂಗ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಪತ್ರಕರ್ತ ಜಿ.ಪಿ.ಬಸವರಾಜ್, ರವಿಕುಮಾರ್ ಬಾಗಿ, ಸ್ವಾಮಿ ಆನಂದ್, ಪ್ರೊ.ರಾಜಪ್ಪ ದಳವಾಯಿ ಮಾತನಾಡಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ ಪಾಲ್ಗೊಂಡಿದ್ದರು.</p>. <p> <strong>‘ಸುಲಭದಲ್ಲಿ ಅರ್ಥವಾಗದು’</strong> </p><p> ‘ಮೊಗಳ್ಳಿ ಕಥೆಗಳಿಗೆ ಬೂಕರ್ ಪ್ರಶಸ್ತಿ ಬರುವುದಿಲ್ಲ. ಅನುವಾದ ಮಾಡಿದರೂ ಪಾಶ್ಚಾತ್ಯರಿಗೆ ಸುಲಭವಾಗಿ ಅರ್ಥವಾಗುವುದಿಲ್ಲ. ಇಂಗ್ಲಿಷ್ಗೆ ಕಥೆಗಳ ಸಂವೇದನೆಯನ್ನು ದಾಟಿಸಲು ಆಗದು’ ಎಂದು ಕೃಷ್ಣಮೂರ್ತಿ ಹನೂರು ಹೇಳಿದರು. ‘ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಪ್ರಶಸ್ತಿಗಳು ಬರದಿರಲು ಸಾಹಿತ್ಯ ವಲಯದ ಗುಂಪುಗಾರಿಕೆ ಕಾರಣ. ಆ ತರಹದ ಕಥೆಗಾರ ಮತ್ತೆ ಸಿಗುವುದು ಕಷ್ಟ. ಸಹೋದರನಂತೆ ನನ್ನೊಂದಿಗೆ ಮಾತನಾಡುತ್ತಿದ್ದರು’ ಎಂದು ನೆನಪು ಮಾಡಿಕೊಂಡರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಮೊಗಳ್ಳಿ ಗಣೇಶ ಅವರ ಬುಗುರಿ ಜಗತ್ತಿನ ಶ್ರೇಷ್ಠ ಕಥೆಯಲ್ಲೊಂದು. ಶತಮಾನಗಳಿಂದ ಎಲ್ಲ ಸಮುದಾಯಗಳಲ್ಲಿರುವ ಕ್ರೌರ್ಯಕ್ಕೆ ಬುಗುರಿಯು ಸಂಕೇತವಾಗಿದೆ’ ಎಂದು ವಿಮರ್ಶಕ ಪ್ರೊ.ಕೃಷ್ಣಮೂರ್ತಿ ಹನೂರು ಹೇಳಿದರು.</p>.<p>ರಂಗಾಯಣದ ಶ್ರೀರಂಗದಲ್ಲಿ ‘ಮೈಸೂರು ವಿವಿಧ ರಂಗಸಂಘಟನೆಗಳ ಒಕ್ಕೂಟ’ ಮತ್ತು ‘ಪ್ರೊ.ಮೊಗಳ್ಳಿ ಗಣೇಶ್ ಸಾಹಿತ್ಯಾಭಿಮಾನಿ ಬಳಗ’ ಹಾಗೂ ಮೈಸೂರು ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗವು ಮಂಗಳವಾರ ಆಯೋಜಿಸಿದ್ದ ಮೊಗಳ್ಳಿ ಗಣೇಶ್ ನುಡಿನಮನದಲ್ಲಿ ಮಾತನಾಡಿದರು. </p>.<p>‘ಹೊಲಸಿನಲ್ಲಿ ಬಿದ್ದ ಬುಗುರಿ, ಮತ್ತೆ ಕೈಗೆ ಬರುವುದೆಂಬ ಕನಸು ಕಾಣುವ ಬುಗುರಿ ಕಥೆಯ ಹುಡುಗನಂತೆ ಗಣೇಶ ಇದ್ದರು. ಆ ಕಲಾತ್ಮಕ ಕಥೆ ಬರೆದಾಗ ಅವರಿಗೆ 25 ವರ್ಷವಷ್ಟೇ. ಕ್ರೌರ್ಯ ನೋಡಿದ ಕಥೆಯಲ್ಲಿನ ಹುಡುಗ ‘ನಮ್ಮವ್ವನ ಹೊಟ್ಟೆ ಒಳಗೆ ಹೋಗಿ ಕುಳಿತುಕೊಳ್ಳಬೇಕು’ ಎನ್ನುತ್ತಾನೆ. ಇದೇ ಮಾತನ್ನು ಕುಮಾರವ್ಯಾಸನೂ ಹೇಳಿದ್ದ. ಮೊಗಳ್ಳಿ ಮತ್ತು ಕುಮಾರವ್ಯಾಸ ಇಬ್ಬರ ಪ್ರತಿಭೆಯೂ ಒಂದೇ ಆಗಿತ್ತು’ ಎಂದು ಬಣ್ಣಿಸಿದರು. </p>.<p>‘ಯುದ್ಧರಂಗದಲ್ಲಿ ಎಲ್ಲ ಸಾವು– ನೋವು, ಕ್ರೌರ್ಯವನ್ನು ನೋಡುತ್ತಾ ಅಡ್ಡಾಡುವ ಅಶಾಂತ ಸೈನಿಕನಂತೆ ಗಣೇಶ ಕಾಣುತ್ತಿದ್ದರು. ಎಲ್ಲವನ್ನು ಅಕ್ಷರ ರೂಪಕ್ಕೆ ಇಳಿಸುವ ಪ್ರತಿಭಾನ್ವಿತ ಕಥೆಗಾರನೂ ಆಗಿದ್ದರು’ ಎಂದರು. </p>.<p>ವಿಮರ್ಶಕ ಪ್ರೊ.ಕಾಳೇಗೌಡ ನಾಗವಾರ, ‘ದಮನಿತ ಸಮುದಾಯಗಳ ದನಿಯಾಗಿದ್ದ ಮೊಗಳ್ಳಿ ಮೇಲೆ ಲಂಕೇಶ್ ಅವರಿಗೆ ಅಗಾಧ ಪ್ರೀತಿ ಇತ್ತು. ಕಥೆಗಳಲ್ಲಿ ಪ್ರತಿ ಪದವು ಹೊರಡಿಸುವ ಧ್ವನಿಯಲ್ಲಿ ಒಳನೋಟ ಇರುತ್ತಿತ್ತು’ ಎಂದರು. </p>.<p>ರಂಗಕರ್ಮಿ ಸಿ.ಬಸವಲಿಂಗಯ್ಯ, ‘ಅವರು ದಲಿತ ಅಸ್ಮಿತೆಯ ಪ್ರತೀಕ. ತಕರಾರಿನ ಜನಸಂಸ್ಕೃತಿಯ ಚಿಂತಕರಾಗಿದ್ದರು. ದಲಿತ ಜಾನಪದ ಲೋಕವನ್ನು ಸಾಹಿತ್ಯದಲ್ಲಿ ದಾಖಲಿಸಿದ್ದರು. ವ್ಯವಸ್ಥೆ ಬಗ್ಗೆ ಅಸಾಧ್ಯ ಸಿಟ್ಟು ಇತ್ತು. ಹೀಗಾಗಿ ಅವರ ಮೇಲೆ ವೈಯಕ್ತಿಕ ಅಸಹನೆ ಉಳ್ಳವರೂ, ನಾಜೂಕಯ್ಯಗಳು, ವೈರಿಗಳು ಇದ್ದರು’ ಎಂದರು. </p>.<p>ಸಂಬಂಧಿ ಧನಂಜಯ ಎಲಿಯೂರು, ಪ್ರಸಾರಾಂಗ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಪತ್ರಕರ್ತ ಜಿ.ಪಿ.ಬಸವರಾಜ್, ರವಿಕುಮಾರ್ ಬಾಗಿ, ಸ್ವಾಮಿ ಆನಂದ್, ಪ್ರೊ.ರಾಜಪ್ಪ ದಳವಾಯಿ ಮಾತನಾಡಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ ಪಾಲ್ಗೊಂಡಿದ್ದರು.</p>. <p> <strong>‘ಸುಲಭದಲ್ಲಿ ಅರ್ಥವಾಗದು’</strong> </p><p> ‘ಮೊಗಳ್ಳಿ ಕಥೆಗಳಿಗೆ ಬೂಕರ್ ಪ್ರಶಸ್ತಿ ಬರುವುದಿಲ್ಲ. ಅನುವಾದ ಮಾಡಿದರೂ ಪಾಶ್ಚಾತ್ಯರಿಗೆ ಸುಲಭವಾಗಿ ಅರ್ಥವಾಗುವುದಿಲ್ಲ. ಇಂಗ್ಲಿಷ್ಗೆ ಕಥೆಗಳ ಸಂವೇದನೆಯನ್ನು ದಾಟಿಸಲು ಆಗದು’ ಎಂದು ಕೃಷ್ಣಮೂರ್ತಿ ಹನೂರು ಹೇಳಿದರು. ‘ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಪ್ರಶಸ್ತಿಗಳು ಬರದಿರಲು ಸಾಹಿತ್ಯ ವಲಯದ ಗುಂಪುಗಾರಿಕೆ ಕಾರಣ. ಆ ತರಹದ ಕಥೆಗಾರ ಮತ್ತೆ ಸಿಗುವುದು ಕಷ್ಟ. ಸಹೋದರನಂತೆ ನನ್ನೊಂದಿಗೆ ಮಾತನಾಡುತ್ತಿದ್ದರು’ ಎಂದು ನೆನಪು ಮಾಡಿಕೊಂಡರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>