<p><strong>ಮೈಸೂರು</strong>: ಈ ಬಾರಿಯ ದಸರೆಯಲ್ಲಿ ಸಾಂಸ್ಕೃತಿಕ ನಗರಿಗೆ ದಾಖಲೆಯ ಸಂಖ್ಯೆಯಲ್ಲಿ ಪ್ರಯಾಣಿಕರು ಬಂದಿದ್ದು, ಕೆಎಸ್ಆರ್ಟಿಸಿಗೆ ಬರೋಬ್ಬರಿ ₹7.5 ಕೋಟಿ ಆದಾಯ ತಂದುಕೊಟ್ಟಿದೆ.</p>.<p>ವರ್ಷದಿಂದ ವರ್ಷಕ್ಕೆ ದಸರೆಗೆ ಬರುವವರ ಸಂಖ್ಯೆ ದುಪ್ಪಟ್ಟಾಗುತ್ತಿದ್ದು, ಶಕ್ತಿ ಯೋಜನೆ ಜಾರಿಯಾದಾಗಿನಿಂದ ಇದು ಇನ್ನಷ್ಟು ಹೆಚ್ಚಿದೆ. ಕಳೆದ ವರ್ಷ ದಸರೆಯ ಅವಧಿಯಲ್ಲಿ ಕೆಎಸ್ಆರ್ಟಿಸಿ ಮೈಸೂರು ಘಟಕವು ₹4.84 ಕೋಟಿ ಆದಾಯ ಗಳಿಸಿತ್ತು. ಈ ವರ್ಷ ಸೆ. 25ರಿಂದ ಅಕ್ಟೋಬರ್ 3ರವರೆಗೂ ಹೆಚ್ಚುವರಿ ಬಸ್ ಸೇವೆ ಒದಗಿಸಿದ್ದು, ಶೇ 80ರಷ್ಟು ಆದಾಯ ವೃದ್ಧಿಯಾಗಿದೆ. ಪ್ರಯಾಣಿಕರಲ್ಲಿ ಮಹಿಳೆಯರೇ ಹೆಚ್ಚಿದ್ದು, ಒಟ್ಟಾರೆ ಅಂಕಿ–ಸಂಖ್ಯೆ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.</p>.<p>‘ವಿಜಯದಶಮಿಯ ಮರು ದಿನದಂದು (ಅ.3) ಅತಿ ಹೆಚ್ಚು ಮಂದಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸಿದ್ದಾರೆ. ನಂತರದ ಭಾನುವಾರವೂ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಈ ದಿನಗಳಲ್ಲಿ ಹಿಂದಿನ ವರ್ಷ ಸರಾಸರಿ ₹1.84 ಕೋಟಿ ಆದಾಯವಿದ್ದರೆ, ಈ ವರ್ಷ ₹2 ಕೋಟಿ ದಾಟಿದೆ’ ಎಂದು ಕೆಎಸ್ಆರ್ಟಿಸಿ ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p>‘ಈ ಬಾರಿಯ ನವರಾತ್ರಿ ಸಂದರ್ಭ ಕಳೆದ ವರ್ಷದಷ್ಟೇ ಸಂಖ್ಯೆಯ ಬಸ್ಗಳು ಕಾರ್ಯಾಚರಣೆಗೆ ಇಳಿದಿದ್ದವು. ಆದಾಗ್ಯೂ ಉತ್ತಮ ಆದಾಯ ಬಂದಿದೆ. ಒಟ್ಟು ಪ್ರಯಾಣಿಕರ ಸಂಖ್ಯೆಯನ್ನು ಇನ್ನಷ್ಟೇ ಲೆಕ್ಕ ಹಾಕಬೇಕಿದೆ’ ಎಂದರು.</p>.<p><strong>600 ಹೆಚ್ಚುವರಿ ಬಸ್</strong></p><p>ದಸರೆಯಲ್ಲಿ ಪ್ರಯಾಣಿಕರ ಸಂದಣಿ ನಿಯಂತ್ರಿಸಲು ಕೆಎಸ್ಆರ್ಟಿಸಿಯು ಈ ವರ್ಷ 600 ಹೆಚ್ಚುವರಿ ಬಸ್ಗಳ ಸೇವೆ ಒದಗಿಸಿತ್ತು. ಮೈಸೂರು ಘಟಕದಿಂದ 350 ಹಾಗೂ ಬೆಂಗಳೂರು ಘಟಕದಿಂದ 250 ಹೆಚ್ಚುವರಿ ಬಸ್ಗಳು ಸಂಚರಿಸಿದ್ದವು.</p>.<p>ಬೆಂಗಳೂರು–ಮೈಸೂರು ನಡುವೆ ಸಾಮಾನ್ಯ ದಿನಗಳಲ್ಲಿ 270 ಬಸ್ಗಳು ದಿನಕ್ಕೆ ತಲಾ ಎರಡು ಟ್ರಿಪ್ನಂತೆ ಸಂಚರಿಸಿದರೆ, ದಸರೆ ವೇಳೆ 150 ಬಸ್ಗಳು ಹೆಚ್ಚುವರಿಯಾಗಿ ಓಡಾಡಿದ್ದವು. ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದಲೂ ಪ್ರವಾಸಿಗರು ಬಂದಿದ್ದರು. ಇನ್ನೂ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ.</p>.<p>ದಸರೆಯ ಸಂದರ್ಭ ಹೊರ ಜಿಲ್ಲೆಗಳ ಪ್ರವಾಸಿಗರಿಗಾಗಿ ಜಲದರ್ಶಿನಿ, ಗಿರಿದರ್ಶಿನಿ, ದೇವ ದರ್ಶಿನಿ ಎಂಬ ವಿಶೇಷ ಟೂರ್ ಪ್ಯಾಕೇಜ್ಗಳನ್ನು ಪರಿಚಯಿಸಿದ್ದು, ಅದಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.</p>.<div><blockquote>ಈ ಬಾರಿ ದಸರೆಯಲ್ಲಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ದಾಖಲೆ ಸಂಖ್ಯೆಯಲ್ಲಿ ಜನರು ಪ್ರಯಾಣಿಸಿದ್ದು ₹7.5 ಕೋಟಿ ಆದಾಯ ಸಂಗ್ರಹವಾಗಿದೆ. ಒಟ್ಟು ಪ್ರಯಾಣಿಕರ ಸಂಖ್ಯೆ ಇನ್ನಷ್ಟೇ ಸಿಗಬೇಕಿದೆ.</blockquote><span class="attribution">– ಶ್ರೀನಿವಾಸ್, ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್ಆರ್ಟಿಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಈ ಬಾರಿಯ ದಸರೆಯಲ್ಲಿ ಸಾಂಸ್ಕೃತಿಕ ನಗರಿಗೆ ದಾಖಲೆಯ ಸಂಖ್ಯೆಯಲ್ಲಿ ಪ್ರಯಾಣಿಕರು ಬಂದಿದ್ದು, ಕೆಎಸ್ಆರ್ಟಿಸಿಗೆ ಬರೋಬ್ಬರಿ ₹7.5 ಕೋಟಿ ಆದಾಯ ತಂದುಕೊಟ್ಟಿದೆ.</p>.<p>ವರ್ಷದಿಂದ ವರ್ಷಕ್ಕೆ ದಸರೆಗೆ ಬರುವವರ ಸಂಖ್ಯೆ ದುಪ್ಪಟ್ಟಾಗುತ್ತಿದ್ದು, ಶಕ್ತಿ ಯೋಜನೆ ಜಾರಿಯಾದಾಗಿನಿಂದ ಇದು ಇನ್ನಷ್ಟು ಹೆಚ್ಚಿದೆ. ಕಳೆದ ವರ್ಷ ದಸರೆಯ ಅವಧಿಯಲ್ಲಿ ಕೆಎಸ್ಆರ್ಟಿಸಿ ಮೈಸೂರು ಘಟಕವು ₹4.84 ಕೋಟಿ ಆದಾಯ ಗಳಿಸಿತ್ತು. ಈ ವರ್ಷ ಸೆ. 25ರಿಂದ ಅಕ್ಟೋಬರ್ 3ರವರೆಗೂ ಹೆಚ್ಚುವರಿ ಬಸ್ ಸೇವೆ ಒದಗಿಸಿದ್ದು, ಶೇ 80ರಷ್ಟು ಆದಾಯ ವೃದ್ಧಿಯಾಗಿದೆ. ಪ್ರಯಾಣಿಕರಲ್ಲಿ ಮಹಿಳೆಯರೇ ಹೆಚ್ಚಿದ್ದು, ಒಟ್ಟಾರೆ ಅಂಕಿ–ಸಂಖ್ಯೆ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.</p>.<p>‘ವಿಜಯದಶಮಿಯ ಮರು ದಿನದಂದು (ಅ.3) ಅತಿ ಹೆಚ್ಚು ಮಂದಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸಿದ್ದಾರೆ. ನಂತರದ ಭಾನುವಾರವೂ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಈ ದಿನಗಳಲ್ಲಿ ಹಿಂದಿನ ವರ್ಷ ಸರಾಸರಿ ₹1.84 ಕೋಟಿ ಆದಾಯವಿದ್ದರೆ, ಈ ವರ್ಷ ₹2 ಕೋಟಿ ದಾಟಿದೆ’ ಎಂದು ಕೆಎಸ್ಆರ್ಟಿಸಿ ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p>‘ಈ ಬಾರಿಯ ನವರಾತ್ರಿ ಸಂದರ್ಭ ಕಳೆದ ವರ್ಷದಷ್ಟೇ ಸಂಖ್ಯೆಯ ಬಸ್ಗಳು ಕಾರ್ಯಾಚರಣೆಗೆ ಇಳಿದಿದ್ದವು. ಆದಾಗ್ಯೂ ಉತ್ತಮ ಆದಾಯ ಬಂದಿದೆ. ಒಟ್ಟು ಪ್ರಯಾಣಿಕರ ಸಂಖ್ಯೆಯನ್ನು ಇನ್ನಷ್ಟೇ ಲೆಕ್ಕ ಹಾಕಬೇಕಿದೆ’ ಎಂದರು.</p>.<p><strong>600 ಹೆಚ್ಚುವರಿ ಬಸ್</strong></p><p>ದಸರೆಯಲ್ಲಿ ಪ್ರಯಾಣಿಕರ ಸಂದಣಿ ನಿಯಂತ್ರಿಸಲು ಕೆಎಸ್ಆರ್ಟಿಸಿಯು ಈ ವರ್ಷ 600 ಹೆಚ್ಚುವರಿ ಬಸ್ಗಳ ಸೇವೆ ಒದಗಿಸಿತ್ತು. ಮೈಸೂರು ಘಟಕದಿಂದ 350 ಹಾಗೂ ಬೆಂಗಳೂರು ಘಟಕದಿಂದ 250 ಹೆಚ್ಚುವರಿ ಬಸ್ಗಳು ಸಂಚರಿಸಿದ್ದವು.</p>.<p>ಬೆಂಗಳೂರು–ಮೈಸೂರು ನಡುವೆ ಸಾಮಾನ್ಯ ದಿನಗಳಲ್ಲಿ 270 ಬಸ್ಗಳು ದಿನಕ್ಕೆ ತಲಾ ಎರಡು ಟ್ರಿಪ್ನಂತೆ ಸಂಚರಿಸಿದರೆ, ದಸರೆ ವೇಳೆ 150 ಬಸ್ಗಳು ಹೆಚ್ಚುವರಿಯಾಗಿ ಓಡಾಡಿದ್ದವು. ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದಲೂ ಪ್ರವಾಸಿಗರು ಬಂದಿದ್ದರು. ಇನ್ನೂ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ.</p>.<p>ದಸರೆಯ ಸಂದರ್ಭ ಹೊರ ಜಿಲ್ಲೆಗಳ ಪ್ರವಾಸಿಗರಿಗಾಗಿ ಜಲದರ್ಶಿನಿ, ಗಿರಿದರ್ಶಿನಿ, ದೇವ ದರ್ಶಿನಿ ಎಂಬ ವಿಶೇಷ ಟೂರ್ ಪ್ಯಾಕೇಜ್ಗಳನ್ನು ಪರಿಚಯಿಸಿದ್ದು, ಅದಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.</p>.<div><blockquote>ಈ ಬಾರಿ ದಸರೆಯಲ್ಲಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ದಾಖಲೆ ಸಂಖ್ಯೆಯಲ್ಲಿ ಜನರು ಪ್ರಯಾಣಿಸಿದ್ದು ₹7.5 ಕೋಟಿ ಆದಾಯ ಸಂಗ್ರಹವಾಗಿದೆ. ಒಟ್ಟು ಪ್ರಯಾಣಿಕರ ಸಂಖ್ಯೆ ಇನ್ನಷ್ಟೇ ಸಿಗಬೇಕಿದೆ.</blockquote><span class="attribution">– ಶ್ರೀನಿವಾಸ್, ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್ಆರ್ಟಿಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>