<p><strong>ಮೈಸೂರು:</strong> ಚಾಮರಾಜೇಂದ್ರ ಮೃಗಾಲಯಕ್ಕೆ ದಸರಾ ಸಮಯದಲ್ಲಿ ಜನಸಮೂಹವೇ ಹರಿದು ಬಂದಿದ್ದು, ₹191.37 ಲಕ್ಷ ಸಂಗ್ರಹವಾಗಿದೆ. ಇದು ಹಿಂದಿನ ನಾಲ್ಕು ವರ್ಷಗಳಿಗಿಂತ ಹೆಚ್ಚಿನ ಗಳಿಕೆಯಾಗಿದೆ.</p>.<p>ನಾಡಹಬ್ಬ ಮೈಸೂರು ದಸರಾದಲ್ಲಿ ಇಲ್ಲಿನ ಪ್ರವಾಸಿ ತಾಣಗಳೂ ತುಂಬಿರುತ್ತವೆ. ಅವುಗಳಲ್ಲಿ ಪ್ರಮುಖ ಸ್ಥಳವಾದ ಮೃಗಾಲಯಕ್ಕೆ ಈ ಬಾರಿ 1.56 ಲಕ್ಷ ವೀಕ್ಷಕರು ಭೇಟಿ ನೀಡಿದ್ದಾರೆ. ಆಯುಧ ಪೂಜೆಯ ದಿನ ಭೇಟಿ ನೀಡಿದ 27, 033 ಜನರಿಂದ ₹33.21 ಲಕ್ಷ ಹಾಗೂ ವಿಜಯದಶಮಿಯಂದು ಭೇಟಿ ನೀಡಿದ 27, 272 ಪ್ರವಾಸಿಗರಿಂದ ₹34.07 ಲಕ್ಷ ಸಂಗ್ರಹವಾಗಿದೆ. </p>.<p>2021ರ ದಸರಾ ಸಮಯದಲ್ಲಿ 75 ಸಾವಿರ ಜನ ಭಾಗವಹಿಸಿದ್ದು, ₹77.63 ಲಕ್ಷ ಸಂಗ್ರಹವಾಗಿತ್ತು. 2022ರಲ್ಲಿ 1.55 ಲಕ್ಷ ಜನ ಭೇಟಿ ನೀಡಿದ್ದು, ₹153.51 ಲಕ್ಷ ಸಂಗ್ರಹವಾಗಿತ್ತು. 2023 ಹಾಗೂ 2024ರಲ್ಲಿ ತಲಾ 1.65 ಲಕ್ಷ ಜನ ಭೇಟಿ ನೀಡಿದ್ದರು. ಕ್ರಮವಾಗಿ ₹167.10 ಲಕ್ಷ, 171.29 ಲಕ್ಷ ಸಂಗ್ರಹವಾಗಿತ್ತು. ದಸರಾ ಮುಗಿದರೂ ಶುಕ್ರವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಮೃಗಾಲಯಕ್ಕೆ ಪ್ರವಾಸಿಗರು ಭೇಟಿ ನೀಡಿದರು.</p>.<p>‘ದಸರಾ ಹಬ್ಬದ ಸಮಯದಲ್ಲಿ ಈ ಬಾರಿ ದಾಖಲೆಯ ಗಳಿಕೆಯಾಗಿದೆ. ಸ್ವಚ್ಛತೆ ಹಾಗೂ ಶಾಂತಿಯುತವಾಗಿ ಕೆಲಸ ನಿರ್ವಹಿಸಿದ ಎಲ್ಲಾ ಸಿಬ್ಬಂದಿಗೂ ಧನ್ಯವಾದ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ಅನುಷಾ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಚಾಮರಾಜೇಂದ್ರ ಮೃಗಾಲಯಕ್ಕೆ ದಸರಾ ಸಮಯದಲ್ಲಿ ಜನಸಮೂಹವೇ ಹರಿದು ಬಂದಿದ್ದು, ₹191.37 ಲಕ್ಷ ಸಂಗ್ರಹವಾಗಿದೆ. ಇದು ಹಿಂದಿನ ನಾಲ್ಕು ವರ್ಷಗಳಿಗಿಂತ ಹೆಚ್ಚಿನ ಗಳಿಕೆಯಾಗಿದೆ.</p>.<p>ನಾಡಹಬ್ಬ ಮೈಸೂರು ದಸರಾದಲ್ಲಿ ಇಲ್ಲಿನ ಪ್ರವಾಸಿ ತಾಣಗಳೂ ತುಂಬಿರುತ್ತವೆ. ಅವುಗಳಲ್ಲಿ ಪ್ರಮುಖ ಸ್ಥಳವಾದ ಮೃಗಾಲಯಕ್ಕೆ ಈ ಬಾರಿ 1.56 ಲಕ್ಷ ವೀಕ್ಷಕರು ಭೇಟಿ ನೀಡಿದ್ದಾರೆ. ಆಯುಧ ಪೂಜೆಯ ದಿನ ಭೇಟಿ ನೀಡಿದ 27, 033 ಜನರಿಂದ ₹33.21 ಲಕ್ಷ ಹಾಗೂ ವಿಜಯದಶಮಿಯಂದು ಭೇಟಿ ನೀಡಿದ 27, 272 ಪ್ರವಾಸಿಗರಿಂದ ₹34.07 ಲಕ್ಷ ಸಂಗ್ರಹವಾಗಿದೆ. </p>.<p>2021ರ ದಸರಾ ಸಮಯದಲ್ಲಿ 75 ಸಾವಿರ ಜನ ಭಾಗವಹಿಸಿದ್ದು, ₹77.63 ಲಕ್ಷ ಸಂಗ್ರಹವಾಗಿತ್ತು. 2022ರಲ್ಲಿ 1.55 ಲಕ್ಷ ಜನ ಭೇಟಿ ನೀಡಿದ್ದು, ₹153.51 ಲಕ್ಷ ಸಂಗ್ರಹವಾಗಿತ್ತು. 2023 ಹಾಗೂ 2024ರಲ್ಲಿ ತಲಾ 1.65 ಲಕ್ಷ ಜನ ಭೇಟಿ ನೀಡಿದ್ದರು. ಕ್ರಮವಾಗಿ ₹167.10 ಲಕ್ಷ, 171.29 ಲಕ್ಷ ಸಂಗ್ರಹವಾಗಿತ್ತು. ದಸರಾ ಮುಗಿದರೂ ಶುಕ್ರವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಮೃಗಾಲಯಕ್ಕೆ ಪ್ರವಾಸಿಗರು ಭೇಟಿ ನೀಡಿದರು.</p>.<p>‘ದಸರಾ ಹಬ್ಬದ ಸಮಯದಲ್ಲಿ ಈ ಬಾರಿ ದಾಖಲೆಯ ಗಳಿಕೆಯಾಗಿದೆ. ಸ್ವಚ್ಛತೆ ಹಾಗೂ ಶಾಂತಿಯುತವಾಗಿ ಕೆಲಸ ನಿರ್ವಹಿಸಿದ ಎಲ್ಲಾ ಸಿಬ್ಬಂದಿಗೂ ಧನ್ಯವಾದ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ಅನುಷಾ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>