<p><strong>ಮೈಸೂರು</strong>: ಕದಂಬ ರಂಗವೇದಿಕೆಯು ವಿಜಯನಗರದ ಕಲಾನಿಕೇತನ ಕಲಾ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದ ಯು.ಎಸ್.ರಾಮಣ್ಣ ಅವರನ್ನು ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್ ಸನ್ಮಾನಿಸಿದರು.</p>.<p>ಬಳಿಕ ಮಾತನಾಡಿ, ‘ರಾಮಣ್ಣ ಜಾನಪದ ವಸ್ತುಗಳ ಸಂಗ್ರಹಕ್ಕಾಗಿ ಮನೆ ಮನೆ ಅಲೆದಿದ್ದಾರೆ. ತಾವೊಬ್ಬರೇ ಬೆಳೆಯದೇ ಜೊತೆಯಲ್ಲಿ ಇರುವವರನ್ನು ಬೆಳೆಸುವ ಗುಣ ಅವರದ್ದು. ಜಾನಪದ ವಸ್ತುಗಳ ಸಂಗ್ರಹದ ಮೂಲಕ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಮಾಡಿದ್ದಾರೆ’ ಎಂದರು.</p>.<p>‘ರಾಮಣ್ಣ ನಟ, ನಿರ್ದೇಶಕ, ಜಾನಪದ ವಸ್ತ ಸಂಗ್ರಹಾಲಯದ ಮೇಲ್ವಿಚಾರಕರಾಗಿ ಕೆಲಸ ಮಾಡಿದ್ದಾರೆ. ಕಲಾವಿದನಾಗಿ ಮೂಕ ಪಾತ್ರಗಳಲ್ಲೂ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ತಲುಪಿದ್ದಾರೆ. ಶಿಸ್ತು ಹಾಗೂ ಸಂಘಟನೆಯ ವಿಚಾರದಲ್ಲಿ ಅವರು ಮಾದರಿ ವ್ಯಕ್ತಿಯಾಗಿದ್ದು, ಅನುಸರಣೀಯ’ ಎಂದು ಹೇಳಿದರು.</p>.<p>ಜಾನಪದ ವಿದ್ವಾಂಸ ಡಾ.ಡಿ.ಕೆ.ರಾಜೇಂದ್ರ ಮಾತನಾಡಿ, ‘ಜಾನಪದ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿರುವ ಯು.ಎಸ್.ರಾಮಣ್ಣ ಅವರದ್ದು ಶಿಸ್ತಿನ ಜೀವನ. ಧ್ಯಾನ, ವ್ಯಾಯಾಮ, ನಟನೆ, ನಿಯತ್ತು, ಬಂದಿದ್ದನ್ನು ಒಪ್ಪಿಕೊಳ್ಳುವಿಕೆಯ ಗುಣ ಹೊಂದಿದ್ದಾರೆ. ಕಡಿಮೆ ಮಾತನಾಡಿ, ತನ್ನ ಕೆಲಸದ ಮೂಲಕ ಗುರುತಿಸಿಕೊಂಡಿದ್ದಾರೆ’ ಎಂದರು ಪ್ರಶಂಸಿಸಿದರು.</p>.<p>ಕಲಾನಿಕೇತನ ಕಲಾ ಶಾಲೆಯ ಪ್ರಾಂಶುಪಾಲ ಕೆ.ಸಿ.ಮಹದೇವಶೆಟ್ಟಿ ಮಾತನಾಡಿ, ‘ನಾಟಕಕ್ಕೂ ಚಿತ್ರಕಲೆಗೂ ಪರಸ್ಪರ ಪೂರಕವಾದ ಅವಿನಾಭಾವ ಸಂಬಂಧವಿದೆ. ತೊಗಲು ಗೊಂಬೆ, ಸೂತ್ರದ ಗೊಂಬೆ, ಮುಖವರ್ಣಿಕೆ ಮೊದಲಾದ ಕಡೆ ಅವನ್ನು ಗಮನಿಸಬಹುದು’ ಎಂದರು.</p>.<p>ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಕದಂಬ ರಂಗವೇದಿಕೆಯು ವಿಜಯನಗರದ ಕಲಾನಿಕೇತನ ಕಲಾ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದ ಯು.ಎಸ್.ರಾಮಣ್ಣ ಅವರನ್ನು ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್ ಸನ್ಮಾನಿಸಿದರು.</p>.<p>ಬಳಿಕ ಮಾತನಾಡಿ, ‘ರಾಮಣ್ಣ ಜಾನಪದ ವಸ್ತುಗಳ ಸಂಗ್ರಹಕ್ಕಾಗಿ ಮನೆ ಮನೆ ಅಲೆದಿದ್ದಾರೆ. ತಾವೊಬ್ಬರೇ ಬೆಳೆಯದೇ ಜೊತೆಯಲ್ಲಿ ಇರುವವರನ್ನು ಬೆಳೆಸುವ ಗುಣ ಅವರದ್ದು. ಜಾನಪದ ವಸ್ತುಗಳ ಸಂಗ್ರಹದ ಮೂಲಕ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಮಾಡಿದ್ದಾರೆ’ ಎಂದರು.</p>.<p>‘ರಾಮಣ್ಣ ನಟ, ನಿರ್ದೇಶಕ, ಜಾನಪದ ವಸ್ತ ಸಂಗ್ರಹಾಲಯದ ಮೇಲ್ವಿಚಾರಕರಾಗಿ ಕೆಲಸ ಮಾಡಿದ್ದಾರೆ. ಕಲಾವಿದನಾಗಿ ಮೂಕ ಪಾತ್ರಗಳಲ್ಲೂ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ತಲುಪಿದ್ದಾರೆ. ಶಿಸ್ತು ಹಾಗೂ ಸಂಘಟನೆಯ ವಿಚಾರದಲ್ಲಿ ಅವರು ಮಾದರಿ ವ್ಯಕ್ತಿಯಾಗಿದ್ದು, ಅನುಸರಣೀಯ’ ಎಂದು ಹೇಳಿದರು.</p>.<p>ಜಾನಪದ ವಿದ್ವಾಂಸ ಡಾ.ಡಿ.ಕೆ.ರಾಜೇಂದ್ರ ಮಾತನಾಡಿ, ‘ಜಾನಪದ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿರುವ ಯು.ಎಸ್.ರಾಮಣ್ಣ ಅವರದ್ದು ಶಿಸ್ತಿನ ಜೀವನ. ಧ್ಯಾನ, ವ್ಯಾಯಾಮ, ನಟನೆ, ನಿಯತ್ತು, ಬಂದಿದ್ದನ್ನು ಒಪ್ಪಿಕೊಳ್ಳುವಿಕೆಯ ಗುಣ ಹೊಂದಿದ್ದಾರೆ. ಕಡಿಮೆ ಮಾತನಾಡಿ, ತನ್ನ ಕೆಲಸದ ಮೂಲಕ ಗುರುತಿಸಿಕೊಂಡಿದ್ದಾರೆ’ ಎಂದರು ಪ್ರಶಂಸಿಸಿದರು.</p>.<p>ಕಲಾನಿಕೇತನ ಕಲಾ ಶಾಲೆಯ ಪ್ರಾಂಶುಪಾಲ ಕೆ.ಸಿ.ಮಹದೇವಶೆಟ್ಟಿ ಮಾತನಾಡಿ, ‘ನಾಟಕಕ್ಕೂ ಚಿತ್ರಕಲೆಗೂ ಪರಸ್ಪರ ಪೂರಕವಾದ ಅವಿನಾಭಾವ ಸಂಬಂಧವಿದೆ. ತೊಗಲು ಗೊಂಬೆ, ಸೂತ್ರದ ಗೊಂಬೆ, ಮುಖವರ್ಣಿಕೆ ಮೊದಲಾದ ಕಡೆ ಅವನ್ನು ಗಮನಿಸಬಹುದು’ ಎಂದರು.</p>.<p>ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>