ಕೈಮಗ್ಗಗಳ ಸಂಖ್ಯೆ ವೇಗವಾಗಿ ಕಡಿಮೆಯಾಗುತ್ತಿದ್ದು ಮಗ್ಗದ ಬಟ್ಟೆಗಳಿಗೆ ಗ್ರಾಹಕರು ಕಡಿಮೆಯಾಗುತ್ತಿದ್ದಾರೆ. ನೇಕಾರ ದೇವಾಂಗ ಕುಟುಂಬಗಳು ಬೀದಿಗೆ ಬೀಳುತ್ತಿವೆ
ಡಿ.ಸಿ. ನಂಜುಂಡ ಸಂಶೋಧಕ ಸಿ.ಎಸ್.ಎಸ್.ಐ ಮೈಸೂರು ವಿಶ್ವವಿದ್ಯಾಲಯ
ವರದಿಯ ಮುಖ್ಯಾಂಶಗಳು
ಶೇ 80ರಷ್ಟು ಕೈಮಗ್ಗಗಳು ಕಣ್ಮರೆ ರಾಜ್ಯದಾದ್ಯಂತ ಮೂರು ವರ್ಷಗಳ ಅಧ್ಯಯನ ಒಟ್ಟು 900 ಪುಟಗಳ ವರದಿ ಸಿದ್ಧ ಅಧ್ಯಯನದಿಂದ ಹೊಸ ಜವಳಿ ನೀತಿಗೆ ಪೂರಕ ಮಾಹಿತಿ ನೂರಕ್ಕಿಂತ ಹೆಚ್ಚು ಶಿಫಾರಸುಗಳ ಸಲ್ಲಿಕೆ ದೇವಾಂಗದ ಉಪಜಾತಿಗಳ ಬಗ್ಗೆ ಮೊದಲ ಬಾರಿಗೆ ಮಾಹಿತಿ
ಪ್ರಮುಖ ಶಿಫಾರಸುಗಳೇನು?
ನೇಕಾರರ ಅಭಿವೃದ್ಧಿ ನಿಗಮಕ್ಕೆ ಕನಿಷ್ಠ ₹1 ಸಾವಿರ ಕೋಟಿ ಅನುದಾನ ಒದಗಿಸಬೇಕು. ಡೈಯಿಂಗ್ ಪ್ರಿಂಟಿಂಗ್ಗೆ ಕಚ್ಚಾ ಪದಾರ್ಥಗಳು ಸುಲಭವಾಗಿ ಸಿಗುವಂತಾಗಬೇಕು. ನೇಕಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆ ಆಗಬೇಕು. ನೇಕಾರರಿಗೆ ನಿರಂತರ ತರಬೇತಿ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ನೇಕಾರ ಅಭಿವೃದ್ಧಿ ನಿಗಮದಿಂದ ಸರ್ಕಾರದ ವಿವಿಧ ಇಲಾಖೆಗಳಿಂದ ಬಟ್ಟೆ ಖರೀದಿಸಬೇಕು. ರಾಜ್ಯದಲ್ಲೂ ಕಪಡ ಮಾರ್ಕೆಟ್ ವ್ಯವಸ್ಥೆ ಜಾರಿಗೊಳಿಸಬೇಕು. ಕಾರ್ಯುಕ್ರಮಗಳ ನಿರಂತರ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ನಡೆಸಬೇಕು.