ಸಣ್ಣ ರೈತರನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಖರ್ಚಿನಲ್ಲಿ ಸಮಗ್ರ ಕೃಷಿಯ ಮಾದರಿಯನ್ನು ಈ ಬಾರಿಯ ಸುತ್ತೂರು ಜಾತ್ರೆಯ ಕೃಷಿ ಮೇಳದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ, ಕೃಷಿ ತೋಟಗಾರಿಕೆ, ಮೇವು, ಪಶುಸಂಗೋಪನೆ, ಮೀನು ಸಾಕಣೆ ಮೂಲಕ ರೈತರು ಆರ್ಥಿಕವಾಗಿ ಸದೃಢರಾಗುವ ಬಗೆಯನ್ನು ನೀರಿನ ಮಿತಬಳಕೆಯ ಮೂಲಕವೇ ತೋರಿಸಲಾಗಿದೆ.