ಮೈಸೂರು: ಮಕ್ಕಳ ನಡವಳಿಕೆಯಿಂದ ನೊಂದ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮೂಡಲಗೆರೆಯ ಈರಪ್ಪ ಶಂಕರಪ್ಪ ನಯನಾಪುರ ಅವರು ಮನೆ ಬಿಟ್ಟು ಮೈಸೂರಿಗೆ ಬರುತ್ತಿದ್ದ ಚಲಿಸುತ್ತಿದ್ದ ರೈಲಿನಲ್ಲಿ ಧುಮುಕಲು ಯತ್ನಿಸಿದ್ದಾರೆ. ಇತರೆ ಪ್ರಯಾಣಿಕರು ಅವರನ್ನು ರಕ್ಷಣೆ ಮಾಡಿ ರೈಲ್ವೆ ನಿಲ್ದಾಣಕ್ಕೆ ಕರೆತಂದರು.
ಮಾನವ ಹಕ್ಕು ಹೋರಾಟಗಾರ ಪ್ರಸನ್ನ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದರು. ಬಳಿಕ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಬಸವರಾಜು ಅರವಿಂದ ನಗರದ ಜೆಎಸ್ಎಸ್ ವೃದ್ಧರ ಆಶ್ರಮಕ್ಕೆ ಕರೆದೊಯ್ಯಲು ಸೂಚಿಸಿದರು. ನಿಂಗರಾಜು, ಲೋಕೇಶ ಇದ್ದರು.