<p><strong>ಸರಗೂರು</strong>: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನುಗು ವನ್ಯಜೀವಿ ವಲಯಕ್ಕೆ ಸೇರಿದ, ತಾಲ್ಲೂಕಿನ ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ ಹೆಣ್ಣು ಹುಲಿ ಹಾಗೂ ಅದರ ಮೂರು ಮರಿಗಳನ್ನು ಅರಣ್ಯ ಇಲಾಖೆಯು ಕೂಂಬಿಂಗ್ ಕಾರ್ಯಾಚರಣೆ ವೇಳೆ ಮಂಗಳವಾರ ಸೆರೆ ಹಿಡಿದಿದೆ. </p>.<p>6–7 ವರ್ಷದ ಹೆಣ್ಣು ಹುಲಿ ಹಾಗೂ 3 ತಿಂಗಳ ಎರಡು ಹೆಣ್ಣು ಮತ್ತು ಒಂದು ಗಂಡು ಹುಲಿಮರಿಗಳು ಸೆರೆ ಸಿಕ್ಕಿವೆ. ಇದೇ ಸ್ಥಳದಲ್ಲಿ ಅಕ್ಟೋಬರ್ 31ರಂದು ಸಿಕ್ಕಿದ ಎರಡು ಹೆಣ್ಣು ಹುಲಿಮರಿಗಳನ್ನು ಬೆಂಗಳೂರಿನ ಬನ್ನೇರುಘಟ್ಟದ ಪುನರ್ವಸತಿ ಕೇಂದ್ರಕ್ಕೆ ಬಿಡಲಾಗಿತ್ತು. </p>.<p>‘ಈ ಎಲ್ಲ ಮರಿಗಳನ್ನು ತಾಯಿ ಹುಲಿಯೊಂದಿಗೆ ಮತ್ತೆ ಕಾಡಿಗೆ ಬಿಡಲಾಗುವುದು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. </p>.<p>ಗ್ರಾಮದಲ್ಲಿ ಹುಲಿ ಉಪಟಳ ಹೆಚ್ಚಾದ ಕಾರಣ 20 ದಿನದಿಂದ ಅಧಿಕಾರಿಗಳು ಸಾಕಾನೆಗಳಾದ ಭೀಮ, ಮಹೇಂದ್ರ, ಸುಗ್ರೀವ, ಪ್ರಶಾಂತನನ್ನು ಬಳಸಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದರು.</p>.<p>ಅರಿವಳಿಕೆ ಚುಚ್ಚುಮದ್ದು ತಜ್ಞ ಡಾ.ವಾಸೀಮ್ ಮಿರ್ಜಾ, ಸಿಎಫ್ ಪ್ರಭಾಕರನ್, ಎಸಿಎಫ್ ಡಿ.ಪರಮೇಶ್, ನುಗು ಅರ್ಎಫ್ಒ ಎಚ್.ಬಿ.ಅನಿತ್ರಾಜ್, ಕಲ್ಕೆರೆ ಆರ್ಎಫ್ಒ ರಾಜೇಶ್ ಸೇರಿದಂತೆ ಅರಣ್ಯ ಇಲಾಖೆಯ 50ಕ್ಕೂ ಹೆಚ್ಚು ಅಧಿಕಾರಿಗಳು–ಸಿಬ್ಬಂದಿ, ಎಸ್ಟಿಪಿಎಫ್, ಎಲ್ಟಿಎಫ್, ಇಟಿಎಫ್ ಸಿಬ್ಬಂದಿ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸರಗೂರು</strong>: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನುಗು ವನ್ಯಜೀವಿ ವಲಯಕ್ಕೆ ಸೇರಿದ, ತಾಲ್ಲೂಕಿನ ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ ಹೆಣ್ಣು ಹುಲಿ ಹಾಗೂ ಅದರ ಮೂರು ಮರಿಗಳನ್ನು ಅರಣ್ಯ ಇಲಾಖೆಯು ಕೂಂಬಿಂಗ್ ಕಾರ್ಯಾಚರಣೆ ವೇಳೆ ಮಂಗಳವಾರ ಸೆರೆ ಹಿಡಿದಿದೆ. </p>.<p>6–7 ವರ್ಷದ ಹೆಣ್ಣು ಹುಲಿ ಹಾಗೂ 3 ತಿಂಗಳ ಎರಡು ಹೆಣ್ಣು ಮತ್ತು ಒಂದು ಗಂಡು ಹುಲಿಮರಿಗಳು ಸೆರೆ ಸಿಕ್ಕಿವೆ. ಇದೇ ಸ್ಥಳದಲ್ಲಿ ಅಕ್ಟೋಬರ್ 31ರಂದು ಸಿಕ್ಕಿದ ಎರಡು ಹೆಣ್ಣು ಹುಲಿಮರಿಗಳನ್ನು ಬೆಂಗಳೂರಿನ ಬನ್ನೇರುಘಟ್ಟದ ಪುನರ್ವಸತಿ ಕೇಂದ್ರಕ್ಕೆ ಬಿಡಲಾಗಿತ್ತು. </p>.<p>‘ಈ ಎಲ್ಲ ಮರಿಗಳನ್ನು ತಾಯಿ ಹುಲಿಯೊಂದಿಗೆ ಮತ್ತೆ ಕಾಡಿಗೆ ಬಿಡಲಾಗುವುದು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. </p>.<p>ಗ್ರಾಮದಲ್ಲಿ ಹುಲಿ ಉಪಟಳ ಹೆಚ್ಚಾದ ಕಾರಣ 20 ದಿನದಿಂದ ಅಧಿಕಾರಿಗಳು ಸಾಕಾನೆಗಳಾದ ಭೀಮ, ಮಹೇಂದ್ರ, ಸುಗ್ರೀವ, ಪ್ರಶಾಂತನನ್ನು ಬಳಸಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದರು.</p>.<p>ಅರಿವಳಿಕೆ ಚುಚ್ಚುಮದ್ದು ತಜ್ಞ ಡಾ.ವಾಸೀಮ್ ಮಿರ್ಜಾ, ಸಿಎಫ್ ಪ್ರಭಾಕರನ್, ಎಸಿಎಫ್ ಡಿ.ಪರಮೇಶ್, ನುಗು ಅರ್ಎಫ್ಒ ಎಚ್.ಬಿ.ಅನಿತ್ರಾಜ್, ಕಲ್ಕೆರೆ ಆರ್ಎಫ್ಒ ರಾಜೇಶ್ ಸೇರಿದಂತೆ ಅರಣ್ಯ ಇಲಾಖೆಯ 50ಕ್ಕೂ ಹೆಚ್ಚು ಅಧಿಕಾರಿಗಳು–ಸಿಬ್ಬಂದಿ, ಎಸ್ಟಿಪಿಎಫ್, ಎಲ್ಟಿಎಫ್, ಇಟಿಎಫ್ ಸಿಬ್ಬಂದಿ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>