<p><strong>ಮೈಸೂರು:</strong> ‘ನಾನೇನು ತಪ್ಪು ಮಾಡಿದ್ದೇನೆ? ರಂಗಾಯಣಕ್ಕೆ ಕಾಲಿಟ್ಟಾಗಿಂದ ಕೋಮುವಾದಿ ಎಂದು ಜರಿಯುತ್ತಿದ್ದರೆ, ರಾಜಕಾರಣಿಗಳ ಮರ್ಜಿಯಿಂದ ಬಂದವನು ಎಂದು ಅವಮಾನಿಸಿದರೆ ತಾಳ್ಮೆ ಕೆಡುವುದಿಲ್ಲವೇ? ನಾನೂ ಮನುಷ್ಯನಲ್ಲವೇ?’ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪ್ರಶ್ನಿಸಿದ್ದಾರೆ.</p>.<p>ಬಹುರೂಪಿ ಉತ್ಸವಕ್ಕೆ ಚಕ್ರವರ್ತಿ ಸೂಲಿಬೆಲೆ, ಮಾಳವಿಕಾ ಅವಿನಾಶ್ ಅವರನ್ನು ಆಹ್ವಾನಿಸಿರುವುದಕ್ಕೆ ವಿರೋಧ, ನಂತರ ನಡೆದಿರುವ ವಾಗ್ವಾದಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ.</p>.<p>‘ಕಳೆದ ವರ್ಷ ‘ಗಾಂಧಿಪಥ’ ನಾಟಕೋತ್ಸವದಲ್ಲೂ ಗಲಾಟೆ ಮಾಡಿದ್ದ ಅದೇ ಗುಂಪು`ಕಾರ್ಯಪ್ಪ ವಜಾ ಆಗಬೇಕು’ ಎಂದು ನನ್ನ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದರೂ ಬಹುರೂಪಿ ಯಶಸ್ವಿಯಾಯಿತು’ ಎಂದುಪ್ರಕಟಣೆಯಲ್ಲಿ ಹೇಳಿದ್ದಾರೆ.</p>.<p>‘ಕೊರೊನಾ ಕಾಲದಲ್ಲಿ ಸಾವಿರಾರು ಜನರಿಗೆ ಆಹಾರ ವಿತರಿಸಿದರೆಂದು ಮಾಳವಿಕಾ ಅವಿನಾಶ್, ನದಿ-ಕೆರೆ ಶುದ್ಧೀಕರಣದ ಕಾಯಕದ ವಿಚಾರಕ್ಕೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಆಹ್ವಾನಿಸಲಾಗಿದೆ. ನಾ. ಡಿಸೋಜಾ, ಎಚ್.ಎಸ್. ವೆಂಕಟೇಶ್ಮೂರ್ತಿ, ತುಳಸೀಗೌಡ, ಮಾತಾ ಮಂಜಮ್ಮ ಜೋಗತಿ, ಸುರೇಶ್ ಹೆಬ್ಳೀಕರ್, ಟಿ.ಎಸ್. ನಾಗಾಭರಣ, ವಿಜಯಲಕ್ಷ್ಮಿ ಬಾಳೇಕುಂದ್ರಿ ಇದ್ದಾರೆ. ಇಲ್ಲಿಎಡ-ಬಲ ಎಲ್ಲಿ ಕಂಡಿರಿ?’ ಎಂದು ಪ್ರಶ್ನಿಸಿದ್ದಾರೆ.</p>.<p>‘ಸಂಘ ಪರಿವಾರದವನಾದರೆ ಏನು ತೊಂದರೆ? ಸರ್ಕಾರ ಅವರಿಗೆ ಇಷ್ಟವಾದವರನ್ನು ನೇಮಿಸುತ್ತವೆ. ಅತಿಥಿಗಳು ಬರಬಾರದೆಂಬ ಏಕತ್ವ ವಾದವೇಕೆ? ಎಂದು ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ನಾನೇನು ತಪ್ಪು ಮಾಡಿದ್ದೇನೆ? ರಂಗಾಯಣಕ್ಕೆ ಕಾಲಿಟ್ಟಾಗಿಂದ ಕೋಮುವಾದಿ ಎಂದು ಜರಿಯುತ್ತಿದ್ದರೆ, ರಾಜಕಾರಣಿಗಳ ಮರ್ಜಿಯಿಂದ ಬಂದವನು ಎಂದು ಅವಮಾನಿಸಿದರೆ ತಾಳ್ಮೆ ಕೆಡುವುದಿಲ್ಲವೇ? ನಾನೂ ಮನುಷ್ಯನಲ್ಲವೇ?’ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪ್ರಶ್ನಿಸಿದ್ದಾರೆ.</p>.<p>ಬಹುರೂಪಿ ಉತ್ಸವಕ್ಕೆ ಚಕ್ರವರ್ತಿ ಸೂಲಿಬೆಲೆ, ಮಾಳವಿಕಾ ಅವಿನಾಶ್ ಅವರನ್ನು ಆಹ್ವಾನಿಸಿರುವುದಕ್ಕೆ ವಿರೋಧ, ನಂತರ ನಡೆದಿರುವ ವಾಗ್ವಾದಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ.</p>.<p>‘ಕಳೆದ ವರ್ಷ ‘ಗಾಂಧಿಪಥ’ ನಾಟಕೋತ್ಸವದಲ್ಲೂ ಗಲಾಟೆ ಮಾಡಿದ್ದ ಅದೇ ಗುಂಪು`ಕಾರ್ಯಪ್ಪ ವಜಾ ಆಗಬೇಕು’ ಎಂದು ನನ್ನ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದರೂ ಬಹುರೂಪಿ ಯಶಸ್ವಿಯಾಯಿತು’ ಎಂದುಪ್ರಕಟಣೆಯಲ್ಲಿ ಹೇಳಿದ್ದಾರೆ.</p>.<p>‘ಕೊರೊನಾ ಕಾಲದಲ್ಲಿ ಸಾವಿರಾರು ಜನರಿಗೆ ಆಹಾರ ವಿತರಿಸಿದರೆಂದು ಮಾಳವಿಕಾ ಅವಿನಾಶ್, ನದಿ-ಕೆರೆ ಶುದ್ಧೀಕರಣದ ಕಾಯಕದ ವಿಚಾರಕ್ಕೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಆಹ್ವಾನಿಸಲಾಗಿದೆ. ನಾ. ಡಿಸೋಜಾ, ಎಚ್.ಎಸ್. ವೆಂಕಟೇಶ್ಮೂರ್ತಿ, ತುಳಸೀಗೌಡ, ಮಾತಾ ಮಂಜಮ್ಮ ಜೋಗತಿ, ಸುರೇಶ್ ಹೆಬ್ಳೀಕರ್, ಟಿ.ಎಸ್. ನಾಗಾಭರಣ, ವಿಜಯಲಕ್ಷ್ಮಿ ಬಾಳೇಕುಂದ್ರಿ ಇದ್ದಾರೆ. ಇಲ್ಲಿಎಡ-ಬಲ ಎಲ್ಲಿ ಕಂಡಿರಿ?’ ಎಂದು ಪ್ರಶ್ನಿಸಿದ್ದಾರೆ.</p>.<p>‘ಸಂಘ ಪರಿವಾರದವನಾದರೆ ಏನು ತೊಂದರೆ? ಸರ್ಕಾರ ಅವರಿಗೆ ಇಷ್ಟವಾದವರನ್ನು ನೇಮಿಸುತ್ತವೆ. ಅತಿಥಿಗಳು ಬರಬಾರದೆಂಬ ಏಕತ್ವ ವಾದವೇಕೆ? ಎಂದು ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>