<p><strong>ದೇವದುರ್ಗ:</strong> ‘ಅರ್ಹತೆ ಇಲ್ಲದ ವರ್ತಕರಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದ ಬಗ್ಗೆ ಬಹಿರಂಗ ಚರ್ಚೆಗೆ ಎಪಿಎಂಸಿ ಅಧ್ಯಕ್ಷ ಆದನಗೌಡ ಪಾಟೀಲ ಬುಂಕಲದೊಡ್ಡಿ ಅವರನ್ನು ಆಹ್ವಾನಿಸುತ್ತೇವೆ. ಅವರೇ ದಿನಾಂಕ ಮತ್ತು ಸ್ಥಳ ನಿಗದಿಪಡಿಸಲಿ’ ಎಂದು ಎಪಿಎಂಸಿ ಸದಸ್ಯ ರಂಗಪ್ಪ ಗೋಸಲ್ ಸವಾಲು ಹಾಕಿದರು.</p>.<p>ಪಟ್ಟಣದಲ್ಲಿ ಮಂಗಳವಾರ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಕ್ರಮವನ್ನು ದಾಖಲೆ ಸಮೇತ ಸಾಬೀತು ಮಾಡುವೆ. ಎಪಿಎಂಸಿ ಕಾರ್ಯದರ್ಶಿ ರಂಗನಾಥ ಅವರು ತಮ್ಮ ಸಂಬಂಧಿಕರಿಗೆ 1, ಮಾಜಿ ಎಪಿಎಂಸಿ ಅಧ್ಯಕ್ಷ ಕುಟುಂಬ ಸದಸ್ಯರಿಗೆ 5, ಮಾಜಿ ಉಪಾಧ್ಯಕ್ಷರ ಸಂಬಂಧಿಕರಿಗೆ 1, ಎಪಿಎಂಸಿ ಜವಾನನ ಸಂಬಂಧಿಕರಿಗೆ 2 ಮತ್ತು ಅರ್ಜಿ ಸಲ್ಲಿಸಿದ ಕೊನೆ ದಿನಾಂಕದ ಹಿಂದಿನ ದಿನದಂದು ಎಪಿಎಂಸಿ ಲೈಸೆನ್ಸ್ ಪಡೆದು ಅರ್ಜಿ ಸಲ್ಲಿಸಿ ನಿವೇಶನ ಪಡೆದವರ ದಾಖಲೆಗಳೊಂದಿಗೆ ಬಹಿರಂಗ ಚರ್ಚೆಗೆ ಬರುತ್ತೇನೆ’ ಎಂದು ತಿಳಿಸಿದರು.</p>.<p>‘ಎಪಿಎಂಸಿ ನಿಯಮಾವಳಿ ಗಾಳಿಗೆ ತೂರಿ ಅಧ್ಯಕ್ಷ ಆದನಗೌಡ ಮತ್ತು ಕಾರ್ಯದರ್ಶಿ ರಂಗನಾಥ 57 ವರ್ತಕರಿಂದ ತಲಾ ₹1.5 ಲಕ್ಷದಂತೆ ಒಟ್ಟು ₹85 ಲಕ್ಷ ಲಂಚ ಪಡೆದು ಅಕ್ರಮ ನಿವೇಶನಗಳನ್ನು ಪಕ್ಕದ ತಾಲ್ಲೂಕುಗಳಲ್ಲಿ ನೋಂದಣಿ ಮಾಡಿಸಿದ್ದಾರೆ’ ಎಂದರು.</p>.<p><strong>ಹಣ ನೀಡುವ ಆಮಿಷ</strong></p><p> ‘ಸಾಮಾನ್ಯ ಸಭೆ ಗಮನಕ್ಕೆ ತರದೆ ಕಾಟಚಾರಕ್ಕೆ ಮೌಖಿಕವಾಗಿ ದೂರವಾಣಿ ಮೂಲಕ ಜೂನ್ 12 ಮತ್ತು 18 ರಂದು ಎರಡು ಬಾರಿ ಸಭೆ ಕರೆದು ಎರಡು ಬಾರಿಯೂ ಸಭೆ ಮುಂದೂಡಿದ್ದಾರೆ. 3ನೇ ಬಾರಿ ಜುಲೈ 2ರಂದು ನೋಟಿಸ್ ನೀಡಿ ಅದನ್ನು ಮುಂದೂಡಿ ಜುಲೈ 7 ರಂದು ಸಭೆ ಮಾಡಿದ್ದಾರೆ. ಸಭೆಯಲ್ಲಿ ಈ ಎಲ್ಲಾ ಅಕ್ರಮಗಳು ಮನಗಂಡ ನಾವು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಎಪಿಎಂಸಿಯ ಸದಸ್ಯರೊಬ್ಬರನ್ನು ರಾಯಚೂರಿನಲ್ಲಿ ಭೇಟಿಯಾಗಿ ಒತ್ತಾಯದಿಂದ ಸಹಿ ಮಾಡಿಸಿಕೊಂಡು ಬಂದಿದ್ದಾರೆ. ಕಾರ್ಯದರ್ಶಿ ರಂಗನಾಥ ಅವರು ನನಗೆ ಕರೆ ಮಾಡಿ ಈ ವಿಚಾರದಲ್ಲಿ ನೀವು ಸುಮ್ಮನಾಗಿ ನಿಮಗೆ ಹಣ ನೀಡುತ್ತವೆ ಎಂದು ಆಮಿಷ ಒಡ್ಡಿದ್ದಾರೆ’ ರಂಗಪ್ಪ ಗೋಸಲ್ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವದುರ್ಗ:</strong> ‘ಅರ್ಹತೆ ಇಲ್ಲದ ವರ್ತಕರಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದ ಬಗ್ಗೆ ಬಹಿರಂಗ ಚರ್ಚೆಗೆ ಎಪಿಎಂಸಿ ಅಧ್ಯಕ್ಷ ಆದನಗೌಡ ಪಾಟೀಲ ಬುಂಕಲದೊಡ್ಡಿ ಅವರನ್ನು ಆಹ್ವಾನಿಸುತ್ತೇವೆ. ಅವರೇ ದಿನಾಂಕ ಮತ್ತು ಸ್ಥಳ ನಿಗದಿಪಡಿಸಲಿ’ ಎಂದು ಎಪಿಎಂಸಿ ಸದಸ್ಯ ರಂಗಪ್ಪ ಗೋಸಲ್ ಸವಾಲು ಹಾಕಿದರು.</p>.<p>ಪಟ್ಟಣದಲ್ಲಿ ಮಂಗಳವಾರ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಕ್ರಮವನ್ನು ದಾಖಲೆ ಸಮೇತ ಸಾಬೀತು ಮಾಡುವೆ. ಎಪಿಎಂಸಿ ಕಾರ್ಯದರ್ಶಿ ರಂಗನಾಥ ಅವರು ತಮ್ಮ ಸಂಬಂಧಿಕರಿಗೆ 1, ಮಾಜಿ ಎಪಿಎಂಸಿ ಅಧ್ಯಕ್ಷ ಕುಟುಂಬ ಸದಸ್ಯರಿಗೆ 5, ಮಾಜಿ ಉಪಾಧ್ಯಕ್ಷರ ಸಂಬಂಧಿಕರಿಗೆ 1, ಎಪಿಎಂಸಿ ಜವಾನನ ಸಂಬಂಧಿಕರಿಗೆ 2 ಮತ್ತು ಅರ್ಜಿ ಸಲ್ಲಿಸಿದ ಕೊನೆ ದಿನಾಂಕದ ಹಿಂದಿನ ದಿನದಂದು ಎಪಿಎಂಸಿ ಲೈಸೆನ್ಸ್ ಪಡೆದು ಅರ್ಜಿ ಸಲ್ಲಿಸಿ ನಿವೇಶನ ಪಡೆದವರ ದಾಖಲೆಗಳೊಂದಿಗೆ ಬಹಿರಂಗ ಚರ್ಚೆಗೆ ಬರುತ್ತೇನೆ’ ಎಂದು ತಿಳಿಸಿದರು.</p>.<p>‘ಎಪಿಎಂಸಿ ನಿಯಮಾವಳಿ ಗಾಳಿಗೆ ತೂರಿ ಅಧ್ಯಕ್ಷ ಆದನಗೌಡ ಮತ್ತು ಕಾರ್ಯದರ್ಶಿ ರಂಗನಾಥ 57 ವರ್ತಕರಿಂದ ತಲಾ ₹1.5 ಲಕ್ಷದಂತೆ ಒಟ್ಟು ₹85 ಲಕ್ಷ ಲಂಚ ಪಡೆದು ಅಕ್ರಮ ನಿವೇಶನಗಳನ್ನು ಪಕ್ಕದ ತಾಲ್ಲೂಕುಗಳಲ್ಲಿ ನೋಂದಣಿ ಮಾಡಿಸಿದ್ದಾರೆ’ ಎಂದರು.</p>.<p><strong>ಹಣ ನೀಡುವ ಆಮಿಷ</strong></p><p> ‘ಸಾಮಾನ್ಯ ಸಭೆ ಗಮನಕ್ಕೆ ತರದೆ ಕಾಟಚಾರಕ್ಕೆ ಮೌಖಿಕವಾಗಿ ದೂರವಾಣಿ ಮೂಲಕ ಜೂನ್ 12 ಮತ್ತು 18 ರಂದು ಎರಡು ಬಾರಿ ಸಭೆ ಕರೆದು ಎರಡು ಬಾರಿಯೂ ಸಭೆ ಮುಂದೂಡಿದ್ದಾರೆ. 3ನೇ ಬಾರಿ ಜುಲೈ 2ರಂದು ನೋಟಿಸ್ ನೀಡಿ ಅದನ್ನು ಮುಂದೂಡಿ ಜುಲೈ 7 ರಂದು ಸಭೆ ಮಾಡಿದ್ದಾರೆ. ಸಭೆಯಲ್ಲಿ ಈ ಎಲ್ಲಾ ಅಕ್ರಮಗಳು ಮನಗಂಡ ನಾವು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಎಪಿಎಂಸಿಯ ಸದಸ್ಯರೊಬ್ಬರನ್ನು ರಾಯಚೂರಿನಲ್ಲಿ ಭೇಟಿಯಾಗಿ ಒತ್ತಾಯದಿಂದ ಸಹಿ ಮಾಡಿಸಿಕೊಂಡು ಬಂದಿದ್ದಾರೆ. ಕಾರ್ಯದರ್ಶಿ ರಂಗನಾಥ ಅವರು ನನಗೆ ಕರೆ ಮಾಡಿ ಈ ವಿಚಾರದಲ್ಲಿ ನೀವು ಸುಮ್ಮನಾಗಿ ನಿಮಗೆ ಹಣ ನೀಡುತ್ತವೆ ಎಂದು ಆಮಿಷ ಒಡ್ಡಿದ್ದಾರೆ’ ರಂಗಪ್ಪ ಗೋಸಲ್ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>