<p><strong>ಲಿಂಗಸುಗೂರು</strong>: ಯಾದಗಿರಿ ಪಿಎಸ್ಐ ಪರಶುರಾಮ ಸಾವಿನ ವಾಸ್ತವ ಸತ್ಯ ಬಯಲುಗೊಳಿಸಲು ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಆಗ್ರಹಿಸಿದೆ.</p>.<p>ಗುರುವಾರ ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿ ಗದ್ದೆಪ್ಪ ಕಲಬುರ್ಗಿ ಮೂಲಕ ಮನವಿ ಸಲ್ಲಿಸಿ, ಶಾಸಕ ಮತ್ತು ಪುತ್ರರ ಮಾನಸಿಕ ಕಿರುಕುಳ ತಾಳದೆ ಮೃತಪಟ್ಟಿರುವುದು ಬಹಿರಂಗವಾಗಿದೆ. ಈ ಕುರಿತು ವಾಸ್ತವ ತನಿಖೆ ನಡೆಸುವ ಜೊತೆಗೆ ತಕ್ಷಣವೇ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ಸಿಐಡಿ ತನಿಖೆ ಮೇಲೆ ಸಂಶಯ ಹುಟ್ಟಿಕೊಂಡಿದೆ. ಕಾರಣ ಸಿಬಿಐಗೆ ತನಿಖೆಗೆ ಒಳಪಡಿಸಿ, ಪರಶುರಾಮ ಪತ್ನಿಗೆ ಸರ್ಕಾರಿ ಕೆಲಸ ನೀಡಬೇಕು. ಕುಟುಂಬಸ್ಥರಿಗೆ ₹2 ಕೋಟಿ ಪರಿಹಾರ ಘೋಷಿಸಬೇಕು. ಆರೋಪಿತರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಮನವಿಯಲ್ಲಿ ತಿಳಿಸಿದರು.</p>.<p>ತಾಲ್ಲೂಕು ಸಂಚಾಲಕ ಯಮನಪ್ಪ ಚಲುವಾದಿ, ಮುಖಂಡರಾದ ಯಂಕಪ್ಪ ಚಲುವಾದಿ, ನಾಗರಾಜ ಹಾಲಭಾವಿ, ಮೌನೇಶ ಗುಡದನಾಳ, ಶಿವಕುಮಾರ ಸಂತೆಕೆಲ್ಲೂರು, ದುರುಗಪ್ಪ ಸಂತೆಕೆಲ್ಲೂರು, ಸೋಮಣ್ಣ ಚಿತ್ತಾಪುರ, ಚಿಂತಾಮಣಿ ಚಿತ್ತಾಪುರ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಿಂಗಸುಗೂರು</strong>: ಯಾದಗಿರಿ ಪಿಎಸ್ಐ ಪರಶುರಾಮ ಸಾವಿನ ವಾಸ್ತವ ಸತ್ಯ ಬಯಲುಗೊಳಿಸಲು ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಆಗ್ರಹಿಸಿದೆ.</p>.<p>ಗುರುವಾರ ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿ ಗದ್ದೆಪ್ಪ ಕಲಬುರ್ಗಿ ಮೂಲಕ ಮನವಿ ಸಲ್ಲಿಸಿ, ಶಾಸಕ ಮತ್ತು ಪುತ್ರರ ಮಾನಸಿಕ ಕಿರುಕುಳ ತಾಳದೆ ಮೃತಪಟ್ಟಿರುವುದು ಬಹಿರಂಗವಾಗಿದೆ. ಈ ಕುರಿತು ವಾಸ್ತವ ತನಿಖೆ ನಡೆಸುವ ಜೊತೆಗೆ ತಕ್ಷಣವೇ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ಸಿಐಡಿ ತನಿಖೆ ಮೇಲೆ ಸಂಶಯ ಹುಟ್ಟಿಕೊಂಡಿದೆ. ಕಾರಣ ಸಿಬಿಐಗೆ ತನಿಖೆಗೆ ಒಳಪಡಿಸಿ, ಪರಶುರಾಮ ಪತ್ನಿಗೆ ಸರ್ಕಾರಿ ಕೆಲಸ ನೀಡಬೇಕು. ಕುಟುಂಬಸ್ಥರಿಗೆ ₹2 ಕೋಟಿ ಪರಿಹಾರ ಘೋಷಿಸಬೇಕು. ಆರೋಪಿತರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಮನವಿಯಲ್ಲಿ ತಿಳಿಸಿದರು.</p>.<p>ತಾಲ್ಲೂಕು ಸಂಚಾಲಕ ಯಮನಪ್ಪ ಚಲುವಾದಿ, ಮುಖಂಡರಾದ ಯಂಕಪ್ಪ ಚಲುವಾದಿ, ನಾಗರಾಜ ಹಾಲಭಾವಿ, ಮೌನೇಶ ಗುಡದನಾಳ, ಶಿವಕುಮಾರ ಸಂತೆಕೆಲ್ಲೂರು, ದುರುಗಪ್ಪ ಸಂತೆಕೆಲ್ಲೂರು, ಸೋಮಣ್ಣ ಚಿತ್ತಾಪುರ, ಚಿಂತಾಮಣಿ ಚಿತ್ತಾಪುರ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>