ನಂತರ ರಂಜಾನಸಾಬ್ ಮಾತನಾಡಿ,‘18 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ದೇಹ ಮಾತ್ರ ಕೆಲಸದಿಂದ ನಿವೃತ್ತಿ ಪಡೆದಿದೆ. ಆದರೆ ರಕ್ತದ ಕಣ ಕಣದಲ್ಲೂ ದೇಶಭಕ್ತಿ ತುಂಬಿದೆ. ಮುದಗಲ್, ಅಡವಿಭಾವಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನನ್ನನ್ನು ಸ್ವಾಗತಿಸಿರುವುದನ್ನು ನೋಡಿ ತುಂಬಾ ಸಂತಸವಾಗುತ್ತಿದೆ. ಯುವಕರು ಸೇನೆ ಸೇರಲು ಮುಂದೆ ಬರಬೇಕು’ ಎಂದರು.