<p><strong>ಜಾಲಹಳ್ಳಿ:</strong> ಪಟ್ಟಣದಲ್ಲಿ ಹಾದು ಹೋಗಿರುವ ತಿಂಥಣಿ ಬ್ರಿಜ್-ಕಲ್ಮಲಾ ರಾಜ್ಯ ಹೆದ್ದಾರಿಯಲ್ಲಿ ಇರುವ ಅಂಬೇಡ್ಕರ್ ವೃತ್ತದ ಬಳಿ ನಿತ್ಯ ಸಂಜೆಯಾದರೆ ಸಾಕು ಬಿಡಾಡಿ ದನಗಳು ಠಿಕಾಣಿ ಹಾಕುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.</p>.<p>ಈ ಸಮಸ್ಯೆ ಕಳೆದ 6 ತಿಂಗಳಿಂದ ನಿರಂತರವಾಗಿ ಇದ್ದು, ಈ ಬಗ್ಗೆ ದನಗಳ ಮಾಲೀಕರಿಗೆ ಹಾಗೂ ಪಟ್ಟಣದಲ್ಲಿ ಆಟೋದಲ್ಲಿ ಹಿಡಿದು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ದನಗಳನ್ನು ಬೀದಿಗೆ ಬಿಡದೇ ಮನೆಯಲ್ಲಿ ಕಟ್ಟಿಹಾಕಿಕೊಳ್ಳಬೇಕೆಂದು ಜಾಗೃತಿ ಮೂಡಿಸಿದರು ಪ್ರಯೋಜವಾಗುತ್ತಿಲ್ಲ.</p>.<p>ವಾಹನ ಚಾಲಕರು ದನಗಳನ್ನು ರಕ್ಷಿಸಲು ಹೋಗಿ ಮನುಷ್ಯರನ್ನು ಬಲಿ ಪಡೆದುಕೊಂಡಿರುವ ಉದಾರಣೆಗಳು ಇವೆ. ಸಣ್ಣ ಪುಟ್ಟ ಗಾಯಗಳು ಸಂಭವಿಸಿದರು ಸಾವಿರಾರೂ ಹಣ ದಂಡ ಕಟ್ಟಿರುವ ಘಟನೆ ಕೂಡ ಜರುಗಿವೆ.<br> ದನಗಳನ್ನು ಸಾಕಿರುವ ಮಾಲೀಕರಿಗೆ ಕನಿಷ್ಟ ಜ್ಞಾನವು ಇಲ್ಲವಾಗಿದೆ. ತಮ್ಮ ಜಾನುವಾರುಗಳು ರಸ್ತೆಗೆ ಬಿಡದೇ ಕಟ್ಟಿಕೊಳ್ಳಬೇಕು. ಒಂದು ವೇಳೆ ಬೀದಿಯಲ್ಲಿ ದನಗಳಿಂದ ಜನತೆ ತೊಂದರೆ ಉಂಟಾದರೆ ಯಾರು ಹೊಣೆ ಎನ್ನುವುದು ಎಂದು ಸಾರ್ವಜನಿಕ ಪ್ರಶ್ನಿದ್ದಾರೆ.</p>.<p>ಇನ್ನೂ ಮುಂದೆ ರಸ್ತೆಯ ಮೇಲೆ ಬಿಡಾಡಿ ದನಗಳಿಂದ ಯಾವುದೇ ಅಪಘಾತ ಉಂಟಾದರೆ ಬೀದಿಗೆ ಬಿಟ್ಟಿರುವ ಮಾಲೀಕನ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಸ್ಥಳೀಯ ನಾಗರೀಕರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಾಲಹಳ್ಳಿ:</strong> ಪಟ್ಟಣದಲ್ಲಿ ಹಾದು ಹೋಗಿರುವ ತಿಂಥಣಿ ಬ್ರಿಜ್-ಕಲ್ಮಲಾ ರಾಜ್ಯ ಹೆದ್ದಾರಿಯಲ್ಲಿ ಇರುವ ಅಂಬೇಡ್ಕರ್ ವೃತ್ತದ ಬಳಿ ನಿತ್ಯ ಸಂಜೆಯಾದರೆ ಸಾಕು ಬಿಡಾಡಿ ದನಗಳು ಠಿಕಾಣಿ ಹಾಕುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.</p>.<p>ಈ ಸಮಸ್ಯೆ ಕಳೆದ 6 ತಿಂಗಳಿಂದ ನಿರಂತರವಾಗಿ ಇದ್ದು, ಈ ಬಗ್ಗೆ ದನಗಳ ಮಾಲೀಕರಿಗೆ ಹಾಗೂ ಪಟ್ಟಣದಲ್ಲಿ ಆಟೋದಲ್ಲಿ ಹಿಡಿದು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ದನಗಳನ್ನು ಬೀದಿಗೆ ಬಿಡದೇ ಮನೆಯಲ್ಲಿ ಕಟ್ಟಿಹಾಕಿಕೊಳ್ಳಬೇಕೆಂದು ಜಾಗೃತಿ ಮೂಡಿಸಿದರು ಪ್ರಯೋಜವಾಗುತ್ತಿಲ್ಲ.</p>.<p>ವಾಹನ ಚಾಲಕರು ದನಗಳನ್ನು ರಕ್ಷಿಸಲು ಹೋಗಿ ಮನುಷ್ಯರನ್ನು ಬಲಿ ಪಡೆದುಕೊಂಡಿರುವ ಉದಾರಣೆಗಳು ಇವೆ. ಸಣ್ಣ ಪುಟ್ಟ ಗಾಯಗಳು ಸಂಭವಿಸಿದರು ಸಾವಿರಾರೂ ಹಣ ದಂಡ ಕಟ್ಟಿರುವ ಘಟನೆ ಕೂಡ ಜರುಗಿವೆ.<br> ದನಗಳನ್ನು ಸಾಕಿರುವ ಮಾಲೀಕರಿಗೆ ಕನಿಷ್ಟ ಜ್ಞಾನವು ಇಲ್ಲವಾಗಿದೆ. ತಮ್ಮ ಜಾನುವಾರುಗಳು ರಸ್ತೆಗೆ ಬಿಡದೇ ಕಟ್ಟಿಕೊಳ್ಳಬೇಕು. ಒಂದು ವೇಳೆ ಬೀದಿಯಲ್ಲಿ ದನಗಳಿಂದ ಜನತೆ ತೊಂದರೆ ಉಂಟಾದರೆ ಯಾರು ಹೊಣೆ ಎನ್ನುವುದು ಎಂದು ಸಾರ್ವಜನಿಕ ಪ್ರಶ್ನಿದ್ದಾರೆ.</p>.<p>ಇನ್ನೂ ಮುಂದೆ ರಸ್ತೆಯ ಮೇಲೆ ಬಿಡಾಡಿ ದನಗಳಿಂದ ಯಾವುದೇ ಅಪಘಾತ ಉಂಟಾದರೆ ಬೀದಿಗೆ ಬಿಟ್ಟಿರುವ ಮಾಲೀಕನ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಸ್ಥಳೀಯ ನಾಗರೀಕರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>