ರಾಯಚೂರು: ಕನ್ನಡ ಸಾಹಿತ್ಯ ಪರಿಷತ್ತು 2022ನೇ ಸಾಲಿನ ವಿವಿಧ ಪುಸ್ತಕ ದತ್ತಿ ಪ್ರಶಸ್ತಿ ಪ್ರಕಟಿಸಿದೆ.
ರಾಯಚೂರು ಜಿಲ್ಲೆಯ ಮಹಾದೇವ ಪಾಟೀಲ ಅವರ ‘ಸುಡುವ ತಂಗಾಳಿ’ ಕೃತಿಗೆ, ‘ಶ್ರೀಮತಿ ಪಂಪಮ್ಮ -ಶರಣೇಗೌಡ ವಿರೂಪಾಪುರ ದತ್ತಿ ಪ್ರಶಸ್ತಿ’ ಹಾಗೂ ಮಲ್ಲಣ್ಣ ಶಿವರಾಯಗೌಡ ಹರವಾಳ ಅವರ ‘ಜಾನಪದವೆ ಜ್ಞಾನಪದ’ ಕೃತಿಗೆ, ‘ಅಕ್ಕಮ್ಮ ಗಿರಿಗೌಡ ದತ್ತಿ ಪ್ರಶಸ್ತಿ’ ಪ್ರಕಟಿಸಲಾಗಿದೆ.
ಮಾರ್ಚ್ 3ರಂದು ಬೆಂಗಳೂರಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಸಾಪ ಪ್ರಕಟಣೆ ತಿಳಿಸಿದೆ.