<p><strong>ರಾಯಚೂರು:</strong> ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ವರದಿ ಅನ್ವಯ ಅಲೆಮಾರಿಗಳಿಗೆ ಶೇಕಡ 1ರಷ್ಟು ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ನೇತೃತ್ವದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.</p>.<p>ಬಲಾಢ್ಯ ಜಾತಿಗಳೊಂದಿಗೆ ಅಲೆಮಾರಿ ಸಮುದಾಯ ಸೇರಿಸಿ ರಾಜ್ಯದ ಕಾಂಗ್ರೆಸ್ ಸರ್ಕಾರ ಅಲೆಮಾರಿಗಳಿಗೆ ಅನ್ಯಾಯ ಮಾಡಿದೆ ಎಂದು ಅಲೆಮಾರಿಗಳು ಘೋಷಣೆ ಕೂಗಿ ಆಕ್ರೋಶ ವ್ಕಕ್ತಪಡಿಸಿದರು.</p>.<p>ಮೀಸಲಾತಿಗೆ ಜನಸಂಖ್ಯೆಯನ್ನೇ ಮಾನದಂಡವಾಗಿ ಮಾಡಲಾಗಿದೆ. ಅಲೆಮಾರಿ ಸಮುದಾಯದ 49 ಜಾತಿಗಳಿಗೆ ಅನ್ಯಾಯ ಮಾಡಲಾಗಿದೆ. ತೆಲಂಗಾಣದಲ್ಲಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕಲ್ಪಿಸಿಲ್ಲ. ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆಗೆ ಮೀಸಲಾತಿ ನೀಡಲಾಗಿದೆ ಎಂದು ತಿಳಿಸಿದರು.</p>.<p>ಪೋತರಾಜ ಸಮಾಜದವರು ಬಾರಕೋಲನೊಂದಿಗೆ, ಡೊಬ್ಬ ಸಮುದಾಯದವರು ಹಣಿಗೆ ಇನ್ನಿತರ ಮಾರಾಟ ಸಾಮಾಗ್ರಿಗಳೊಂದಿಗೆ. ಅನೇಕ ಮಹಿಳೆಯರು ಮಕ್ಕಳೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.</p>.<p>ಪ್ರತಿಭಟನೆಯಲ್ಲಿ ಬುಡ್ಗ ಜಂಗಮ, ಸುಡುಗಾಡುಸಿದ್ಧ, ಚೆನ್ನದಾಸರ, ಹೊಲೆಯದಾಸರ, ಸಿಳ್ಳೆಕಾತ, ಸಿಂಧೋಳ, ಮಾಲದಾಸರ, ಡೊಂಬರ ಹಾಗೂ ದಕ್ಕಲಿಗ ಸಮುದಾಯವರು ಪಾಲ್ಗೊಂಡಿದ್ದರು.</p>.<p>ಮುಖಂಡರಾದ ಶಿವರಾಜ ರುದ್ರಾಕ್ಷ, ಹುಸೇನಪ್ಪ ಉಮೇಶ , ಶ್ರೀನಿವಾಸ ದಾಸರ, ಯಲ್ಲಪ್ಪ ವಿಭೂತಿ, ಜಂಬಣ್ಣ ಡೊಕ್ಕ, ಶ್ರೀನಿವಾಸ ಸಿಂಧೋಳ, ದುರ್ಗಪ್ಪ ವಿಭೂತೆ, ಬಸಪ್ಪ, ಸಿಂಹದ್ರಿ, ಚನ್ನಪ್ಪ, ಶ್ರೀನಿವಾಸ ಎಸ್ ಆರ್, ರಂಗಪ್ಪ ಯಲ್ಲಪ್ಪ ಜವಳಗೇರಾ, ಮಲ್ಲಯ್ಯ ಸಿರವಾಟಿ, ಎಸ್.ಆರ್.ಭೀಮರಾಯ ಭಾಗವಹಿಸಿದ್ದರು.</p>.<p>ನಂತರ ಅಂಬೇಡ್ಕರ್ ವೃತ್ತದಿಂದ ಟಿಪ್ಪು ಸುಲ್ತಾನ್ ಉದ್ಯಾನವನದ ವರೆಗೆ ಮೆರವಣಿಗೆ ನಡೆಸಿದರು. ಪ್ರತಿಭಟನೆಯಿಂದಾಗಿ ಸ್ಟೇಷನ್ ರಸ್ತೆಯಲ್ಲಿ ಕೆಲ ಹೊತ್ತು ಸಂಚಾರ ಒತ್ತಡ ಉಂಟಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ವರದಿ ಅನ್ವಯ ಅಲೆಮಾರಿಗಳಿಗೆ ಶೇಕಡ 1ರಷ್ಟು ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ನೇತೃತ್ವದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.</p>.<p>ಬಲಾಢ್ಯ ಜಾತಿಗಳೊಂದಿಗೆ ಅಲೆಮಾರಿ ಸಮುದಾಯ ಸೇರಿಸಿ ರಾಜ್ಯದ ಕಾಂಗ್ರೆಸ್ ಸರ್ಕಾರ ಅಲೆಮಾರಿಗಳಿಗೆ ಅನ್ಯಾಯ ಮಾಡಿದೆ ಎಂದು ಅಲೆಮಾರಿಗಳು ಘೋಷಣೆ ಕೂಗಿ ಆಕ್ರೋಶ ವ್ಕಕ್ತಪಡಿಸಿದರು.</p>.<p>ಮೀಸಲಾತಿಗೆ ಜನಸಂಖ್ಯೆಯನ್ನೇ ಮಾನದಂಡವಾಗಿ ಮಾಡಲಾಗಿದೆ. ಅಲೆಮಾರಿ ಸಮುದಾಯದ 49 ಜಾತಿಗಳಿಗೆ ಅನ್ಯಾಯ ಮಾಡಲಾಗಿದೆ. ತೆಲಂಗಾಣದಲ್ಲಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕಲ್ಪಿಸಿಲ್ಲ. ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆಗೆ ಮೀಸಲಾತಿ ನೀಡಲಾಗಿದೆ ಎಂದು ತಿಳಿಸಿದರು.</p>.<p>ಪೋತರಾಜ ಸಮಾಜದವರು ಬಾರಕೋಲನೊಂದಿಗೆ, ಡೊಬ್ಬ ಸಮುದಾಯದವರು ಹಣಿಗೆ ಇನ್ನಿತರ ಮಾರಾಟ ಸಾಮಾಗ್ರಿಗಳೊಂದಿಗೆ. ಅನೇಕ ಮಹಿಳೆಯರು ಮಕ್ಕಳೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.</p>.<p>ಪ್ರತಿಭಟನೆಯಲ್ಲಿ ಬುಡ್ಗ ಜಂಗಮ, ಸುಡುಗಾಡುಸಿದ್ಧ, ಚೆನ್ನದಾಸರ, ಹೊಲೆಯದಾಸರ, ಸಿಳ್ಳೆಕಾತ, ಸಿಂಧೋಳ, ಮಾಲದಾಸರ, ಡೊಂಬರ ಹಾಗೂ ದಕ್ಕಲಿಗ ಸಮುದಾಯವರು ಪಾಲ್ಗೊಂಡಿದ್ದರು.</p>.<p>ಮುಖಂಡರಾದ ಶಿವರಾಜ ರುದ್ರಾಕ್ಷ, ಹುಸೇನಪ್ಪ ಉಮೇಶ , ಶ್ರೀನಿವಾಸ ದಾಸರ, ಯಲ್ಲಪ್ಪ ವಿಭೂತಿ, ಜಂಬಣ್ಣ ಡೊಕ್ಕ, ಶ್ರೀನಿವಾಸ ಸಿಂಧೋಳ, ದುರ್ಗಪ್ಪ ವಿಭೂತೆ, ಬಸಪ್ಪ, ಸಿಂಹದ್ರಿ, ಚನ್ನಪ್ಪ, ಶ್ರೀನಿವಾಸ ಎಸ್ ಆರ್, ರಂಗಪ್ಪ ಯಲ್ಲಪ್ಪ ಜವಳಗೇರಾ, ಮಲ್ಲಯ್ಯ ಸಿರವಾಟಿ, ಎಸ್.ಆರ್.ಭೀಮರಾಯ ಭಾಗವಹಿಸಿದ್ದರು.</p>.<p>ನಂತರ ಅಂಬೇಡ್ಕರ್ ವೃತ್ತದಿಂದ ಟಿಪ್ಪು ಸುಲ್ತಾನ್ ಉದ್ಯಾನವನದ ವರೆಗೆ ಮೆರವಣಿಗೆ ನಡೆಸಿದರು. ಪ್ರತಿಭಟನೆಯಿಂದಾಗಿ ಸ್ಟೇಷನ್ ರಸ್ತೆಯಲ್ಲಿ ಕೆಲ ಹೊತ್ತು ಸಂಚಾರ ಒತ್ತಡ ಉಂಟಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>