<p><strong>ಸಿರವಾರ: </strong>ಮಲ್ಲಟ ಹೋಬಳಿಯ ಮಲ್ಲಟ, ಬಲ್ಲಟಗಿ, ಬಸವಣ್ಣ ಕ್ಯಾಂಪ್ನಲ್ಲಿನ ಕೀಟನಾಶಕ ಮಾರಾಟ ಅಂಗಡಿಗಳ ಮೇಲೆ ಕೃಷಿ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ಕೀಟನಾಶಕಗಳನ್ನು ಪರಿಶೀಲಿಸಿದರು.</p>.<p>ದಾಳಿ ನಡೆಸಿ ಮಾತನಾಡಿದ ಕೃಷಿ ಅಧಿಕಾರಿ ಮಾರುತಿ ಅವರು,‘ಈಗಾಗಲೇ ಉತ್ತಮ ಮಳೆಯಿಂದ ರೈತರು ಭತ್ತ, ತೊಗರಿ, ಹತ್ತಿ ನಾಟಿ ಮಾಡಿದ್ದು, ಅದಕ್ಕೆ ಯಾವುದೇ ತೊಂದರೆ ಬರದಂತೆ ನೋಡಿಕೊಳ್ಳಲು ವಿವಿಧ ಬಗೆಯ ಕ್ರಿಮಿನಾಶಕಗಳನ್ನು ಬಳಸುತ್ತಾರೆ’ ಎಂದು ಅವರು ಈ ವೇಳೆತಿಳಿದರು.</p>.<p>‘ದಾಳಿಯಲ್ಲಿ ಅಂಗಡಿಯಲ್ಲಿರುವ ಕೀಟನಾಶಕದ ಗುಣಮಟ್ಟ, ಅವಧಿಯನ್ನು ಪರಿಶೀಲಿಸುವ ಜತೆಗೆ ಅನುಮಾನಾಸ್ಪದ ಕೀಟನಾಶಕಗಳ ಮಾದರಿಯನ್ನು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲಾಗುವುದು’ ಎಂದು ಅವರು ಹೇಳಿದರು.</p>.<p>ಮಲ್ಲಟ ರೈತ ಸಂಪರ್ಕ ಕೇಂದ್ರದ ನಾಗರಾಜ ಕಂಬಾರ್ ಹಾಗೂ ರಾಜಭಕ್ಷ ಮಲ್ಲಟ ಇದ್ದರು.</p>.<p class="Briefhead"><strong>ಮಾದರಿ ರವಾನೆ</strong></p>.<p><strong>ಗಿಲ್ಲೇಸೂಗೂರು (ಶಕ್ತಿನಗರ): </strong>ಇಲ್ಲಿನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಂಜುಳಾ ನೇತೃತ್ವದ ತಂಡ ಗ್ರಾಮದ ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.</p>.<p>‘ಗಿಲ್ಲೇಸೂಗೂರು ಹೋಬಳಿಯಲ್ಲಿ ತೊಗರಿ, ಹತ್ತಿ ಮತ್ತು ಭತ್ತ ವ್ಯಾಪಕವಾಗಿ ಬೆಳೆಯಲಾಗಿದೆ. ಈ ಬೆಳೆಗಳಲ್ಲಿ ರೋಗ ಹಾಗೂ ಕೀಟಬಾಧೆ ಕಾಣಿಸಿಕೊಂಡಿದೆ. ರೈತರು ಉತ್ತಮ ಕೀಟನಾಶಕ ಖರೀದಿಸಿ, ಸಿಂಪಡಿಸಬೇಕು’ ಎಂದು ಅಧಿಕಾರಿಗಳು ತಿಳಿಸಿದರು.</p>.<p>ರೈತರಿಗೆ ಉತ್ತಮ ಗುಣಮಟ್ಟದ ಪರಿಕರಗಳು ಸಿಗಬೇಕು. ಆದ್ದರಿಂದ ಮಾರಾಟ ಮಳಿಗೆಗಳಲ್ಲಿ ಅನಧಿಕೃತ ಹಾಗೂ ಬಯೋ ಕೀಟನಾಶಕ ಮಾರಾಟ ಮಾಡಲಾಗುತ್ತಿದೆಯೇ ಎಂದು ಪರಿಶೀಲನೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.</p>.<p>‘ಗುಣಮಟ್ಟ ವಿಶ್ಲೇಷಣೆಗಾಗಿ ಮಳಿಗೆಗಳಲ್ಲಿ ಸಂಶಯಾಸ್ಪದ ಪರಿಕರಗಳ ಮಾದರಿಗಳನ್ನು ಪಡೆದುಕೊಳ್ಳಲಾಗಿದೆ. ಆದಾಗ್ಯೂ ಅನಧಿಕೃತವಾಗಿ ಹಾಗೂ ಬಯೋ ಕ್ರಿಮಿನಾಶಕ ಮಾರಾಟ ಮಾಡಿದಲ್ಲಿ ಕ್ರಮ ಜರುಗಿಸಲಾಗುವುದು. ರೈತರು ಖರೀದಿಸುವ ಪರಿಕರಗಳಿಗೆ ಕಡ್ಡಾಯವಾಗಿ ರಶೀದಿಗಳನ್ನು ನೀಡುವಂತೆ ಸೂಚಿಸಲಾಗಿದೆ’ ಎಂದು ಕೃಷಿ ಅಧಿಕಾರಿ ಮಂಜುಳಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರವಾರ: </strong>ಮಲ್ಲಟ ಹೋಬಳಿಯ ಮಲ್ಲಟ, ಬಲ್ಲಟಗಿ, ಬಸವಣ್ಣ ಕ್ಯಾಂಪ್ನಲ್ಲಿನ ಕೀಟನಾಶಕ ಮಾರಾಟ ಅಂಗಡಿಗಳ ಮೇಲೆ ಕೃಷಿ ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ಕೀಟನಾಶಕಗಳನ್ನು ಪರಿಶೀಲಿಸಿದರು.</p>.<p>ದಾಳಿ ನಡೆಸಿ ಮಾತನಾಡಿದ ಕೃಷಿ ಅಧಿಕಾರಿ ಮಾರುತಿ ಅವರು,‘ಈಗಾಗಲೇ ಉತ್ತಮ ಮಳೆಯಿಂದ ರೈತರು ಭತ್ತ, ತೊಗರಿ, ಹತ್ತಿ ನಾಟಿ ಮಾಡಿದ್ದು, ಅದಕ್ಕೆ ಯಾವುದೇ ತೊಂದರೆ ಬರದಂತೆ ನೋಡಿಕೊಳ್ಳಲು ವಿವಿಧ ಬಗೆಯ ಕ್ರಿಮಿನಾಶಕಗಳನ್ನು ಬಳಸುತ್ತಾರೆ’ ಎಂದು ಅವರು ಈ ವೇಳೆತಿಳಿದರು.</p>.<p>‘ದಾಳಿಯಲ್ಲಿ ಅಂಗಡಿಯಲ್ಲಿರುವ ಕೀಟನಾಶಕದ ಗುಣಮಟ್ಟ, ಅವಧಿಯನ್ನು ಪರಿಶೀಲಿಸುವ ಜತೆಗೆ ಅನುಮಾನಾಸ್ಪದ ಕೀಟನಾಶಕಗಳ ಮಾದರಿಯನ್ನು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲಾಗುವುದು’ ಎಂದು ಅವರು ಹೇಳಿದರು.</p>.<p>ಮಲ್ಲಟ ರೈತ ಸಂಪರ್ಕ ಕೇಂದ್ರದ ನಾಗರಾಜ ಕಂಬಾರ್ ಹಾಗೂ ರಾಜಭಕ್ಷ ಮಲ್ಲಟ ಇದ್ದರು.</p>.<p class="Briefhead"><strong>ಮಾದರಿ ರವಾನೆ</strong></p>.<p><strong>ಗಿಲ್ಲೇಸೂಗೂರು (ಶಕ್ತಿನಗರ): </strong>ಇಲ್ಲಿನ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಂಜುಳಾ ನೇತೃತ್ವದ ತಂಡ ಗ್ರಾಮದ ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.</p>.<p>‘ಗಿಲ್ಲೇಸೂಗೂರು ಹೋಬಳಿಯಲ್ಲಿ ತೊಗರಿ, ಹತ್ತಿ ಮತ್ತು ಭತ್ತ ವ್ಯಾಪಕವಾಗಿ ಬೆಳೆಯಲಾಗಿದೆ. ಈ ಬೆಳೆಗಳಲ್ಲಿ ರೋಗ ಹಾಗೂ ಕೀಟಬಾಧೆ ಕಾಣಿಸಿಕೊಂಡಿದೆ. ರೈತರು ಉತ್ತಮ ಕೀಟನಾಶಕ ಖರೀದಿಸಿ, ಸಿಂಪಡಿಸಬೇಕು’ ಎಂದು ಅಧಿಕಾರಿಗಳು ತಿಳಿಸಿದರು.</p>.<p>ರೈತರಿಗೆ ಉತ್ತಮ ಗುಣಮಟ್ಟದ ಪರಿಕರಗಳು ಸಿಗಬೇಕು. ಆದ್ದರಿಂದ ಮಾರಾಟ ಮಳಿಗೆಗಳಲ್ಲಿ ಅನಧಿಕೃತ ಹಾಗೂ ಬಯೋ ಕೀಟನಾಶಕ ಮಾರಾಟ ಮಾಡಲಾಗುತ್ತಿದೆಯೇ ಎಂದು ಪರಿಶೀಲನೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.</p>.<p>‘ಗುಣಮಟ್ಟ ವಿಶ್ಲೇಷಣೆಗಾಗಿ ಮಳಿಗೆಗಳಲ್ಲಿ ಸಂಶಯಾಸ್ಪದ ಪರಿಕರಗಳ ಮಾದರಿಗಳನ್ನು ಪಡೆದುಕೊಳ್ಳಲಾಗಿದೆ. ಆದಾಗ್ಯೂ ಅನಧಿಕೃತವಾಗಿ ಹಾಗೂ ಬಯೋ ಕ್ರಿಮಿನಾಶಕ ಮಾರಾಟ ಮಾಡಿದಲ್ಲಿ ಕ್ರಮ ಜರುಗಿಸಲಾಗುವುದು. ರೈತರು ಖರೀದಿಸುವ ಪರಿಕರಗಳಿಗೆ ಕಡ್ಡಾಯವಾಗಿ ರಶೀದಿಗಳನ್ನು ನೀಡುವಂತೆ ಸೂಚಿಸಲಾಗಿದೆ’ ಎಂದು ಕೃಷಿ ಅಧಿಕಾರಿ ಮಂಜುಳಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>