ನೆತ್ತಿ ಸುಡುವ ಬಿಸಿಲು, ಕೆಳಗಡೆ ಕಾದ ಡಾಂಬರು ರಸ್ತೆ. ಮುಖಕ್ಕೆ ಬಡಿಯುವ ಬಿಸಿ ಗಾಳಿಯ ನಡುವೆ ಪಾದಯಾತ್ರೆ ಮಾಡುವ ಭಕ್ತರು ಒಂದೆಡೆಯಾದರೆ, ಅವರ ಎಲ್ಲ ರೀತಿಯ ಸೇವೆಗೆ ಸಿದ್ಧರಾಗಿರುವ ಭಕ್ತರು ಮತ್ತೊಂದೆಡೆ. ಹೀಗೆ, ಈ ಪಾದಯಾತ್ರೆಗಳು, ಸೇವಾರ್ಥಿಗಳು ಮಾಡುವ ಸ್ಮರಣೆ ಒಂದೇ.. ಅದುವೇ ಶ್ರೀಶೈಲ ಮಲ್ಲಯ್ಯ... ಮಲ್ಲಯ್ಯ.... ಮಲ್ಲಯ್ಯ… ಬಾಗಲಕೋಟೆ–ರಾಯಚೂರು ಹೆದ್ದಾರಿಯಲ್ಲಿ ಈ ದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯವಿದು.