ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರದಲ್ಲಿ ತೆಂಗಿನ ಮರಗಳಿಗೆ ನುಸಿ, ಗರಿರೋಗ: ರೈತರಲ್ಲಿ ಆತಂಕ

Published 18 ಜೂನ್ 2023, 14:11 IST
Last Updated 18 ಜೂನ್ 2023, 14:11 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನ ನಲ್ಲಹಳ್ಳಿ ಗ್ರಾಮದ ಸುತ್ತಮುತ್ತ ಪ್ರದೇಶದಲ್ಲಿ ತೆಂಗಿನ ಮರಗಳಿಗೆ ನುಸಿ ಮತ್ತು ಗರಿ ರೋಗ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಸೃಷ್ಟಿಸಿದೆ.

ಈ ರೋಗ ಒಮ್ಮೆ ಒಂದು ತೋಟಕ್ಕೆ ಬಂದರೆ ಇಡೀ ಪ್ರದೇಶದಲ್ಲಿನ ತೆಂಗಿನ ಮರಗಳಿಗೆ ಹರಡಿ ತೋಟವೇ ನಾಶವಾಗುತ್ತದೆ.

ನುಸಿ ಮತ್ತು ಗರಿ ರೋಗದ ಕೀಟಗಾಳಿಯಲ್ಲಿ ಸುಲಭವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತವೆ. ಒಂದು ಮರದಲ್ಲಿ ರೋಗ ಕಾಣಿಸಿಕೊಂಡರೆ ಆ ಮರದ ಪೂರ್ಣ ಗರಿಗಳು ನಾಶವಾಗಿ ತೋಟದಲ್ಲಿನ ಎಲ್ಲ ಮರಗಳು ರೋಗದಿಂದ ಬಾಧಿಸಿ ಒಣಗಿ ಹೋಗುತ್ತವೆ.

ನಲ್ಲಹಳ್ಳಿ ಗ್ರಾಮದ ಎಲ್ಲ ರೈತರ ತೋಟಗಳು ಇದೇ ರೀತಿ ಆಗಿದ್ದು ಈಗ ಮರಗಳು ನುಸಿ ಮತ್ತು ಗರಿ ರೋಗದಿಂದ ಒಣಗಲು ಪ್ರಾರಂಬಿಸಿವೆ.

ತೋಟಗಾರಿಕೆ ಇಲಾಖೆ ಸೇರಿದಂತೆ ತಾಲ್ಲೂಕು ಆಡಳಿತ ಈ ಕಡೆ ಗಮನಹರಿಸಿ ನುಸಿ ಮತ್ತು ಗರಿ ರೋಗಸಂಪೂರ್ಣವಾಗಿ ನಾಶಪಡಿಸಿ ರೈತರ ನೆರವಿಗೆ ಬರಬೇಕೆಂದು ನಲ್ಲಹಳ್ಳಿ ಗ್ರಾಮದ ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT