<p><strong>ಕನಕಪುರ (ಬೆಂಗಳೂರು ದಕ್ಷಿಣ):</strong> ತಾಲ್ಲೂಕಿನ ಸಾತನೂರು ಅರಣ್ಯ ವಲಯದ ಹಾರೋಬೆಲೆ ಜಲಾಶಯದ ಹುಲಿಬೆಲೆ ಮತ್ತು ಕೂನೂರು ಸಮೀಪದ ಹಿನ್ನೀರು ದಾಟುತ್ತಿದ್ದ ಎರಡು ಕಾಡಾನೆಗಳು ನೀರಿನಲ್ಲಿ ಬೆಳೆದಿದ್ದ ಕಳೆಗೆ ಸಿಲುಕಿದ್ದು, ಮುಳುಗಿ ಮೃತಪಟ್ಟಿವೆ.</p>.<p>ಹಿನ್ನೀರು ದಾಟಿ ಬನ್ನೇರುಘಟ್ಟ ಅರಣ್ಯದತ್ತ ಹೋಗುತ್ತಿದ್ದ ಆನೆಗಳ ಕಾಲುಗಳಿಗೆ ಕಳೆ(ಸತ್ತೆ) ಸುತ್ತಿಕೊಂಡಿದೆ. ಇದರಿಂದ ಚಲಿಸಲಾಗದೆ ನೀರಲ್ಲಿ ಮುಳುಗಿ ಕೊನೆಯುಸಿರೆಳೆದಿವೆ. ಮೃತಪಟ್ಟ ಎರಡೂ ಗಂಡಾನೆಗಳು. ಒಂದಕ್ಕೆ 20 ವರ್ಷ, ಮತ್ತೊಂದಕ್ಕೆ 15 ವರ್ಷ ವಯಸ್ಸಾಗಿದೆ. </p>.<p>ತಿಂಗಳ ಹಿಂದೆಯಷ್ಟೇ ಚನ್ನಪಟ್ಟಣ ತಾಲ್ಲೂಕಿನಲ್ಲಿ ವಿದ್ಯುತ್ ಪ್ರವಹಿಸಿ ಕಾಡಾನೆಯೊಂದು ಜೀವ ಕಳೆದುಕೊಂಡಿತ್ತು. ಅದರ ಬೆನ್ನಲ್ಲೇ ಈಗ ಮತ್ತೊಂದು ಅವಘಡ ಸಂಭವಿಸಿದೆ.</p>.<p><strong>ಏಳು ಆನೆಗಳಿದ್ದವು:</strong> ‘ಬನ್ನೇರುಘಟ್ಟ ಅರಣ್ಯದಿಂದ ತೆಂಗಿನಕಲ್ಲು ಅರಣ್ಯಕ್ಕೆ ಏಳು ಆನೆಗಳ ಹಿಂಡು ಬಂದಿತ್ತು. ಮತ್ತೆ ಬನ್ನೇರುಘಟ್ಟಕ್ಕೆ ಓಡಿಸಲು ಶುಕ್ರವಾರ ಕಾರ್ಯಾಚರಣೆ ನಡೆಸಲಾಗಿತ್ತು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.<br /><br />‘ಆನೆಗಳ ಹಿಂಡು ಹಿನ್ನೀರು ದಾಟಲು ಮುಂದಾಗಿತ್ತು. ಐದು ಆನೆಗಳು ದಾಟಿದ್ದವು. ಎರಡು ನೀರಿನಲ್ಲಿ ಸಿಲುಕಿದ್ದವು. ಅವುಗಳಿಗಾಗಿ ಹುಡುಕಾಟ ನಡೆದಿತ್ತು’ ಎಂದು ಹೇಳಿದರು.</p>.<p>ಹಿನ್ನೀರಿನಲ್ಲಿ ಆನೆಗಳ ಕಳೇಬರ ಗಮನಿಸಿದ ಸ್ಥಳೀಯರು ಗಮನಕ್ಕೆ ತಂದಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು ಎಂದು ತಿಳಿಸಿದರು. </p>.<p>ಭಾರಿ ಪ್ರಮಾಣದಲ್ಲಿ ಬೆಳೆದು ನಿಂತಿರುವ ಕಳೆ ಸಂಪೂರ್ಣವಾಗಿ ಹಿನ್ನೀರನ್ನು ಆವರಿಸಿಕೊಂಡಿದೆ. ನೆಲದಿಂದ ನೀರಿನ ಮೇಲ್ಮೈವರೆಗೆ ಜಾಲದಂತೆ ಒತ್ತೊತ್ತಾಗಿ ಹಬ್ಬಿರುವ ಕಳೆ ಆನೆಗಳ ಕಾಲಿಗೆ ಸುತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.</p>.<p>ಸ್ಥಳಕ್ಕೆ ಬೆಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ (ಸಿಎಫ್) ಶಿವಶಂಕರ್, ಡಿಸಿಎಫ್ ರಾಮಕೃಷ್ಣಪ್ಪ ಮತ್ತು ಇತರೆ ಅಧಿಕಾರಿಗಳು ಭೇಟಿ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನಕಪುರ (ಬೆಂಗಳೂರು ದಕ್ಷಿಣ):</strong> ತಾಲ್ಲೂಕಿನ ಸಾತನೂರು ಅರಣ್ಯ ವಲಯದ ಹಾರೋಬೆಲೆ ಜಲಾಶಯದ ಹುಲಿಬೆಲೆ ಮತ್ತು ಕೂನೂರು ಸಮೀಪದ ಹಿನ್ನೀರು ದಾಟುತ್ತಿದ್ದ ಎರಡು ಕಾಡಾನೆಗಳು ನೀರಿನಲ್ಲಿ ಬೆಳೆದಿದ್ದ ಕಳೆಗೆ ಸಿಲುಕಿದ್ದು, ಮುಳುಗಿ ಮೃತಪಟ್ಟಿವೆ.</p>.<p>ಹಿನ್ನೀರು ದಾಟಿ ಬನ್ನೇರುಘಟ್ಟ ಅರಣ್ಯದತ್ತ ಹೋಗುತ್ತಿದ್ದ ಆನೆಗಳ ಕಾಲುಗಳಿಗೆ ಕಳೆ(ಸತ್ತೆ) ಸುತ್ತಿಕೊಂಡಿದೆ. ಇದರಿಂದ ಚಲಿಸಲಾಗದೆ ನೀರಲ್ಲಿ ಮುಳುಗಿ ಕೊನೆಯುಸಿರೆಳೆದಿವೆ. ಮೃತಪಟ್ಟ ಎರಡೂ ಗಂಡಾನೆಗಳು. ಒಂದಕ್ಕೆ 20 ವರ್ಷ, ಮತ್ತೊಂದಕ್ಕೆ 15 ವರ್ಷ ವಯಸ್ಸಾಗಿದೆ. </p>.<p>ತಿಂಗಳ ಹಿಂದೆಯಷ್ಟೇ ಚನ್ನಪಟ್ಟಣ ತಾಲ್ಲೂಕಿನಲ್ಲಿ ವಿದ್ಯುತ್ ಪ್ರವಹಿಸಿ ಕಾಡಾನೆಯೊಂದು ಜೀವ ಕಳೆದುಕೊಂಡಿತ್ತು. ಅದರ ಬೆನ್ನಲ್ಲೇ ಈಗ ಮತ್ತೊಂದು ಅವಘಡ ಸಂಭವಿಸಿದೆ.</p>.<p><strong>ಏಳು ಆನೆಗಳಿದ್ದವು:</strong> ‘ಬನ್ನೇರುಘಟ್ಟ ಅರಣ್ಯದಿಂದ ತೆಂಗಿನಕಲ್ಲು ಅರಣ್ಯಕ್ಕೆ ಏಳು ಆನೆಗಳ ಹಿಂಡು ಬಂದಿತ್ತು. ಮತ್ತೆ ಬನ್ನೇರುಘಟ್ಟಕ್ಕೆ ಓಡಿಸಲು ಶುಕ್ರವಾರ ಕಾರ್ಯಾಚರಣೆ ನಡೆಸಲಾಗಿತ್ತು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.<br /><br />‘ಆನೆಗಳ ಹಿಂಡು ಹಿನ್ನೀರು ದಾಟಲು ಮುಂದಾಗಿತ್ತು. ಐದು ಆನೆಗಳು ದಾಟಿದ್ದವು. ಎರಡು ನೀರಿನಲ್ಲಿ ಸಿಲುಕಿದ್ದವು. ಅವುಗಳಿಗಾಗಿ ಹುಡುಕಾಟ ನಡೆದಿತ್ತು’ ಎಂದು ಹೇಳಿದರು.</p>.<p>ಹಿನ್ನೀರಿನಲ್ಲಿ ಆನೆಗಳ ಕಳೇಬರ ಗಮನಿಸಿದ ಸ್ಥಳೀಯರು ಗಮನಕ್ಕೆ ತಂದಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು ಎಂದು ತಿಳಿಸಿದರು. </p>.<p>ಭಾರಿ ಪ್ರಮಾಣದಲ್ಲಿ ಬೆಳೆದು ನಿಂತಿರುವ ಕಳೆ ಸಂಪೂರ್ಣವಾಗಿ ಹಿನ್ನೀರನ್ನು ಆವರಿಸಿಕೊಂಡಿದೆ. ನೆಲದಿಂದ ನೀರಿನ ಮೇಲ್ಮೈವರೆಗೆ ಜಾಲದಂತೆ ಒತ್ತೊತ್ತಾಗಿ ಹಬ್ಬಿರುವ ಕಳೆ ಆನೆಗಳ ಕಾಲಿಗೆ ಸುತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.</p>.<p>ಸ್ಥಳಕ್ಕೆ ಬೆಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ (ಸಿಎಫ್) ಶಿವಶಂಕರ್, ಡಿಸಿಎಫ್ ರಾಮಕೃಷ್ಣಪ್ಪ ಮತ್ತು ಇತರೆ ಅಧಿಕಾರಿಗಳು ಭೇಟಿ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>