<p><strong>ರಾಮನಗರ</strong>: ‘ಸುಮಾರು 188 ದೇಶಗಳಲ್ಲಿ ಭಕ್ತರನ್ನು ಹೊಂದಿರುವ ಜಗಪೂಜಿತ ಕೃಷ್ಣ ಪವಾಡ ಪುರುಷ. ದೇಶ– ವಿದೇಶಗಳಲ್ಲಿ ಕೃಷ್ಣನ ನಾಮ ಧ್ಯಾನ, ಕೃಷ್ಣ ಮಠಗಳಲ್ಲಿ ಭಗವದ್ಗೀತೆ ಉಪದೇಶ, ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಬಣ್ಣಿಸಿದರು.</p>.<p>ನಗರದ ಹಳೆ ಬಸ್ ನಿಲ್ದಾಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಾದವ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕೃಷ್ಣ ಜಯಂತಿ ಕಾರ್ಯಕ್ರಮ ಉದ್ಫಾಟಿಸಿ ಮಾತನಾಡಿದ ಅವರು, ‘ಮಹಾ ವಿಷ್ಣುವಿನ ಅವತಾರ ಪುರುಷನಾದ ಕೃಷ್ಣ ದ್ವಾಪರ ಯುಗದಲ್ಲಿ ಜನಿಸಿದರು’ ಎಂದರು.</p>.<p>‘ನಾವೆಲ್ಲರು ಕೃಷ್ಣನ ಬಾಲ್ಯಾವಸ್ಥೆಯನ್ನು ತಿಳಿಯಬೇಕು. ಮಹಾಭಾರತದಲ್ಲಿನ ಯುದ್ಧದ ಸಂದರ್ಭದಲ್ಲಿ ರಚಿತವಾದ ಭಗವದ್ಗೀತೆಯ 18 ಅಧ್ಯಯನಗಳನ್ನು ತಿಳಿದುಕೊಳ್ಳಬೇಕು. ಆಗ ಧರ್ಮವನ್ನು ನೀವು ಕಾಯುತ್ತಿರ ಮತ್ತು ನೀವು ಜೀವನದಲ್ಲಿ ಪರಿಪೂರ್ಣ ಮನುಷ್ಯನಾಗುತ್ತೀರಿ ತನ್ನ ಉಪದೇಶದಲ್ಲಿ ತಿಳಿಸಿದ್ದಾರೆ’ ಎಂದು ಹೇಳಿದರು.</p>.<p>ಜಾನಪದ ಲೋಕದ ಕ್ಯೂರೇಟರ್ ಡಾ. ಯು.ಎಂ. ರವಿ ಮಾತನಾಡಿ, ‘ಸಮಾಜದಲ್ಲಿ ಅಧರ್ಮ ಹಾಗೂ ಕೆಟ್ಟ ವ್ಯವಸ್ಥೆ ಉಂಟಾದಾಗ ಮಹಾನ್ ವ್ಯಕ್ತಿಗಳು ಜನಿಸುತ್ತಾರೆ ಎನ್ನುವುದಕ್ಕೆ ಅನೇಕ ಉದಾಹರಣೆಗಳಿವೆ. ಅದೇ ರೀತಿ ಜನಿಸಿದ ಶ್ರೀ ಕೃಷ್ಣ ಸಮಾಜದಲ್ಲಿ ಅಧರ್ಮ, ಅನೀತಿ ನಾಶ ಮಾಡಿದ ಮಹಾನ್ ಚೇತನ’ ಎಂದರು.</p>.<p>‘ನಾಯಕರಾದವರು ಯಾವ ರೀತಿ ಗುಣಲಕ್ಷಣಗಳನ್ನು ಹೊಂದಿರಬೇಕು ಎಂಬುದನ್ನು ಶಾಂತಿ ಪರ್ವದಲ್ಲಿ ಕೃಷ್ಣ ಬೋಧನೆ ಮಾಡಿದ್ದಾರೆ. ಇತಿಹಾಸದಲ್ಲಿ ಯುದ್ದ, ರಾಜ, ರಾಜನ ವಿಚಾರಗಳು, ರಾಜನ ಅಧಿಕಾರ, ಪ್ರಜೆಗಳು ಹಾಗೂ ಜನರನ್ನು ರಕ್ಷಣೆ ಮಾಡುವ ಕುರಿತು, ರಾಜ ಧರ್ಮ, ನಾಯಕ ಧರ್ಮ ಹಾಗೂ ಇತರೆ ಹಲವಾರು ವಿಚಾರಗಳನ್ನು 20 ಸಾವಿರ ವರ್ಷಗಳ ಹಿಂದೆಯೇ ಶಾಂತಿ ಪರ್ವದಲ್ಲಿ ಬೋಧನೆ ಮಾಡಿದ್ದಾರೆ’ ಎಂದು ಹೇಳಿದರು.</p>.<p>‘ಕೃಷ್ಣ ತತ್ವವನ್ನು ಹೇಗೆ ಪರಿಪಾಲನೆ ಮಾಡುತ್ತಿದ್ದೇವೆ ಹಾಗೂ ಹೇಗೆ ಅಳವಡಿಸಿಕೊಂಡಿದ್ದೇವೆ ಎಂಬುದನ್ನು ಎಲ್ಲರೂ ಮನಗಂಡಿದ್ದರೆ, ಈ ಸಮಾಜದಲ್ಲಿ ಎಲ್ಲರೂ ಸುಖ– ಶಾಂತಿಯಿಂದ ಬದುಕಬಹುದು. ಕೃಷ್ಣ ಗೀತೆಯನ್ನು ಉಪದೇಶಿಸಿದ್ದು ಅರ್ಜುನನಿಗೆ ಮಾತ್ರವಲ್ಲ. ಜನಸಾಮಾನ್ಯರನ್ನು ದೃಷ್ಠಿಯಲ್ಲಿಟ್ಟುಕೊಂಡು ಎಲ್ಲರಿಗೂ ಅನುಕೂಲವಾಗುವಂತೆ ಗೀತೆಯ ಉಪದೇಶವನ್ನು ನೀಡಿದ್ದಾರೆ’ ಎಂದರು.</p>.<p>ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕೃಷ್ಣ ವೇಷಧಾರಿ ಮಕ್ಕಳಿಗೆ ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಜೂನಿಯರ್ ಕಾಲೇಜು ಮೈದಾನದಿಂದ ಹಳೆ ಬಸ್ ನಿಲ್ದಾಣದವರೆಗೆ ಕೃಷ್ಣ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಕಲಾತಂಡದೊಂದಿಗೆ ಮೆರವಣಿಗೆ ಮಾಡಲಾಯಿತು.</p>.<p>ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಬಿ.ಎಲ್. ನಾಗಪ್ಪ ಸ್ವಾಮೀಜಿ, ಸಮುದಾಯದ ಮುಖಂಡರಾ ಕೃಷ್ಣ ಯಾದವ್, ರಾಜು, ರೈಡ್ ನಾಗರಾಜ್, ನಾರಾಯಣ್, ಸಿ.ಎನ್. ನಾಗರಾಜು, ಮಾದಯ್ಯ, ನರಸಿಂಹಮೂರ್ತಿ, ವೆಂಕಟರಮಣ, ನರಸಿಂಹಯ್ಯ, ಗೋವಿಂದರಾಜು, ಶಶಿ, ನಟರಾಜು, ಸುರೇಶ್, ಕನ್ನಡ ಮಂಜು, ಆರ್.ಬಿ.ಎಲ್. ಲೋಕೇಶ್ ಹಾಗೂ ಇತರರು ಇದ್ದರು. ಸೇರಿದಂತೆ ಇತರರು ಉಪಸ್ಥಿತರಿದ್ದರು.</p>.<p><strong>ಅದ್ಧೂರಿ ಕೃಷ್ಣ ರಥೋತ್ಸವ </strong></p><p>ರಾಮನಗರ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಾಲ್ಲೂಕಿನ ಕೃಷ್ಣಾಪುರದೊಡ್ಡಿಯಲ್ಲಿರುವ ಕೃಷ್ಣ ದೇವಾಲಯದಲ್ಲಿ ಶನಿವಾರ 8ನೇ ವರ್ಷದ ಕೃಷ್ಣ ದೇವರ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ಜರುಗಿತು. ಗ್ರಾಮಸ್ಥರು ಕೃಷ್ಣನ ಜನ್ಮದಿನವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಿದರು.</p><p> ಬೆಳಿಗ್ಗೆ ದೇವಾಲಯದಲ್ಲಿ ಕೃಷ್ಣನಿಗೆ ವಿಶೇಷ ಅಭಿಷೇಕ ಪೂಜೆ ನಡೆತು. ದೇವಾಲಯದ ಮೂಲ ಕೃಷ್ಣ ವಿಗ್ರಹಮೂರ್ತಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಅಲಂಕೃತ ಕೃಷ್ಣನ ಮೂರ್ತಿಯನ್ನು 9 ಗಂಟೆಗೆ ರಥದಲ್ಲಿ ಕೂರಿಸಿ ಮಂಗಳವಾದ್ಯದೊಂದಿಗೆ ರಥೋತ್ಸವ ಮಾಡಲಾಯಿತು. ಗ್ರಾಮದ ಬೀದಿಯಲ್ಲಿ ಸಾಗಿದ ರಥಕ್ಕೆ ಭಕ್ತರು ನಮಿಸಿದರು. ಬಾಳೆಹಣ್ಣು ಎಸೆದು ಸಂಭ್ರಮಿಸಿದರು. ಕೃಷ್ಣನಿಗೆ ಘೋಷಣೆಗಳನ್ನು ಕೂಗಿ ಭಕ್ತಿ ಮೆರೆದರು. ಪೂಜಾ ಕುಣಿತ ವೀರಗಾಸೆ ಡೊಳ್ಳು ಚಿಲಿಪಿಲಿ ಗೊಂಬೆ ಹುಲಿವೇಷ ಕುಣಿತ ಮತ್ತಿತರ ಜನಪದ ಕಲಾತಂಡಗಳು ರಥೋತ್ಸವಕ್ಕೆ ಮೆರಗು ತಂದವು. </p><p>ತಮ್ಮ ಬೀದಿಗೆ ಬಂದ ರಥಕ್ಕೆ ಭಕ್ತರು ಪೂಜೆ ಸಲ್ಲಿಸಿದರು. ಗ್ರಾಮದ ಮಕ್ಕಳು ಕೃಷ್ಣನ ವೇಷದಲ್ಲಿ ಗಮನ ಸೆಳೆದರು. ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ದೇವಾಲಯದ ಅರ್ಚಕ ವೆಂಕಟೇಶ್ ರಥೋತ್ಸವ ಪೂಜಾ ಕೈಂಕರ್ಯ ನಡೆಸಿದರು. ಗ್ರಾಮದ ಮುಖಂಡರಾ ಕೃಷ್ಣಪ್ಪ ವಾಸು ಪುಟ್ಟಮಾಸ್ತಿಗೌಡ ಜಯಣ್ಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ವರದರಾಜು ಸತೀಶ್ ಪಾಂಡು ಕವಿತಾ ರಾವ್ ವೆಂಕಟೇಶ್ ಅಭಿಷೇಕ್ ಕುಮಾರ್ ಸಂದೇಶ್ ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ</strong>: ‘ಸುಮಾರು 188 ದೇಶಗಳಲ್ಲಿ ಭಕ್ತರನ್ನು ಹೊಂದಿರುವ ಜಗಪೂಜಿತ ಕೃಷ್ಣ ಪವಾಡ ಪುರುಷ. ದೇಶ– ವಿದೇಶಗಳಲ್ಲಿ ಕೃಷ್ಣನ ನಾಮ ಧ್ಯಾನ, ಕೃಷ್ಣ ಮಠಗಳಲ್ಲಿ ಭಗವದ್ಗೀತೆ ಉಪದೇಶ, ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಬಣ್ಣಿಸಿದರು.</p>.<p>ನಗರದ ಹಳೆ ಬಸ್ ನಿಲ್ದಾಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಾದವ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕೃಷ್ಣ ಜಯಂತಿ ಕಾರ್ಯಕ್ರಮ ಉದ್ಫಾಟಿಸಿ ಮಾತನಾಡಿದ ಅವರು, ‘ಮಹಾ ವಿಷ್ಣುವಿನ ಅವತಾರ ಪುರುಷನಾದ ಕೃಷ್ಣ ದ್ವಾಪರ ಯುಗದಲ್ಲಿ ಜನಿಸಿದರು’ ಎಂದರು.</p>.<p>‘ನಾವೆಲ್ಲರು ಕೃಷ್ಣನ ಬಾಲ್ಯಾವಸ್ಥೆಯನ್ನು ತಿಳಿಯಬೇಕು. ಮಹಾಭಾರತದಲ್ಲಿನ ಯುದ್ಧದ ಸಂದರ್ಭದಲ್ಲಿ ರಚಿತವಾದ ಭಗವದ್ಗೀತೆಯ 18 ಅಧ್ಯಯನಗಳನ್ನು ತಿಳಿದುಕೊಳ್ಳಬೇಕು. ಆಗ ಧರ್ಮವನ್ನು ನೀವು ಕಾಯುತ್ತಿರ ಮತ್ತು ನೀವು ಜೀವನದಲ್ಲಿ ಪರಿಪೂರ್ಣ ಮನುಷ್ಯನಾಗುತ್ತೀರಿ ತನ್ನ ಉಪದೇಶದಲ್ಲಿ ತಿಳಿಸಿದ್ದಾರೆ’ ಎಂದು ಹೇಳಿದರು.</p>.<p>ಜಾನಪದ ಲೋಕದ ಕ್ಯೂರೇಟರ್ ಡಾ. ಯು.ಎಂ. ರವಿ ಮಾತನಾಡಿ, ‘ಸಮಾಜದಲ್ಲಿ ಅಧರ್ಮ ಹಾಗೂ ಕೆಟ್ಟ ವ್ಯವಸ್ಥೆ ಉಂಟಾದಾಗ ಮಹಾನ್ ವ್ಯಕ್ತಿಗಳು ಜನಿಸುತ್ತಾರೆ ಎನ್ನುವುದಕ್ಕೆ ಅನೇಕ ಉದಾಹರಣೆಗಳಿವೆ. ಅದೇ ರೀತಿ ಜನಿಸಿದ ಶ್ರೀ ಕೃಷ್ಣ ಸಮಾಜದಲ್ಲಿ ಅಧರ್ಮ, ಅನೀತಿ ನಾಶ ಮಾಡಿದ ಮಹಾನ್ ಚೇತನ’ ಎಂದರು.</p>.<p>‘ನಾಯಕರಾದವರು ಯಾವ ರೀತಿ ಗುಣಲಕ್ಷಣಗಳನ್ನು ಹೊಂದಿರಬೇಕು ಎಂಬುದನ್ನು ಶಾಂತಿ ಪರ್ವದಲ್ಲಿ ಕೃಷ್ಣ ಬೋಧನೆ ಮಾಡಿದ್ದಾರೆ. ಇತಿಹಾಸದಲ್ಲಿ ಯುದ್ದ, ರಾಜ, ರಾಜನ ವಿಚಾರಗಳು, ರಾಜನ ಅಧಿಕಾರ, ಪ್ರಜೆಗಳು ಹಾಗೂ ಜನರನ್ನು ರಕ್ಷಣೆ ಮಾಡುವ ಕುರಿತು, ರಾಜ ಧರ್ಮ, ನಾಯಕ ಧರ್ಮ ಹಾಗೂ ಇತರೆ ಹಲವಾರು ವಿಚಾರಗಳನ್ನು 20 ಸಾವಿರ ವರ್ಷಗಳ ಹಿಂದೆಯೇ ಶಾಂತಿ ಪರ್ವದಲ್ಲಿ ಬೋಧನೆ ಮಾಡಿದ್ದಾರೆ’ ಎಂದು ಹೇಳಿದರು.</p>.<p>‘ಕೃಷ್ಣ ತತ್ವವನ್ನು ಹೇಗೆ ಪರಿಪಾಲನೆ ಮಾಡುತ್ತಿದ್ದೇವೆ ಹಾಗೂ ಹೇಗೆ ಅಳವಡಿಸಿಕೊಂಡಿದ್ದೇವೆ ಎಂಬುದನ್ನು ಎಲ್ಲರೂ ಮನಗಂಡಿದ್ದರೆ, ಈ ಸಮಾಜದಲ್ಲಿ ಎಲ್ಲರೂ ಸುಖ– ಶಾಂತಿಯಿಂದ ಬದುಕಬಹುದು. ಕೃಷ್ಣ ಗೀತೆಯನ್ನು ಉಪದೇಶಿಸಿದ್ದು ಅರ್ಜುನನಿಗೆ ಮಾತ್ರವಲ್ಲ. ಜನಸಾಮಾನ್ಯರನ್ನು ದೃಷ್ಠಿಯಲ್ಲಿಟ್ಟುಕೊಂಡು ಎಲ್ಲರಿಗೂ ಅನುಕೂಲವಾಗುವಂತೆ ಗೀತೆಯ ಉಪದೇಶವನ್ನು ನೀಡಿದ್ದಾರೆ’ ಎಂದರು.</p>.<p>ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕೃಷ್ಣ ವೇಷಧಾರಿ ಮಕ್ಕಳಿಗೆ ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಜೂನಿಯರ್ ಕಾಲೇಜು ಮೈದಾನದಿಂದ ಹಳೆ ಬಸ್ ನಿಲ್ದಾಣದವರೆಗೆ ಕೃಷ್ಣ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಕಲಾತಂಡದೊಂದಿಗೆ ಮೆರವಣಿಗೆ ಮಾಡಲಾಯಿತು.</p>.<p>ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಬಿ.ಎಲ್. ನಾಗಪ್ಪ ಸ್ವಾಮೀಜಿ, ಸಮುದಾಯದ ಮುಖಂಡರಾ ಕೃಷ್ಣ ಯಾದವ್, ರಾಜು, ರೈಡ್ ನಾಗರಾಜ್, ನಾರಾಯಣ್, ಸಿ.ಎನ್. ನಾಗರಾಜು, ಮಾದಯ್ಯ, ನರಸಿಂಹಮೂರ್ತಿ, ವೆಂಕಟರಮಣ, ನರಸಿಂಹಯ್ಯ, ಗೋವಿಂದರಾಜು, ಶಶಿ, ನಟರಾಜು, ಸುರೇಶ್, ಕನ್ನಡ ಮಂಜು, ಆರ್.ಬಿ.ಎಲ್. ಲೋಕೇಶ್ ಹಾಗೂ ಇತರರು ಇದ್ದರು. ಸೇರಿದಂತೆ ಇತರರು ಉಪಸ್ಥಿತರಿದ್ದರು.</p>.<p><strong>ಅದ್ಧೂರಿ ಕೃಷ್ಣ ರಥೋತ್ಸವ </strong></p><p>ರಾಮನಗರ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಾಲ್ಲೂಕಿನ ಕೃಷ್ಣಾಪುರದೊಡ್ಡಿಯಲ್ಲಿರುವ ಕೃಷ್ಣ ದೇವಾಲಯದಲ್ಲಿ ಶನಿವಾರ 8ನೇ ವರ್ಷದ ಕೃಷ್ಣ ದೇವರ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ಜರುಗಿತು. ಗ್ರಾಮಸ್ಥರು ಕೃಷ್ಣನ ಜನ್ಮದಿನವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಿದರು.</p><p> ಬೆಳಿಗ್ಗೆ ದೇವಾಲಯದಲ್ಲಿ ಕೃಷ್ಣನಿಗೆ ವಿಶೇಷ ಅಭಿಷೇಕ ಪೂಜೆ ನಡೆತು. ದೇವಾಲಯದ ಮೂಲ ಕೃಷ್ಣ ವಿಗ್ರಹಮೂರ್ತಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಅಲಂಕೃತ ಕೃಷ್ಣನ ಮೂರ್ತಿಯನ್ನು 9 ಗಂಟೆಗೆ ರಥದಲ್ಲಿ ಕೂರಿಸಿ ಮಂಗಳವಾದ್ಯದೊಂದಿಗೆ ರಥೋತ್ಸವ ಮಾಡಲಾಯಿತು. ಗ್ರಾಮದ ಬೀದಿಯಲ್ಲಿ ಸಾಗಿದ ರಥಕ್ಕೆ ಭಕ್ತರು ನಮಿಸಿದರು. ಬಾಳೆಹಣ್ಣು ಎಸೆದು ಸಂಭ್ರಮಿಸಿದರು. ಕೃಷ್ಣನಿಗೆ ಘೋಷಣೆಗಳನ್ನು ಕೂಗಿ ಭಕ್ತಿ ಮೆರೆದರು. ಪೂಜಾ ಕುಣಿತ ವೀರಗಾಸೆ ಡೊಳ್ಳು ಚಿಲಿಪಿಲಿ ಗೊಂಬೆ ಹುಲಿವೇಷ ಕುಣಿತ ಮತ್ತಿತರ ಜನಪದ ಕಲಾತಂಡಗಳು ರಥೋತ್ಸವಕ್ಕೆ ಮೆರಗು ತಂದವು. </p><p>ತಮ್ಮ ಬೀದಿಗೆ ಬಂದ ರಥಕ್ಕೆ ಭಕ್ತರು ಪೂಜೆ ಸಲ್ಲಿಸಿದರು. ಗ್ರಾಮದ ಮಕ್ಕಳು ಕೃಷ್ಣನ ವೇಷದಲ್ಲಿ ಗಮನ ಸೆಳೆದರು. ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ದೇವಾಲಯದ ಅರ್ಚಕ ವೆಂಕಟೇಶ್ ರಥೋತ್ಸವ ಪೂಜಾ ಕೈಂಕರ್ಯ ನಡೆಸಿದರು. ಗ್ರಾಮದ ಮುಖಂಡರಾ ಕೃಷ್ಣಪ್ಪ ವಾಸು ಪುಟ್ಟಮಾಸ್ತಿಗೌಡ ಜಯಣ್ಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ವರದರಾಜು ಸತೀಶ್ ಪಾಂಡು ಕವಿತಾ ರಾವ್ ವೆಂಕಟೇಶ್ ಅಭಿಷೇಕ್ ಕುಮಾರ್ ಸಂದೇಶ್ ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>