<p><strong>ಮಾಗಡಿ</strong>: ಶಾಸಕ ಬಾಲಕೃಷ್ಣ ಅವರ ಸಹೋದರ ಎಚ್.ಎನ್.ಅಶೋಕ್ ಅವರು ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾಲ್ಕನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಮತ್ತೊಮ್ಮೆ ಹಿಡಿತ ಸಾಧಿಸಿದ್ದಾರೆ. </p>.<p>2010ರಲ್ಲಿ ಒಂದು ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ನಂತರ ಸತತ ಮೂರು ಬಾರಿ<br> ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಒಟ್ಟು 29 ಸೊಸೈಟಿಗಳಲ್ಲಿ ಪೈಕಿ ಮಾಗಡಿ ಕ್ಷೇತ್ರಕ್ಕೆ 19 ಹಾಗೂ ಸೋಲೂರಿಗೆ 10 ಸೊಸೈಟಿ ಸೇರಿಸಲಾಗಿದೆ.</p>.<p>ಈ ನಡುವೆ ಜೆಡಿಎಸ್ನಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಇರಾದೆ ಇದ್ದರೂ ಅನುಮೋದಕರು ಹಾಗೂ ಸೂಚಕರು ಇಲ್ಲದ ಕಾರಣ ಜೆಡಿಎಸ್ ಪಾಳಯದವರು ಯಾವುದೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೆ ಚುನಾವಣಾ ಕಣದಿಂದ ಹಿಂದೆ ಸರಿದ ಕಾರಣ ಎಚ್.ಎನ್.ಆಶೋಕ್ ಅವಿರೋಧವಾಗಿ ಆಯ್ಕೆಯಾಗಲು ಸಹಕಾರಿಯಾಗಿದೆ.</p>.<p>ಬಿಡಿಸಿಸಿ ಬ್ಯಾಂಕ್ ನಿರ್ದೆಶಕರಾದ ನಂತರ ರೈತರಿಗೆ ಬೆಳೆಸಾಲವಾಗಿ ತಾಲ್ಲೂಕಿಗೆ ₹200 ಕೋಟಿ ಹಾಗೂ ಕುರಿ, ಕೋಳಿ, ಹಂದಿ, ಮೇಕೆ ಸಾಕಾಣಿಕೆಗೆ ಕಡಿಮೆ ಬಡ್ಡಿ ಸಾಲ, ಸ್ತ್ರೀಶಕ್ತಿ ಸಾಲವನ್ನಾಗಿ ₹50 ಕೋಟಿ ಮಂಜೂರು ಮಾಡಿಸಿ ಗ್ರಾಮೀಣ ಭಾಗದ ರೈತರ ದನಿಯಾಗಿದ್ದಾರೆ. ತಾಲ್ಲೂಕಿನಲ್ಲಿ ಮುಚ್ಚಿ ಹೋಗಿದ್ದ ಅನೇಕ ವಿಎಸ್ಎಸ್ಎನ್ ಸಂಘಗಳನ್ನು ಮರು ಪ್ರಾರಂಭಿಸಿ ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ.</p>.<p>ತಾಲ್ಲೂಕಿನಲ್ಲಿ ಸಹಕಾರಿ ರಂಗವನ್ನು ಬಲಿಷ್ಠವಾಗಿ ಕಟ್ಟಿ ರೈತರಿಗೆ ಸಹಕಾರಿಯನ್ನಾಗಿಸಿರುವ ಅವರ ಸೇವೆಯನ್ನು ಸರ್ಕಾರ ಗುರುತಿಸಿ ಕಳೆದ ವಾರ ‘ಸಹಕಾರಿ ರತ್ನ‘ ಪ್ರಶಸ್ತಿ ನೀಡಿ ಗೌರವಿಸಿದೆ.<br><br> ನಾಲ್ಕನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾದ ಅಶೋಕ್ ಟಿಎಪಿಸಿಎಂಎಸ್ ಅಧ್ಯಕ್ಷ<br> ಎಚ್.ಆರ್.ಶಿವಪ್ರಸಾದ್, ಯುವ ಅಧ್ಯಕ್ಷ ವಿನಯ್, ರಾಘವೇಂದ್ರ, ಮುನಿರಾಜು, ಜಗದೀಶ್, ಗೋವಿಂದರಾಜು, ದೇವೇಂದ್ರ ಕುಮಾರು, ಧನುಷ್, ಮೂರ್ತಿ ಇತರರು ಇದ್ದರು.</p>.<p>ಮಾಗಡಿ ತಾಲ್ಲೂಕು ಸಹಕಾರಿ ಕ್ಷೇತ್ರದಲ್ಲಿ ರಾಜ್ಯದಲ್ಲೇ ಅಭಿವೃದ್ಧಿ ಪಡೆಯುತ್ತಿರುವ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಬೇಕು. ಇದಕ್ಕಾಗಿ ಶ್ರಮಿಸುವೆ </p><p>- ಎಚ್.ಎನ್.ಅಶೋಕ್ ಬಿಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ</strong>: ಶಾಸಕ ಬಾಲಕೃಷ್ಣ ಅವರ ಸಹೋದರ ಎಚ್.ಎನ್.ಅಶೋಕ್ ಅವರು ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾಲ್ಕನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಮತ್ತೊಮ್ಮೆ ಹಿಡಿತ ಸಾಧಿಸಿದ್ದಾರೆ. </p>.<p>2010ರಲ್ಲಿ ಒಂದು ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ನಂತರ ಸತತ ಮೂರು ಬಾರಿ<br> ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಒಟ್ಟು 29 ಸೊಸೈಟಿಗಳಲ್ಲಿ ಪೈಕಿ ಮಾಗಡಿ ಕ್ಷೇತ್ರಕ್ಕೆ 19 ಹಾಗೂ ಸೋಲೂರಿಗೆ 10 ಸೊಸೈಟಿ ಸೇರಿಸಲಾಗಿದೆ.</p>.<p>ಈ ನಡುವೆ ಜೆಡಿಎಸ್ನಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಇರಾದೆ ಇದ್ದರೂ ಅನುಮೋದಕರು ಹಾಗೂ ಸೂಚಕರು ಇಲ್ಲದ ಕಾರಣ ಜೆಡಿಎಸ್ ಪಾಳಯದವರು ಯಾವುದೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೆ ಚುನಾವಣಾ ಕಣದಿಂದ ಹಿಂದೆ ಸರಿದ ಕಾರಣ ಎಚ್.ಎನ್.ಆಶೋಕ್ ಅವಿರೋಧವಾಗಿ ಆಯ್ಕೆಯಾಗಲು ಸಹಕಾರಿಯಾಗಿದೆ.</p>.<p>ಬಿಡಿಸಿಸಿ ಬ್ಯಾಂಕ್ ನಿರ್ದೆಶಕರಾದ ನಂತರ ರೈತರಿಗೆ ಬೆಳೆಸಾಲವಾಗಿ ತಾಲ್ಲೂಕಿಗೆ ₹200 ಕೋಟಿ ಹಾಗೂ ಕುರಿ, ಕೋಳಿ, ಹಂದಿ, ಮೇಕೆ ಸಾಕಾಣಿಕೆಗೆ ಕಡಿಮೆ ಬಡ್ಡಿ ಸಾಲ, ಸ್ತ್ರೀಶಕ್ತಿ ಸಾಲವನ್ನಾಗಿ ₹50 ಕೋಟಿ ಮಂಜೂರು ಮಾಡಿಸಿ ಗ್ರಾಮೀಣ ಭಾಗದ ರೈತರ ದನಿಯಾಗಿದ್ದಾರೆ. ತಾಲ್ಲೂಕಿನಲ್ಲಿ ಮುಚ್ಚಿ ಹೋಗಿದ್ದ ಅನೇಕ ವಿಎಸ್ಎಸ್ಎನ್ ಸಂಘಗಳನ್ನು ಮರು ಪ್ರಾರಂಭಿಸಿ ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ.</p>.<p>ತಾಲ್ಲೂಕಿನಲ್ಲಿ ಸಹಕಾರಿ ರಂಗವನ್ನು ಬಲಿಷ್ಠವಾಗಿ ಕಟ್ಟಿ ರೈತರಿಗೆ ಸಹಕಾರಿಯನ್ನಾಗಿಸಿರುವ ಅವರ ಸೇವೆಯನ್ನು ಸರ್ಕಾರ ಗುರುತಿಸಿ ಕಳೆದ ವಾರ ‘ಸಹಕಾರಿ ರತ್ನ‘ ಪ್ರಶಸ್ತಿ ನೀಡಿ ಗೌರವಿಸಿದೆ.<br><br> ನಾಲ್ಕನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾದ ಅಶೋಕ್ ಟಿಎಪಿಸಿಎಂಎಸ್ ಅಧ್ಯಕ್ಷ<br> ಎಚ್.ಆರ್.ಶಿವಪ್ರಸಾದ್, ಯುವ ಅಧ್ಯಕ್ಷ ವಿನಯ್, ರಾಘವೇಂದ್ರ, ಮುನಿರಾಜು, ಜಗದೀಶ್, ಗೋವಿಂದರಾಜು, ದೇವೇಂದ್ರ ಕುಮಾರು, ಧನುಷ್, ಮೂರ್ತಿ ಇತರರು ಇದ್ದರು.</p>.<p>ಮಾಗಡಿ ತಾಲ್ಲೂಕು ಸಹಕಾರಿ ಕ್ಷೇತ್ರದಲ್ಲಿ ರಾಜ್ಯದಲ್ಲೇ ಅಭಿವೃದ್ಧಿ ಪಡೆಯುತ್ತಿರುವ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಬೇಕು. ಇದಕ್ಕಾಗಿ ಶ್ರಮಿಸುವೆ </p><p>- ಎಚ್.ಎನ್.ಅಶೋಕ್ ಬಿಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>