<p><strong>ಮಾಗಡಿ:</strong> ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕರ್ತವ್ಯ ಫೌಂಡೇಶನ್ ವತಿಯಿಂದ ಹಲಸು ಹಾಗೂ ಮಾವು ಹಣ್ಣಿನಿಂದ ತಯಾರಿಸಬಹುದಾದ ವಿವಿಧ ಖಾದ್ಯಗಳ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ನಡೆಯಿತು.</p>.<p>ಕೇಂದ್ರದ ಗೃಹ ವಿಜ್ಞಾನಿಗಳಾದ ಡಾ.ಎಸ್.ಅನಿತಾ ಮಾತನಾಡಿ, ಹಣ್ಣುಗಳು ನಮ್ಮ ದಿನನಿತ್ಯದ ಸಮತೋಲನ ಆಹಾರದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಎಲ್ಲರೂ ಪ್ರತಿನಿತ್ಯ ಹಣ್ಣುಗಳನ್ನು ಸೇವಿಸಬೇಕು. ಋತುಗಳಲ್ಲಿ ಸಿಗುವ ಹಣ್ಣುಗಳನ್ನು ಸಂಸ್ಕರಿಸುವುದು ಅವಶ್ಯಕ ಎಂದರು.</p>.<p>ಹಲಸಿನ ಹಣ್ಣಿನ ಜಾಮ್, ಹಲಸಿನ ಚಿಪ್ಸ್, ಮಾವಿನ ಲೆದರ್, ಮಾವಿನ ಪಾನಕ, ಉಪ್ಪಿನಕಾಯಿ ಮತ್ತು ಮಾವಿನ ಕ್ಯಾಂಡಿ ತಯಾರಿಕಾ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.</p>.<p>ವಿಸ್ತರಣಾ ವಿಜ್ಞಾನಿ ಡಾ.ಎಸ್. ಸೌಜನ್ಯ ಮಾತನಾಡಿ, ಹೆಚ್ಚು ಉತ್ಪಾದನೆಯಾಗುವ ಮತ್ತು ಬೇಗ ಕೊಳೆಯುವ ಹಣ್ಣು ಹಾಗೂ ತರಕಾರಿಗಳನ್ನು ಸಂಸ್ಕರಿಸಿ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವುದರಿಂದ ಹಣ್ಣುಗಳ ಸಂಗ್ರಹಣಾ ಅವಧಿ ಹೆಚ್ಚುತ್ತದೆ. ಜೊತೆಗೆ ಇತ್ತೀಚೆಗೆ ಈ ವಿವಿಧ ಖಾದ್ಯಗಳಿಗೆ ಬೇಡಿಕೆಯೂ ಹೆಚ್ಚಿದೆ. ಇದರಿಂದ ಲಾಭಗಳಿಸಬಹುದು. ತಯಾರಿಕೆಗೆ ಗುಣಮಟ್ಟದ ಹಣ್ಣುಗಳ ಆಯ್ಕೆ, ಉತ್ಪಾದಿಸುವಾಗ ಕೈಗೊಳ್ಳಬೇಕಾದ ಕ್ರಮಗಳು, ಸ್ವಚ್ಛತೆ ಮತ್ತು ಲೇಬಲಿಂಗ್, ಬ್ರಾಂಡಿಂಗ್ ಕುರಿತು ಮಾಹಿತಿ ನೀಡಿದರು.</p>.<p>ಕರ್ತವ್ಯ ಫೌಂಡೇಶನ್ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಲೈಸನ್ಸ್ ಪಡೆಯಲು ಅನುಸರಿಸಬೇಕಾದ ಕ್ರಮ ಹಾಗೂ ಸ್ವಸಹಾಯ ಸಂಘಗಳ ಮಹತ್ವದ ಕುರಿತು ತಿಳಿಸಿದರು.</p>.<p>ತರಬೇತಿಯಲ್ಲಿ ರೈತ ಮಹಿಳೆಯರು ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಗಡಿ:</strong> ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕರ್ತವ್ಯ ಫೌಂಡೇಶನ್ ವತಿಯಿಂದ ಹಲಸು ಹಾಗೂ ಮಾವು ಹಣ್ಣಿನಿಂದ ತಯಾರಿಸಬಹುದಾದ ವಿವಿಧ ಖಾದ್ಯಗಳ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ನಡೆಯಿತು.</p>.<p>ಕೇಂದ್ರದ ಗೃಹ ವಿಜ್ಞಾನಿಗಳಾದ ಡಾ.ಎಸ್.ಅನಿತಾ ಮಾತನಾಡಿ, ಹಣ್ಣುಗಳು ನಮ್ಮ ದಿನನಿತ್ಯದ ಸಮತೋಲನ ಆಹಾರದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಎಲ್ಲರೂ ಪ್ರತಿನಿತ್ಯ ಹಣ್ಣುಗಳನ್ನು ಸೇವಿಸಬೇಕು. ಋತುಗಳಲ್ಲಿ ಸಿಗುವ ಹಣ್ಣುಗಳನ್ನು ಸಂಸ್ಕರಿಸುವುದು ಅವಶ್ಯಕ ಎಂದರು.</p>.<p>ಹಲಸಿನ ಹಣ್ಣಿನ ಜಾಮ್, ಹಲಸಿನ ಚಿಪ್ಸ್, ಮಾವಿನ ಲೆದರ್, ಮಾವಿನ ಪಾನಕ, ಉಪ್ಪಿನಕಾಯಿ ಮತ್ತು ಮಾವಿನ ಕ್ಯಾಂಡಿ ತಯಾರಿಕಾ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.</p>.<p>ವಿಸ್ತರಣಾ ವಿಜ್ಞಾನಿ ಡಾ.ಎಸ್. ಸೌಜನ್ಯ ಮಾತನಾಡಿ, ಹೆಚ್ಚು ಉತ್ಪಾದನೆಯಾಗುವ ಮತ್ತು ಬೇಗ ಕೊಳೆಯುವ ಹಣ್ಣು ಹಾಗೂ ತರಕಾರಿಗಳನ್ನು ಸಂಸ್ಕರಿಸಿ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವುದರಿಂದ ಹಣ್ಣುಗಳ ಸಂಗ್ರಹಣಾ ಅವಧಿ ಹೆಚ್ಚುತ್ತದೆ. ಜೊತೆಗೆ ಇತ್ತೀಚೆಗೆ ಈ ವಿವಿಧ ಖಾದ್ಯಗಳಿಗೆ ಬೇಡಿಕೆಯೂ ಹೆಚ್ಚಿದೆ. ಇದರಿಂದ ಲಾಭಗಳಿಸಬಹುದು. ತಯಾರಿಕೆಗೆ ಗುಣಮಟ್ಟದ ಹಣ್ಣುಗಳ ಆಯ್ಕೆ, ಉತ್ಪಾದಿಸುವಾಗ ಕೈಗೊಳ್ಳಬೇಕಾದ ಕ್ರಮಗಳು, ಸ್ವಚ್ಛತೆ ಮತ್ತು ಲೇಬಲಿಂಗ್, ಬ್ರಾಂಡಿಂಗ್ ಕುರಿತು ಮಾಹಿತಿ ನೀಡಿದರು.</p>.<p>ಕರ್ತವ್ಯ ಫೌಂಡೇಶನ್ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಲೈಸನ್ಸ್ ಪಡೆಯಲು ಅನುಸರಿಸಬೇಕಾದ ಕ್ರಮ ಹಾಗೂ ಸ್ವಸಹಾಯ ಸಂಘಗಳ ಮಹತ್ವದ ಕುರಿತು ತಿಳಿಸಿದರು.</p>.<p>ತರಬೇತಿಯಲ್ಲಿ ರೈತ ಮಹಿಳೆಯರು ಭಾಗವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>