ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಭಾಗದಲ್ಲಿ ರಾಮನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಮ್ಮದ್ ಇಕ್ರಂ ಶರೀಫ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಹಾಯಕ ಕಾರ್ಯಕ್ರಮ ಸಂಯೋಜನಾಧಿಕಾರಿ ವಿಭಾಗದಲ್ಲಿ ಬಿ. ಜಗದೀಪ್, ತಾಲ್ಲೂಕು ತಾಂತ್ರಿಕ ವಿಭಾಗದಲ್ಲಿ ರಾಮನಗರ ತಾಲ್ಲೂಕು ತಾಂತ್ರಿಕ ಸಂಯೋಜಕ ಕಾರ್ತಿಕ್ ಕುಮಾರ್, ತಾಂತ್ರಿಕ ಸಹಾಯಕ ಎಂಜಿನಿಯರ್ ವಿಭಾಗದಲ್ಲಿ ಮಾಗಡಿ ತಾಲ್ಲೂಕಿನ ಸಚಿನ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಭಾಗದಲ್ಲಿ ಕನಕಪುರ ತಾಲ್ಲೂಕಿನ ಸಾತನೂರು ಗ್ರಾ.ಪಂ. ಪಿಡಿಒ ಕೇಶವಮೂರ್ತಿ, ಬಿ.ಎಫ್.ಟಿ ವಿಭಾಗದಲ್ಲಿ ಕನಕಪುರ ತಾಲೂಕಿನ ರುದ್ರೇಶ್ ಹಾಗೂ ಗ್ರಾಮ ಕಾಯಕ ಮಿತ್ರ ವಿಭಾಗದಲ್ಲಿ ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿಯ ಜಯಶೀಲಾ ಆಯ್ಕೆಯಾಗಿದ್ದಾರೆ.