‘ನೋಡಲ್ ಅಧಿಕಾರಿ ಮಂಜುನಾಥ್ ಎಂಬುವವರು ಪರೀಕ್ಷಾ ಕೇಂದ್ರದಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಹೇಳಿಕೊಟ್ಟರು ಎಂದು ಪರೀಕ್ಷೆ ಮುಗಿದ ಮೇಲೆ ನಮ್ಮ ಮಕ್ಕಳು ತಿಳಿಸಿದರು. ನಂತರ ನಾವು ಮಂಜುನಾಥ್ ಅವರನ್ನು ಪ್ರಶ್ನಿಸಿದೆವು. ಅವರು ಸಮರ್ಪಕವಾದ ಉತ್ತರ ನೀಡದೇ ಹೊರಟು ಹೋಗಿದ್ದಾರೆ’ ಎಂದು ಪೋಷಕರಾದ ರೇವಣ್ಣ, ಪುಟ್ಟೇಗೌಡ, ಜಯಕುಮಾರಿ, ಶಶಿಕಲಾ, ನಿಂಗೇಗೌಡ, ಪುಟ್ಟಸ್ವಾಮಿ ಆರೋಪಿಸಿದರು.