<p><strong>ರಾಮನಗರ:</strong> ಮಹಾಲಯ ಅಮಾವಾಸ್ಯೆ ಕಳೆದರೂ ತರಕಾರಿಗಳ ಬೆಲೆ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ದಿನಬಳಕೆಯ ಬಹುತೇಕ ತರಕಾರಿಗಳು ದುಬಾರಿ ಆಗಿದ್ದು. ಗ್ರಾಹಕರು ಕಣ್ಣೀರು ಹಾಕುವಂತಾಗಿದೆ.</p>.<p>ಅಮಾವಾಸ್ಯೆ- ಪಿತೃ ಪಕ್ಷದ ಆಚರಣೆಯ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದಲೂ ತರಕಾರಿಗಳು ತುಟ್ಟಿಯಾಗಿವೆ. ಗುರುವಾರವೇ ಅಮಾವಾಸ್ಯೆ ಮುಗಿದಿದೆ. ಆದಾಗ್ಯೂ ಗ್ರಾಹಕರು ಖರೀದಿಗೆ ಮುಗಿಬಿದ್ದ ಕಾರಣ ಶುಕ್ರವಾರದ ಮಾರುಕಟ್ಟೆಯಲ್ಲೂ ಧಾರಣೆ ಹೆಚ್ಚಾಗಿತ್ತು.</p>.<p>ಬೀನ್ಸ್ ಹಾಗೂ ಕ್ಯಾರೆಟ್ ಎರಡಕ್ಕೂ ಸದ್ಯ ಉತ್ತಮ ಬೇಡಿಕೆ ಇದೆ. ಆದರೆ ಮಳೆಯ ಕಾರಣಕ್ಕೆ ನಿರೀಕ್ಷೆಯಷ್ಟು ಉತ್ಪನ್ನ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಈ ಎರಡೂ ತರಕಾರಿಗಳು ₹100ರ ಗಡಿ ದಾಟಿವೆ. ಗುರುವಾರ ₹150ರವರೆಗೂ ತಲುಪಿದ್ದ ಬೀನ್ಸ್ ಅರ್ಥಾತ್ ಹುರುಳಿಕಾಯಿಯ ಧಾರಣೆ ಶುಕ್ರವಾರ ಕೊಂಚ ತಗ್ಗಿದ ಕಾರಣ ಗ್ರಾಹಕರು ನಿಟ್ಟಿಸಿರು ಬಿಡುವಂತಾಗಿದೆ. ಕಳೆದ ತಿಂಗಳಿಂದ ಇಳಿಕೆ ಕಂಡಿದ್ದ ಟೊಮ್ಯಾಟೊ ಸಹ ಏರುಗತಿಯಲ್ಲಿದೆ. ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ ಮೊದಲಾದವುಗಳ ಬೆಲೆಯೂ ಏರುಮುಖವಾಗಿಯೇ ಇದೆ.</p>.<p>ಈರುಳ್ಳಿ ದುಬಾರಿ: ಕಳೆದ ಐದಾರು ತಿಂಗಳಿಂದಲೂ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮಾರಾಟ ಆಗುತ್ತಿದ್ದ ಈರುಳ್ಳಿಯ ಬೆಲೆ ಇದೀಗ ಏರುಮುಖವಾಗಿದೆ. ಕಳೆದ ಹದಿನೈದು ದಿನದಿಂದ ಇದರ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಿದೆ. ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಈ ವರ್ಷವೂ ಪ್ರವಾಹ ಪರಿಸ್ಥಿತಿ ಇದ್ದು, ಈರುಳ್ಳಿ ಬೆಲೆಗೆ ಹಾನಿಯಾಗಿದೆ. ಹೀಗಾಗಿ ಈ ವರ್ಷವೂ ಈರುಳ್ಳಿ ಗ್ರಾಹಕರ ಕಣ್ಣಲ್ಲಿ ನೀರು ತರಬಹುದು ಎನ್ನುವುದು ವರ್ತಕರ ಅಂದಾಜು. ಶುಕ್ರವಾರ ರಾಮನಗರ ಎಪಿಎಂಸಿಯಲ್ಲಿ ದಪ್ಪನೆಯ ಈರುಳ್ಳಿ ಎರಡೂವರೆ ಕೆ.ಜಿ.ಗೆ ₨100 ಹಾಗೂ ಮಧ್ಯಮ, ಸಣ್ಣ ಗಾತ್ರದ ಈರುಳ್ಳಿ ₨100ಕ್ಕೆ ಮೂರು-ಮೂರುವರೆ ಕೆ.ಜಿ.ಯಂತೆ ಮಾರಾಟ ನಡೆದಿತ್ತು.</p>.<p>ಉಳಿದಂತೆ ಬೆಂಡೆ, ಬದನೆ, ಮೂಲಂಗಿ ಮೊದಲಾದ ನಿತ್ಯ ಬಳಕೆಯ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸ ಆಗಿಲ್ಲ. ಮುಂದಿನ ಕೆಲ ದಿನಗಳ ಕಾಲ ಇದೇ ಧಾರಣೆ ಮುಂದುವರಿಯಲಿದೆ ಎನ್ನುತ್ತಾರೆ ರಾಮನಗರ ಎಪಿಎಂಸಿಯಲ್ಲಿನ ತರಕಾರಿ ವರ್ತಕರು.</p>.<p><strong>ಕೊತ್ತಂಬರಿ ಅಗ್ಗ</strong></p>.<p>ಹಬ್ಬ-ಆಚರಣೆಗಳ ದಿನಗಳಲ್ಲಿಯೂ ಕೊತ್ತಂಬರಿ ಸೊಪ್ಪು ಮಾತ್ರ ಅಗ್ಗವಾಗಿದೆ. ಶುಕ್ರವಾರ ನಾಟಿ ಕೊತ್ತಂಬರಿ ದಪ್ಪನೆಯ ಕಟ್ಟು ಕೇವಲ ₹15ಕ್ಕೆ ಹಾಗೂ ಫಾರಂ ಕೊತ್ತಂಬರಿ ₹10ಕ್ಕೆ ಮಾರಾಟವಾಯಿತು. ಉಳಿದ ಸೊಪ್ಪಿನ ಧಾರಣೆಯಲ್ಲೂ ಹೆಚ್ಚಿನ ವ್ಯತ್ಯಾಸ ಆಗಿಲ್ಲ. ಮೆಂತ್ಯ-₹20, ಸಬ್ಬಸ್ಸಿಗೆ, ಪುದೀನ, ದಂಟು, ಪಾಲಕ್, ಕೀರೆ, ಕಿಲ್ಕೀರೆ-₹10ರಂತೆ ಮಾರಾಟವಾದವು.</p>.<p>ತರಕಾರಿ ಧಾರಣೆ (ಪ್ರತಿ ಕೆ.ಜಿ.ಗೆ- ₹ಗಳಲ್ಲಿ)</p>.<p>ಬೀನ್ಸ್: 100-120<br />ಕ್ಯಾರೆಟ್: 100<br />ದಪ್ಪ ಮೆಣಸಿನಕಾಯಿ: 40<br />ಗೆಡ್ಡೆಕೋಸು: 40<br />ಎಲೆಕೋಸು: 30<br />ಮೂಲಂಗಿ: 30<br />ಬೆಂಡೆಕಾಯಿ: 40<br />ಈರೇಕಾಯಿ: 50<br />ಹಸಿ ಮೆಣಸಿನಕಾಯಿ: 60<br />ಟೊಮ್ಯಾಟೊ: 30<br />ಈರುಳ್ಳಿ (ದಪ್ಪ): 35-40<br />ಈರುಳ್ಳಿ (ಮಧ್ಯಮ): 30<br />ಬೆಳ್ಳುಳ್ಳಿ: 140-160<br />ಸೌತೆಕಾಯಿ: 20<br />ಏಲಕ್ಕಿ ಬಾಳೆ: 80-100<br />ಬದನೆ: 30</p>.<p><br />ಬೀನ್ಸ್ ಬೆಲೆ ಕೇಳಿದ ಮೇಲೆ ಕೊಂಡುಕೊಳ್ಳಲು ಮನಸ್ಸಾಗಲಿಲ್ಲ. ಈರುಳ್ಳಿ ಸಹ ದುಬಾರಿ ಆಗಿದ್ದು, ತರಕಾರಿಗೆ ಹಿಂದಿಗಿಂತ ಹೆಚ್ಚು ಹಣ ವ್ಯಯಿಸಬೇಕಿದೆ<br /><em><strong>ರುಕ್ಮಿಣಿ, ಗ್ರಾಹಕರು</strong></em></p>.<p><br />ಮಹಾಲಯ ಅಮಾವಾಸ್ಯೆ ಕಾರಣ ತರಕಾರಿ ಬೆಲೆ ಏರುಮುಖವಾಗಿದೆ. ಇನ್ನೂ ಕೆಲವು ದಿನ ಇದೇ ಧಾರಣೆ ಇರಲಿದೆ<br />ಹರೀಶ್<br /><em><strong>ತರಕಾರಿ ವ್ಯಾಪಾರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ:</strong> ಮಹಾಲಯ ಅಮಾವಾಸ್ಯೆ ಕಳೆದರೂ ತರಕಾರಿಗಳ ಬೆಲೆ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ದಿನಬಳಕೆಯ ಬಹುತೇಕ ತರಕಾರಿಗಳು ದುಬಾರಿ ಆಗಿದ್ದು. ಗ್ರಾಹಕರು ಕಣ್ಣೀರು ಹಾಕುವಂತಾಗಿದೆ.</p>.<p>ಅಮಾವಾಸ್ಯೆ- ಪಿತೃ ಪಕ್ಷದ ಆಚರಣೆಯ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದಲೂ ತರಕಾರಿಗಳು ತುಟ್ಟಿಯಾಗಿವೆ. ಗುರುವಾರವೇ ಅಮಾವಾಸ್ಯೆ ಮುಗಿದಿದೆ. ಆದಾಗ್ಯೂ ಗ್ರಾಹಕರು ಖರೀದಿಗೆ ಮುಗಿಬಿದ್ದ ಕಾರಣ ಶುಕ್ರವಾರದ ಮಾರುಕಟ್ಟೆಯಲ್ಲೂ ಧಾರಣೆ ಹೆಚ್ಚಾಗಿತ್ತು.</p>.<p>ಬೀನ್ಸ್ ಹಾಗೂ ಕ್ಯಾರೆಟ್ ಎರಡಕ್ಕೂ ಸದ್ಯ ಉತ್ತಮ ಬೇಡಿಕೆ ಇದೆ. ಆದರೆ ಮಳೆಯ ಕಾರಣಕ್ಕೆ ನಿರೀಕ್ಷೆಯಷ್ಟು ಉತ್ಪನ್ನ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಈ ಎರಡೂ ತರಕಾರಿಗಳು ₹100ರ ಗಡಿ ದಾಟಿವೆ. ಗುರುವಾರ ₹150ರವರೆಗೂ ತಲುಪಿದ್ದ ಬೀನ್ಸ್ ಅರ್ಥಾತ್ ಹುರುಳಿಕಾಯಿಯ ಧಾರಣೆ ಶುಕ್ರವಾರ ಕೊಂಚ ತಗ್ಗಿದ ಕಾರಣ ಗ್ರಾಹಕರು ನಿಟ್ಟಿಸಿರು ಬಿಡುವಂತಾಗಿದೆ. ಕಳೆದ ತಿಂಗಳಿಂದ ಇಳಿಕೆ ಕಂಡಿದ್ದ ಟೊಮ್ಯಾಟೊ ಸಹ ಏರುಗತಿಯಲ್ಲಿದೆ. ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ ಮೊದಲಾದವುಗಳ ಬೆಲೆಯೂ ಏರುಮುಖವಾಗಿಯೇ ಇದೆ.</p>.<p>ಈರುಳ್ಳಿ ದುಬಾರಿ: ಕಳೆದ ಐದಾರು ತಿಂಗಳಿಂದಲೂ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮಾರಾಟ ಆಗುತ್ತಿದ್ದ ಈರುಳ್ಳಿಯ ಬೆಲೆ ಇದೀಗ ಏರುಮುಖವಾಗಿದೆ. ಕಳೆದ ಹದಿನೈದು ದಿನದಿಂದ ಇದರ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಿದೆ. ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಈ ವರ್ಷವೂ ಪ್ರವಾಹ ಪರಿಸ್ಥಿತಿ ಇದ್ದು, ಈರುಳ್ಳಿ ಬೆಲೆಗೆ ಹಾನಿಯಾಗಿದೆ. ಹೀಗಾಗಿ ಈ ವರ್ಷವೂ ಈರುಳ್ಳಿ ಗ್ರಾಹಕರ ಕಣ್ಣಲ್ಲಿ ನೀರು ತರಬಹುದು ಎನ್ನುವುದು ವರ್ತಕರ ಅಂದಾಜು. ಶುಕ್ರವಾರ ರಾಮನಗರ ಎಪಿಎಂಸಿಯಲ್ಲಿ ದಪ್ಪನೆಯ ಈರುಳ್ಳಿ ಎರಡೂವರೆ ಕೆ.ಜಿ.ಗೆ ₨100 ಹಾಗೂ ಮಧ್ಯಮ, ಸಣ್ಣ ಗಾತ್ರದ ಈರುಳ್ಳಿ ₨100ಕ್ಕೆ ಮೂರು-ಮೂರುವರೆ ಕೆ.ಜಿ.ಯಂತೆ ಮಾರಾಟ ನಡೆದಿತ್ತು.</p>.<p>ಉಳಿದಂತೆ ಬೆಂಡೆ, ಬದನೆ, ಮೂಲಂಗಿ ಮೊದಲಾದ ನಿತ್ಯ ಬಳಕೆಯ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸ ಆಗಿಲ್ಲ. ಮುಂದಿನ ಕೆಲ ದಿನಗಳ ಕಾಲ ಇದೇ ಧಾರಣೆ ಮುಂದುವರಿಯಲಿದೆ ಎನ್ನುತ್ತಾರೆ ರಾಮನಗರ ಎಪಿಎಂಸಿಯಲ್ಲಿನ ತರಕಾರಿ ವರ್ತಕರು.</p>.<p><strong>ಕೊತ್ತಂಬರಿ ಅಗ್ಗ</strong></p>.<p>ಹಬ್ಬ-ಆಚರಣೆಗಳ ದಿನಗಳಲ್ಲಿಯೂ ಕೊತ್ತಂಬರಿ ಸೊಪ್ಪು ಮಾತ್ರ ಅಗ್ಗವಾಗಿದೆ. ಶುಕ್ರವಾರ ನಾಟಿ ಕೊತ್ತಂಬರಿ ದಪ್ಪನೆಯ ಕಟ್ಟು ಕೇವಲ ₹15ಕ್ಕೆ ಹಾಗೂ ಫಾರಂ ಕೊತ್ತಂಬರಿ ₹10ಕ್ಕೆ ಮಾರಾಟವಾಯಿತು. ಉಳಿದ ಸೊಪ್ಪಿನ ಧಾರಣೆಯಲ್ಲೂ ಹೆಚ್ಚಿನ ವ್ಯತ್ಯಾಸ ಆಗಿಲ್ಲ. ಮೆಂತ್ಯ-₹20, ಸಬ್ಬಸ್ಸಿಗೆ, ಪುದೀನ, ದಂಟು, ಪಾಲಕ್, ಕೀರೆ, ಕಿಲ್ಕೀರೆ-₹10ರಂತೆ ಮಾರಾಟವಾದವು.</p>.<p>ತರಕಾರಿ ಧಾರಣೆ (ಪ್ರತಿ ಕೆ.ಜಿ.ಗೆ- ₹ಗಳಲ್ಲಿ)</p>.<p>ಬೀನ್ಸ್: 100-120<br />ಕ್ಯಾರೆಟ್: 100<br />ದಪ್ಪ ಮೆಣಸಿನಕಾಯಿ: 40<br />ಗೆಡ್ಡೆಕೋಸು: 40<br />ಎಲೆಕೋಸು: 30<br />ಮೂಲಂಗಿ: 30<br />ಬೆಂಡೆಕಾಯಿ: 40<br />ಈರೇಕಾಯಿ: 50<br />ಹಸಿ ಮೆಣಸಿನಕಾಯಿ: 60<br />ಟೊಮ್ಯಾಟೊ: 30<br />ಈರುಳ್ಳಿ (ದಪ್ಪ): 35-40<br />ಈರುಳ್ಳಿ (ಮಧ್ಯಮ): 30<br />ಬೆಳ್ಳುಳ್ಳಿ: 140-160<br />ಸೌತೆಕಾಯಿ: 20<br />ಏಲಕ್ಕಿ ಬಾಳೆ: 80-100<br />ಬದನೆ: 30</p>.<p><br />ಬೀನ್ಸ್ ಬೆಲೆ ಕೇಳಿದ ಮೇಲೆ ಕೊಂಡುಕೊಳ್ಳಲು ಮನಸ್ಸಾಗಲಿಲ್ಲ. ಈರುಳ್ಳಿ ಸಹ ದುಬಾರಿ ಆಗಿದ್ದು, ತರಕಾರಿಗೆ ಹಿಂದಿಗಿಂತ ಹೆಚ್ಚು ಹಣ ವ್ಯಯಿಸಬೇಕಿದೆ<br /><em><strong>ರುಕ್ಮಿಣಿ, ಗ್ರಾಹಕರು</strong></em></p>.<p><br />ಮಹಾಲಯ ಅಮಾವಾಸ್ಯೆ ಕಾರಣ ತರಕಾರಿ ಬೆಲೆ ಏರುಮುಖವಾಗಿದೆ. ಇನ್ನೂ ಕೆಲವು ದಿನ ಇದೇ ಧಾರಣೆ ಇರಲಿದೆ<br />ಹರೀಶ್<br /><em><strong>ತರಕಾರಿ ವ್ಯಾಪಾರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>