<p><strong>ಸಾಗರ</strong>: ಮರಣ ಹೊಂದಿರುವ ವ್ಯಕ್ತಿಯ ಹೆಸರಿನಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಸೃಷ್ಟಿಸಿ ಕ್ರಯಪತ್ರ ನೋಂದಣಿ ಮಾಡಿಸುವ ಮೂಲಕ ವಂಚನೆ ನಡೆಸಿದ ಆರೋಪದ ಮೇಲೆ ಇಲ್ಲಿನ ನಗರ ಠಾಣೆ ಪೊಲೀಸರು ಮೂವರ ವಿರುದ್ಧ ಸೋಮವಾರ ಮೊಕದ್ದಮೆ ದಾಖಲಿಸಿದ್ದಾರೆ.</p>.<p>ವಕೀಲರಾದ ಎಚ್.ಎನ್.ದಿವಾಕರ್, ಮಂಡಗಳಲೆ ಗ್ರಾಮದ ಈಶ್ವರ, ಗಾಳಿಪುರ ಗ್ರಾಮದ ರಮೇಶ್ ಪ್ರಕರಣದ ಆರೋಪಿಗಳು. ಬಲೆಗಾರು ಗ್ರಾಮದ ರಾಜೇಂದ್ರ ಡಿ.ಎಸ್. ಎಂಬುವವರು ನೀಡಿರುವ ದೂರಿನ ಆಧಾರದ ಮೇಲೆ ಈ ಮೊಕದ್ದಮೆ ದಾಖಲಾಗಿದೆ.</p>.<p>ಸಾಗರದ ಲೋಹಿಯಾ ನಗರದಲ್ಲಿ ಸೊರಬ ತಾಲ್ಲೂಕಿನ ಉಳವಿ ಗ್ರಾಮದ ಕಲೀಲ್ ಸಾಬ್ ಎಂಬುವವರಿಗೆ ಆಶ್ರಯ ನಿವೇಶನ ಮಂಜೂರಾಗಿತ್ತು. ನಂತರ 2007ನೇ ಸಾಲಿನಲ್ಲಿ ಕಲೀಲ್ ಸಾಬ್ ಮೃತರಾದರು. ಆದಾಗ್ಯೂ ಅವರ ಪತ್ನಿ ಆ ನಿವೇಶನದ ಖಾತೆಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿರಲಿಲ್ಲ.</p>.<p>2016ರಲ್ಲಿ ದೂರುದಾರರಾದ ರಾಜೇಂದ್ರ ಅವರಿಗೆ ಆರೋಪಿಗಳು ₹ 6.80 ಲಕ್ಷಕ್ಕೆ ಆ ನಿವೇಶನವನ್ನು ಮಾರಾಟ ಮಾಡಿಸಿದ್ದಾರೆ. ಆ ಹಣವನ್ನು ವಕೀಲರಾದ ಎಚ್.ಎನ್.ದಿವಾಕರ್ ಅವರ ಖಾತೆಗೆ ಜಮಾ ಮಾಡಲಾಗಿದೆ ಎಂದು ದೂರಲಾಗಿದೆ. ಈ ಸಂದರ್ಭದಲ್ಲಿ ಮೃತಪಟ್ಟಿರುವ ಕಲೀಲ್ ಬದಲಿಗೆ ಬೇರೊಬ್ಬ ವ್ಯಕ್ತಿ ಕ್ರಯಪತ್ರ ನೋಂದಣಿಗೆ ಹಾಜರಾಗಿ, ‘ತಾನೇ ಕಲೀಲ್’ ಎಂದು ನಂಬಿಸಿ ವ್ಯವಹಾರ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.</p>.<p>2020ರಲ್ಲಿ ರಾಜೇಂದ್ರ ಅವರು ತಾವು ಖರೀದಿಸಿದ ನಿವೇಶನವನ್ನು ಬಲೆಗಾರು ಗ್ರಾಮದ ಸವಿತಾ ಡಿ.ಬಿ. ಎಂಬುವವರಿಗೆ ಮಾರಾಟ ಮಾಡಿದರು. ಈ ನಡುವೆ ನಿವೇಶನದ ಮೂಲ ಮಾಲೀಕರಾದ ಕಲೀಲ್ ಸಾಬ್ ಅವರ ಪತ್ನಿ ಫಾತಿಮಾ ತಮ್ಮ ಪತಿಯ ಹೆಸರಿನಲ್ಲಿದ್ದ ನಿವೇಶನದ ಖಾತೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು ಆ ಸ್ವತ್ತನ್ನು ಕುಸುಮಾ ಭಂಡಾರಿ ಎಂಬುವವರಿಗೆ ಮಾರಾಟ ಮಾಡಿದ್ದಾರೆ.</p>.<p>ಕುಸುಮಾ ಭಂಡಾರಿ ಅವರು ಆ ನಿವೇಶನದಲ್ಲಿ ಮನೆ ನಿರ್ಮಿಸಲು ಮುಂದಾದಾಗ ಸವಿತಾ ಅವರು ಸ್ಥಳಕ್ಕೆ ಬಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಮಗಾರಿ ನಿಲ್ಲಿಸುವಂತೆ ನಗರಸಭೆ ಅಧಿಕಾರಿಗಳು ಸೂಚಿಸಿದ್ದರು. ಕುಸುಮಾ ಭಂಡಾರಿ ಅವರು ಈ ವಿಷಯವನ್ನು ಶಾಸಕ ಎಚ್.ಹಾಲಪ್ಪ ಹರತಾಳು ಅವರ ಗಮನಕ್ಕೆ ತಂದಾಗ ಶಾಸಕರು ನಗರಸಭೆ ಕಚೇರಿಗೆ ಭೇಟಿ ನೀಡಿ ಒಂದೇ ನಿವೇಶನಕ್ಕೆ ಸಂಬಂಧಿಸಿದಂತೆ ಎರಡು ಕ್ರಯಪತ್ರ ನೋಂದಣಿಯಾಗಿರುವ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರನ್ನು ಕಂಡುಹಿಡಿಯುವ ಉದ್ದೇಶದಿಂದ ಪೊಲೀಸರಿಗೆ ದೂರು ನೀಡುವಂತೆ ಪೌರಾಯುಕ್ತರಿಗೆ ಸೂಚಿಸಿದ್ದರು.</p>.<p>ಇದೀಗ ಸತ್ತಿರುವ ವ್ಯಕ್ತಿ ಬದುಕಿದ್ದಾನೆ ಎಂದು ನಂಬಿಸಿ ಕ್ರಯಪತ್ರ ನೋಂದಣಿ ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಥಮ ವರದಿ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ</strong>: ಮರಣ ಹೊಂದಿರುವ ವ್ಯಕ್ತಿಯ ಹೆಸರಿನಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಸೃಷ್ಟಿಸಿ ಕ್ರಯಪತ್ರ ನೋಂದಣಿ ಮಾಡಿಸುವ ಮೂಲಕ ವಂಚನೆ ನಡೆಸಿದ ಆರೋಪದ ಮೇಲೆ ಇಲ್ಲಿನ ನಗರ ಠಾಣೆ ಪೊಲೀಸರು ಮೂವರ ವಿರುದ್ಧ ಸೋಮವಾರ ಮೊಕದ್ದಮೆ ದಾಖಲಿಸಿದ್ದಾರೆ.</p>.<p>ವಕೀಲರಾದ ಎಚ್.ಎನ್.ದಿವಾಕರ್, ಮಂಡಗಳಲೆ ಗ್ರಾಮದ ಈಶ್ವರ, ಗಾಳಿಪುರ ಗ್ರಾಮದ ರಮೇಶ್ ಪ್ರಕರಣದ ಆರೋಪಿಗಳು. ಬಲೆಗಾರು ಗ್ರಾಮದ ರಾಜೇಂದ್ರ ಡಿ.ಎಸ್. ಎಂಬುವವರು ನೀಡಿರುವ ದೂರಿನ ಆಧಾರದ ಮೇಲೆ ಈ ಮೊಕದ್ದಮೆ ದಾಖಲಾಗಿದೆ.</p>.<p>ಸಾಗರದ ಲೋಹಿಯಾ ನಗರದಲ್ಲಿ ಸೊರಬ ತಾಲ್ಲೂಕಿನ ಉಳವಿ ಗ್ರಾಮದ ಕಲೀಲ್ ಸಾಬ್ ಎಂಬುವವರಿಗೆ ಆಶ್ರಯ ನಿವೇಶನ ಮಂಜೂರಾಗಿತ್ತು. ನಂತರ 2007ನೇ ಸಾಲಿನಲ್ಲಿ ಕಲೀಲ್ ಸಾಬ್ ಮೃತರಾದರು. ಆದಾಗ್ಯೂ ಅವರ ಪತ್ನಿ ಆ ನಿವೇಶನದ ಖಾತೆಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿರಲಿಲ್ಲ.</p>.<p>2016ರಲ್ಲಿ ದೂರುದಾರರಾದ ರಾಜೇಂದ್ರ ಅವರಿಗೆ ಆರೋಪಿಗಳು ₹ 6.80 ಲಕ್ಷಕ್ಕೆ ಆ ನಿವೇಶನವನ್ನು ಮಾರಾಟ ಮಾಡಿಸಿದ್ದಾರೆ. ಆ ಹಣವನ್ನು ವಕೀಲರಾದ ಎಚ್.ಎನ್.ದಿವಾಕರ್ ಅವರ ಖಾತೆಗೆ ಜಮಾ ಮಾಡಲಾಗಿದೆ ಎಂದು ದೂರಲಾಗಿದೆ. ಈ ಸಂದರ್ಭದಲ್ಲಿ ಮೃತಪಟ್ಟಿರುವ ಕಲೀಲ್ ಬದಲಿಗೆ ಬೇರೊಬ್ಬ ವ್ಯಕ್ತಿ ಕ್ರಯಪತ್ರ ನೋಂದಣಿಗೆ ಹಾಜರಾಗಿ, ‘ತಾನೇ ಕಲೀಲ್’ ಎಂದು ನಂಬಿಸಿ ವ್ಯವಹಾರ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.</p>.<p>2020ರಲ್ಲಿ ರಾಜೇಂದ್ರ ಅವರು ತಾವು ಖರೀದಿಸಿದ ನಿವೇಶನವನ್ನು ಬಲೆಗಾರು ಗ್ರಾಮದ ಸವಿತಾ ಡಿ.ಬಿ. ಎಂಬುವವರಿಗೆ ಮಾರಾಟ ಮಾಡಿದರು. ಈ ನಡುವೆ ನಿವೇಶನದ ಮೂಲ ಮಾಲೀಕರಾದ ಕಲೀಲ್ ಸಾಬ್ ಅವರ ಪತ್ನಿ ಫಾತಿಮಾ ತಮ್ಮ ಪತಿಯ ಹೆಸರಿನಲ್ಲಿದ್ದ ನಿವೇಶನದ ಖಾತೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು ಆ ಸ್ವತ್ತನ್ನು ಕುಸುಮಾ ಭಂಡಾರಿ ಎಂಬುವವರಿಗೆ ಮಾರಾಟ ಮಾಡಿದ್ದಾರೆ.</p>.<p>ಕುಸುಮಾ ಭಂಡಾರಿ ಅವರು ಆ ನಿವೇಶನದಲ್ಲಿ ಮನೆ ನಿರ್ಮಿಸಲು ಮುಂದಾದಾಗ ಸವಿತಾ ಅವರು ಸ್ಥಳಕ್ಕೆ ಬಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಮಗಾರಿ ನಿಲ್ಲಿಸುವಂತೆ ನಗರಸಭೆ ಅಧಿಕಾರಿಗಳು ಸೂಚಿಸಿದ್ದರು. ಕುಸುಮಾ ಭಂಡಾರಿ ಅವರು ಈ ವಿಷಯವನ್ನು ಶಾಸಕ ಎಚ್.ಹಾಲಪ್ಪ ಹರತಾಳು ಅವರ ಗಮನಕ್ಕೆ ತಂದಾಗ ಶಾಸಕರು ನಗರಸಭೆ ಕಚೇರಿಗೆ ಭೇಟಿ ನೀಡಿ ಒಂದೇ ನಿವೇಶನಕ್ಕೆ ಸಂಬಂಧಿಸಿದಂತೆ ಎರಡು ಕ್ರಯಪತ್ರ ನೋಂದಣಿಯಾಗಿರುವ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರನ್ನು ಕಂಡುಹಿಡಿಯುವ ಉದ್ದೇಶದಿಂದ ಪೊಲೀಸರಿಗೆ ದೂರು ನೀಡುವಂತೆ ಪೌರಾಯುಕ್ತರಿಗೆ ಸೂಚಿಸಿದ್ದರು.</p>.<p>ಇದೀಗ ಸತ್ತಿರುವ ವ್ಯಕ್ತಿ ಬದುಕಿದ್ದಾನೆ ಎಂದು ನಂಬಿಸಿ ಕ್ರಯಪತ್ರ ನೋಂದಣಿ ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಥಮ ವರದಿ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>