ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಶಿಥಿಲಗೊಂಡ ವಿದ್ಯುತ್ ಕಂಬಗಳು: ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ

ಸುಕುಮಾರ್ ಎಂ.
Published : 15 ಜುಲೈ 2024, 7:23 IST
Last Updated : 15 ಜುಲೈ 2024, 7:23 IST
ಫಾಲೋ ಮಾಡಿ
Comments
ತುಮರಿ ಸಮೀಪದ ಸಸಿಗೊಳ್ಳಿ ಹಾಗೂ ಸುಳ್ಳಳ್ಳಿ ರಾಜ್ಯ ಹೆದ್ದಾರಿ ಬಳಿ ವಿದ್ಯುತ್ ತಂತಿ ಮೇಲೆ ಮರದ ಕೊಂಬೆಗಳು ಉರುಳಿರುವುದು
ತುಮರಿ ಸಮೀಪದ ಸಸಿಗೊಳ್ಳಿ ಹಾಗೂ ಸುಳ್ಳಳ್ಳಿ ರಾಜ್ಯ ಹೆದ್ದಾರಿ ಬಳಿ ವಿದ್ಯುತ್ ತಂತಿ ಮೇಲೆ ಮರದ ಕೊಂಬೆಗಳು ಉರುಳಿರುವುದು
ರಸ್ತೆಗೆ ಬಾಗಿದ ಮರ ತೆರವು ಕಾರ್ಯ ವಿಳಂಬ ದಿನಗಟ್ಟಲೇ ವಿದ್ಯುತ್ ಅನಿಯಮಿತ ಸ್ಥಗಿತ ಬೆಳೆ ವಿಮೆ, ಪಹಣಿ ಪತ್ರ ಪಡೆಯಲು ತೊಂದರೆ ಪ್ರತಿಭಟನೆಗೆ ಗಡುವು ನೀಡಿದ ಗ್ರಾಮಸ್ಥರು
ಚುನಾವಣೆ ಹಿನ್ನೆಲೆಯಲ್ಲಿ ಜಂಗಲ್ ಕಟಿಂಗ್ ಕಾರ್ಯ ವಿಳಂಬವಾಗಿದೆ. ವಿದ್ಯುತ್ ಕಂಬಕ್ಕೆ ಹೊಂದಿಕೊಂಡಿರುವ ಕೊಂಬೆ ತೆರವು ಮಾಡಲು 4 ಜನರನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ. ಶೇ 40ರಷ್ಟು ಕಾರ್ಯ ಪೂರ್ಣಗೊಂಡಿದೆ
ಶ್ರೀಧರ್ ಎಸ್. ಮೆಲ್ವಿಚಾರಕರು ಮೆಸ್ಕಾಂ ಉಪ ವಿಭಾಗ ಬ್ಯಾಕೋಡು
ಸಮರ್ಪಕ ವಿದ್ಯುತ್ ಪೂರೈಕೆಗೆ ಗಡುವು:
ಈಗಾಗಲೇ ದಿನನಿತ್ಯ ಅಸಮರ್ಪಕ ವಿದ್ಯುತ್ ಸೇವೆಯಿಂದ ಈ ಭಾಗದ ಜನರು ರೋಸಿ ಹೋಗಿದ್ದಾರೆ. ಮೆಸ್ಕಾಂ ಉಪ ವಿಭಾಗದ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಅವ್ಯವಸ್ಥೆ ಸರಿಪಡಿಸಲು ಹಲವು ಬಾರಿ ಮನವಿ ಮಾಡಿದ್ದಾರೆ. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಸ್ವಂದನೆ ದೊರಕದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜುಲೈ 20ರ ಗಡುವು ನೀಡಿದ್ದು ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಗ್ರಾಮಸ್ಥರ ಸಮ್ಮುಖದಲ್ಲಿ ಬ್ಯಾಕೋಡು ಉಪ ವಿಭಾಗದ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುದಾಗಿ ಎಸ್.ಎಸ್ ಭೋಗ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುಧಿಂದ್ರ ಹೊಸಕೊಪ್ಪ ಮಾಹಿತಿ ನೀಡಿದ್ದಾರೆ.
ಶಾಸಕರ ಸೂಚನೆಗೂ ಕಿಮ್ಮತ್ತಿಲ್ಲ:
‘ಶರಾವತಿ ಹಿನ್ನೀರು ಭಾಗದ ಜನರಿಗೆ ನಿರಂತರವಾಗಿ ವಿದ್ಯುತ್ ನೀಡಬೇಕೆಂದು ಸ್ಥಳೀಯ ಶಾಸಕರು ಈಚೆಗೆ ಕೆಡಿಪಿ ಸಭೆಯಲ್ಲಿ ಸೂಚಿಸಿರುವುದನ್ನು ಹೊರತುಪಡಿಸಿದರೆ ವಾಸ್ತವವಾಗಿ ಯಾವುದೇ ಕಾರ್ಯ ಸಾಧನೆ ಆಗಿಲ್ಲ. ಅಧಿಕಾರಿಗಳು ಶಾಸಕರ ಸೂಚನೆಯಂತೆ ವಿದ್ಯುತ್ ಮಾರ್ಗ ಸುಧಾರಿಸಿದ್ದಾರೆಯೋ ಇಲ್ಲವೋ ಎಂಬುದು ಅರ್ಥವಾಗುತ್ತಿಲ್ಲ. ಈಚೆಗೆ ಹೊಳೆಬಾಗಿಲು ಬಳಿ ವಿದ್ಯುತ್ ಕಂಬ ಉರುಳಿದಾಗ 3 ದಿನಗಳ ನಂತರ ಅದರ ದುರಸ್ತಿ ಮಾಡಲಾಯಿತು. ವಿದ್ಯುತ್ ಕಂಬಗಳು ಬಿದ್ದಿವೆ ಲೈನ್ ಕಟ್ ಆಗಿದೆ ಎಂದು ಹೇಳುವುದನ್ನು ಕೇಳಿಸಿಕೊಳ್ಳುವುದೇ ಆಗಿದೆ. ಸಾರ್ವಜನಿಕರ ಸಹನೆಯನ್ನು ಮೆಸ್ಕಾಂ ಈ ಪರಿ ಪರೀಕ್ಷಿಸಿದರೆ ಹೇಗೆ?’ ಎಂದು ಅರುಣ್ ಕರೂರು ಬೇಸರ ವ್ಯಕ್ತಪಡಿಸಿದರು. ‘ಬೇಸಿಗೆಯಲ್ಲಿ ಶಿಥಿಲಗೊಂಡ ವಿದ್ಯುತ್ ಕಂಬಗಳ ಪಟ್ಟಿ ಮಾಡುವುದು ಅವುಗಳನ್ನು ಬದಲಾಯಿಸುವುದು ಮಳೆಗಾಲ ಸಂದರ್ಭದಲ್ಲಿ ವಿದ್ಯುತ್ ಮಾರ್ಗಗಳಿಗೆ ಅಡಚಣೆ ತಂದೊಡ್ಡುವ ಮರ  ಟೊಂಗೆಗಳನ್ನು ಕಟಾವು ಮಾಡಿ ಕ್ರಮ ಕೈಗೊಳ್ಳುವುದು ಬೀಳುವ ಮರಗಳನ್ನು ಗುರುತಿಸುವುದು ಇದ್ಯಾವುದನ್ನೂ ಮಾಡಿಲ್ಲವೆ? ಮಾಡಿದ್ದರೆ ಅಲ್ಪಸ್ವಲ್ಪ ಗಾಳಿ ಬೀಸಿದರೂ ಕಂಬಗಳು ಯಾಕೆ ಉರುಳುತ್ತಿವೆ ಎಂಬ ಸಾರ್ವಜನಿಕರ ಆಕ್ರೋಶಕ್ಕೆ ಮೆಸ್ಕಾಂ ಅಧಿಕಾರಿಗಳು ಉತ್ತರದಾಗಳಲ್ಲವೇ’ ಎಂಬುದು ಎಸ್.ಎಸ್. ಭೋಗ್ ಗ್ರಾಮಸ್ಥರ ಮಾತು.
ನಡೆಯದ ಜಂಗಲ್ ಕಟಿಂಗ್: 
ಮಳೆಗಾಲಕ್ಕೂ ಮುನ್ನ ಅರಣ್ಯ ಇಲಾಖೆಯಿಂದ ಅಪಾಯಕಾರಿ ಮರ ಕೊಂಬೆಗಳನ್ನು ಗುರುತಿಸಿ ಸರ್ವೆ ನಡೆಸಲಾಗುತ್ತದೆ. ಬಳಿಕ ಹರಾಜು ಪ್ರಕ್ರಿಯೆ ನಡೆಸಿ ಖಾಸಗಿಯವರಿಗೆ ಟೆಂಡರ್ ನೀಡಿ ಅವುಗಳನ್ನು ತೆರವುಗೊಳಿಸಲಾಗುತ್ತಿತ್ತು. ಬ್ಯಾಕೋಡು ಉಪ ವಿಭಾಗದ ವ್ಯಾಪ್ತಿಯಲ್ಲಿ ಜಂಗಲ್ ಕಟಿಂಗ್ ಪ್ರಕ್ರಿಯೆ (ರಸ್ತೆ ಕಡೆಗೆ ಬಾಗಿದ ಮರಗಳ ತೆರವು ಕಾರ್ಯಾಚರಣೆ) ಈವರೆಗೂ ನಡೆದಿಲ್ಲ. ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಈ ಬಗ್ಗೆ ನಿರಾಸಕ್ತಿ ತೋರಿದ ಕಾರಣ ಅವಳಿ ಹೋಬಳಿಗಳಲ್ಲಿ ಹಲವೆಡೆ ಅಪಾಯಕಾರಿ ಮರಗಳ ತೆರವು ಕಾರ್ಯ ಆಗಿಲ್ಲ. ಅನಿವಾರ್ಯವಾಗಿ ಕೆಲವು ಕಡೆ ಸಾರ್ವಜನಿಕರೇ ಮರ ಕೊಂಬೆ ತೆರವು ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT