ಶಿವಮೊಗ್ಗ: ಕೋವಿಡ್ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ನಗರ ಪಾಲಿಕೆ ನಿಯೋಜಿಸಿದ್ದ ಹೊರಗುತ್ತಿಗೆ ನೌಕರ ಪಾಪಾನಾಯ್ಕ (35) ಅವರು ಕೋವಿಡ್ನಿಂದಲೇ ಸೋಮವಾರ ಜೀವ ಕಳೆದುಕೊಂಡಿದ್ದಾರೆ.
ನಗರದ ರೋಟರಿ ಚಿತಾಗಾರದಲ್ಲಿ ಕೋವಿಡ್ ಸೋಂಕಿತರ ಶವ ದಹಿಸಲು ಮೂವರು ಸಿಬ್ಬಂದಿ ನಿಯೋಜಿಸಲಾಗಿತ್ತು. ಶಂಕರನಿಗೆ ಸಹಾಯಕನಾಗಿ ಪಾಪಾನಾಯ್ಕ ಕೆಲಸ ಮಾಡುತ್ತಿದ್ದರು. ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದ ಅವರನ್ನು ಕೋವಿಡ್ ಆರಂಭವಾದ ನಂತರ ಶವಾಗಾರಕ್ಕೆ ನಿಯೋಜಿಸಲಾಗಿತ್ತು.
ನಿತ್ಯವೂ ಶವಸಂಸ್ಕಾರ ಕಾರ್ಯ ನಿರ್ವಹಿಸುತ್ತಿದ್ದ ಅವರು ಸೆ.8ರಂದು ತೀವ್ರ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದರು. ಮೆಗ್ಗಾನ್ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಹೊಳೆಬೆನವಳ್ಳಿ ಹೊಸಮನೆ ತಾಂಡಾದ ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.