<p><strong>ಕಾರ್ಗಲ್:</strong> ಶರಾವತಿ ಕಣಿವೆ ಮತ್ತು ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟ 1,804 ಅಡಿಗೆ ತಲುಪಿದ್ದು, ಸದ್ಯದಲ್ಲೇ ಜಲಾಶಯ ಭರ್ತಿಯಾಗಲಿದೆ. </p>.<p>ಗರಿಷ್ಠ 1,819 ಅಡಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಅಣೆಕಟ್ಟೆಯು 156 ಟಿಎಂಸಿ ಅಡಿ ನೀರು ಹಿಡಿದಿಡಬಲ್ಲದು. ಪ್ರಸ್ತುತ ಜಲಾಶಯದಲ್ಲಿ 105 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಒಟ್ಟಾರೆ ಸಾಮರ್ಥ್ಯದ ಶೇ ಶೇ 70ರಷ್ಟು ಭರ್ತಿಯಾಗಿದೆ. </p>.<p>ಅಣೆಕಟ್ಟೆಯ ಕೆಳದಂಡೆಯ ಪ್ರದೇಶಗಳಾದ ಮಳಲಿ, ಮರಳುಕೋರೆ, ಯಡ್ಡಳ್ಳಿ, ಗಿಳಾಲಗುಂಡಿ, ಸೀತಾಕಟ್ಟೆ, ಗೇರುಸೊಪ್ಪ ಮುಂತಾದ ಪ್ರದೇಶಗಳ ನದಿಪಾತ್ರದ ನಿವಾಸಿಗಳಿಗೆ ಪ್ರವಾಹದ ಮುನ್ಸೂಚನೆ ನೀಡಲಾಗಿದೆ ಎಂದು ಅಧೀಕ್ಷಕ ಎಂಜಿನಿಯರ್ ಆರ್. ಶಿವಕುಮಾರ್ ತಿಳಿಸಿದ್ದಾರೆ.</p>.<p>ಶರಾವತಿ ಕಣಿವೆಯಾದ್ಯಂತ ಹರಿಯುವ ಮಳೆ ನೀರನ್ನು ಬಳಸಿ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದೆ. ಅಣೆಕಟ್ಟೆಯ ನೀರಿನಿಂದ ಪ್ರಮುಖ 4 ಜಲ ವಿದ್ಯುದಾಗರಗಳಲ್ಲಿ 24 ವಿದ್ಯುತ್ ಘಟಕಗಳಿಂದ 1,530 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. </p>.<p>ಮಳೆ ನೀರನ್ನು ಸಮರ್ಥವಾಗಿ ಬಳಸುವಲ್ಲಿ ಕೆಪಿಸಿ ನಿಗಮದ ತಜ್ಞರ ತಂಡ ಕಾರ್ಯ ನಿರ್ವಹಿಸುತ್ತಿದೆ ಎಂದು ಸಿವಿಲ್ ವಿಭಾಗದ ಉಸ್ತುವಾರಿ ಮುಖ್ಯ ಎಂಜಿನಿಯರ್ ಮಾದೇಶ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರ್ಗಲ್:</strong> ಶರಾವತಿ ಕಣಿವೆ ಮತ್ತು ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟ 1,804 ಅಡಿಗೆ ತಲುಪಿದ್ದು, ಸದ್ಯದಲ್ಲೇ ಜಲಾಶಯ ಭರ್ತಿಯಾಗಲಿದೆ. </p>.<p>ಗರಿಷ್ಠ 1,819 ಅಡಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಅಣೆಕಟ್ಟೆಯು 156 ಟಿಎಂಸಿ ಅಡಿ ನೀರು ಹಿಡಿದಿಡಬಲ್ಲದು. ಪ್ರಸ್ತುತ ಜಲಾಶಯದಲ್ಲಿ 105 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಒಟ್ಟಾರೆ ಸಾಮರ್ಥ್ಯದ ಶೇ ಶೇ 70ರಷ್ಟು ಭರ್ತಿಯಾಗಿದೆ. </p>.<p>ಅಣೆಕಟ್ಟೆಯ ಕೆಳದಂಡೆಯ ಪ್ರದೇಶಗಳಾದ ಮಳಲಿ, ಮರಳುಕೋರೆ, ಯಡ್ಡಳ್ಳಿ, ಗಿಳಾಲಗುಂಡಿ, ಸೀತಾಕಟ್ಟೆ, ಗೇರುಸೊಪ್ಪ ಮುಂತಾದ ಪ್ರದೇಶಗಳ ನದಿಪಾತ್ರದ ನಿವಾಸಿಗಳಿಗೆ ಪ್ರವಾಹದ ಮುನ್ಸೂಚನೆ ನೀಡಲಾಗಿದೆ ಎಂದು ಅಧೀಕ್ಷಕ ಎಂಜಿನಿಯರ್ ಆರ್. ಶಿವಕುಮಾರ್ ತಿಳಿಸಿದ್ದಾರೆ.</p>.<p>ಶರಾವತಿ ಕಣಿವೆಯಾದ್ಯಂತ ಹರಿಯುವ ಮಳೆ ನೀರನ್ನು ಬಳಸಿ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದೆ. ಅಣೆಕಟ್ಟೆಯ ನೀರಿನಿಂದ ಪ್ರಮುಖ 4 ಜಲ ವಿದ್ಯುದಾಗರಗಳಲ್ಲಿ 24 ವಿದ್ಯುತ್ ಘಟಕಗಳಿಂದ 1,530 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. </p>.<p>ಮಳೆ ನೀರನ್ನು ಸಮರ್ಥವಾಗಿ ಬಳಸುವಲ್ಲಿ ಕೆಪಿಸಿ ನಿಗಮದ ತಜ್ಞರ ತಂಡ ಕಾರ್ಯ ನಿರ್ವಹಿಸುತ್ತಿದೆ ಎಂದು ಸಿವಿಲ್ ವಿಭಾಗದ ಉಸ್ತುವಾರಿ ಮುಖ್ಯ ಎಂಜಿನಿಯರ್ ಮಾದೇಶ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>