<p><strong>ಶಿವಮೊಗ್ಗ</strong>: ಸಾಗರ ತಾಲ್ಲೂಕಿನ ಆನಂದಪುರ-ಹೊಸೂರು ಹಾಗೂ ಸುತ್ತಲಿನ ನಿವಾಸಿಗಳಿಗೆ ಆದ್ರೆ ಮಳೆಯ ತಂಪಿನ ನಡುವೆ ಬುಧವಾರ ಕೋಳಿ ಊಟದ ಗಮ್ಮತ್ತು ಬಿಸಿಯಾಗಿಸಿತು.</p><p>ಹೊಸೂರು-ಆನಂದಪುರ ನಡುವಿನ ರಾಷ್ಟ್ರೀಯ ಹೆದ್ದಾರಿ 206ರ ತಿರುವಿನಲ್ಲಿ ಬೆಳಿಗ್ಗೆ ಕೋಳಿ ತುಂಬಿದ್ದ ಲಾರಿ ಪಲ್ಟಿಯಾಗಿ ರಸ್ತೆಗೆ ಬಿದ್ದ ಕೋಳಿಗಳನ್ನು ಸ್ಥಳೀಯರು, ರಸ್ತೆಯಲ್ಲಿ ಓಡಾಡುವವರು ಉಚಿತವಾಗಿ ಕೊಂಡೊಯ್ದರು.</p><p>ತುಮಕೂರಿನ ತಾಜ್ ಟ್ರೇಡರ್ಸ್ ಗೆ ಸೇರಿದ ಲಾರಿಯಲ್ಲಿ ನಾಲ್ಕೂವರೆ ಟನ್ ತೂಕದಷ್ಟು ಕೋಳಿಗಳನ್ನು ಸಾಗರಕ್ಕೆ ಸಾಗಣೆ ಮಾಡಲಾಗುತ್ತಿತ್ತು.</p><p>ಅಪಘಾತದಿಂದ ಬಹಳಷ್ಟು ಕೋಳಿಗಳು ಸಾವಿಗೀಡಾಗಿದ್ದು, ಇನ್ನೂ ಕೆಲವು ಜೀವನ್ಮರಣದ ಸ್ಥಿತಿಯಲ್ಲಿದ್ದವು. ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ನಿಲ್ಲಿಸಿ ಕೆಲವರು ಕೋಳಿಗಳ ಕೊಂಡೊಯ್ದರು.</p><p>'ಆದ್ರಿ ಮಳೆಗೆ ಥಂಡಿ ಹಿಡಿದಿದೆ. ಇವತ್ತು ಮನೆಯಲ್ಲಿ ಕೋಳಿ ಊಟದ ಗಮ್ಮತ್ತು. ಬಹಳಷ್ಟು ಖಾದ್ಯ ಮಾಡಬಹುದು ಕಣ್ರಿ' ಎಂದು ಕೋಳಿಗಳ ಹಿಡಿದು ಹೊರಟ ಆನಂದಪುರದ ಕೂಲಿ ಕಾರ್ಮಿಕ ಭಾಸ್ಕರ ನಕ್ಕರು.</p><p>'ತಿರುವಿನಲ್ಲಿ ದಿಢೀರನೆ ಕಾರಿನವನು ಅಡ್ಡಬಂದ ಕಾರಣ ನಿಯಂತ್ರಣ ತಪ್ಪಿತು. ಸತ್ತಿರುವ ಕೋಳಿಗಳ ಒಯ್ದು ಏನು ಮಾಡುವುದು. ಜನರು ಒಯ್ಯಲು ಬಿಡಿ. ಅಪಘಾತದಿಂದ ₹8 ಲಕ್ಷದಷ್ಟು ಹಾನಿಯಾಗಿದೆ' ಎಂದು ಲಾರಿ ಚಾಲಕ ಫಯಾಜ್ 'ಪ್ರಜಾವಾಣಿ' ಗೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ಸಾಗರ ತಾಲ್ಲೂಕಿನ ಆನಂದಪುರ-ಹೊಸೂರು ಹಾಗೂ ಸುತ್ತಲಿನ ನಿವಾಸಿಗಳಿಗೆ ಆದ್ರೆ ಮಳೆಯ ತಂಪಿನ ನಡುವೆ ಬುಧವಾರ ಕೋಳಿ ಊಟದ ಗಮ್ಮತ್ತು ಬಿಸಿಯಾಗಿಸಿತು.</p><p>ಹೊಸೂರು-ಆನಂದಪುರ ನಡುವಿನ ರಾಷ್ಟ್ರೀಯ ಹೆದ್ದಾರಿ 206ರ ತಿರುವಿನಲ್ಲಿ ಬೆಳಿಗ್ಗೆ ಕೋಳಿ ತುಂಬಿದ್ದ ಲಾರಿ ಪಲ್ಟಿಯಾಗಿ ರಸ್ತೆಗೆ ಬಿದ್ದ ಕೋಳಿಗಳನ್ನು ಸ್ಥಳೀಯರು, ರಸ್ತೆಯಲ್ಲಿ ಓಡಾಡುವವರು ಉಚಿತವಾಗಿ ಕೊಂಡೊಯ್ದರು.</p><p>ತುಮಕೂರಿನ ತಾಜ್ ಟ್ರೇಡರ್ಸ್ ಗೆ ಸೇರಿದ ಲಾರಿಯಲ್ಲಿ ನಾಲ್ಕೂವರೆ ಟನ್ ತೂಕದಷ್ಟು ಕೋಳಿಗಳನ್ನು ಸಾಗರಕ್ಕೆ ಸಾಗಣೆ ಮಾಡಲಾಗುತ್ತಿತ್ತು.</p><p>ಅಪಘಾತದಿಂದ ಬಹಳಷ್ಟು ಕೋಳಿಗಳು ಸಾವಿಗೀಡಾಗಿದ್ದು, ಇನ್ನೂ ಕೆಲವು ಜೀವನ್ಮರಣದ ಸ್ಥಿತಿಯಲ್ಲಿದ್ದವು. ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ನಿಲ್ಲಿಸಿ ಕೆಲವರು ಕೋಳಿಗಳ ಕೊಂಡೊಯ್ದರು.</p><p>'ಆದ್ರಿ ಮಳೆಗೆ ಥಂಡಿ ಹಿಡಿದಿದೆ. ಇವತ್ತು ಮನೆಯಲ್ಲಿ ಕೋಳಿ ಊಟದ ಗಮ್ಮತ್ತು. ಬಹಳಷ್ಟು ಖಾದ್ಯ ಮಾಡಬಹುದು ಕಣ್ರಿ' ಎಂದು ಕೋಳಿಗಳ ಹಿಡಿದು ಹೊರಟ ಆನಂದಪುರದ ಕೂಲಿ ಕಾರ್ಮಿಕ ಭಾಸ್ಕರ ನಕ್ಕರು.</p><p>'ತಿರುವಿನಲ್ಲಿ ದಿಢೀರನೆ ಕಾರಿನವನು ಅಡ್ಡಬಂದ ಕಾರಣ ನಿಯಂತ್ರಣ ತಪ್ಪಿತು. ಸತ್ತಿರುವ ಕೋಳಿಗಳ ಒಯ್ದು ಏನು ಮಾಡುವುದು. ಜನರು ಒಯ್ಯಲು ಬಿಡಿ. ಅಪಘಾತದಿಂದ ₹8 ಲಕ್ಷದಷ್ಟು ಹಾನಿಯಾಗಿದೆ' ಎಂದು ಲಾರಿ ಚಾಲಕ ಫಯಾಜ್ 'ಪ್ರಜಾವಾಣಿ' ಗೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>