<p><strong>ಶಿವಮೊಗ್ಗ:</strong> ಪಿತೃಪಕ್ಷ ಅಮಾವಾಸ್ಯೆ ಆಚರಣೆ ಶಿವಮೊಗ್ಗ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ನಡೆಯಿತು. ಅಮಾವಾಸ್ಯೆಯ ನಂತರದ ನವರಾತ್ರಿಯ ಸಂಭ್ರಮಕ್ಕೆ ಮುನ್ನುಡಿ ಬರೆಯಲಾಯಿತು.</p><p>ಶಿವಮೊಗ್ಗದ ಕೋಟೆ ಪ್ರದೇಶದ ತುಂಗಾ ನದಿಯ ಭೀಮನ ಮಡು ದಂಡೆಯಲ್ಲಿ ಬೆಳಿಗ್ಗೆಯಿಂದಲೇ ಪಿತೃಗಳಿಗೆ ತರ್ಪಣ ಬಿಡುವ ಧಾರ್ಮಿಕ ಕಾರ್ಯ ನಡೆಯಿತು.</p><p>ನದಿ ದಂಡೆಯ ತಾಲ್ಲೂಕು ಬ್ರಾಹ್ಮಣ ಸಂಘದ ಸಭಾಂಗಣ ಹಾಗೂ ಗುರು ಕರಿಬಸವೇಶ್ವರ ಭವನದಲ್ಲಿ ಪಿತೃಪಕ್ಷದ ಅಂಗವಾಗಿ ವಿಶೇಷ ಆಚರಣೆಗಳು ನಡೆದವು.</p><p>ಕುಟುಂಬ ಸಮೇತರಾಗಿ ಪಿತೃಪಕ್ಷ ಆಚರಣೆಯಲ್ಲಿ ಪಾಲ್ಗೊಂಡ ಸಾರ್ವಜನಿಕರು ಅರ್ಚಕರು ಹಾಗೂ ಪೂಜಾರರ ಸಮ್ಮುಖದಲ್ಲಿ ಅವರ ಮಾರ್ಗದರ್ಶನದಂತೆ ಪೂಜಾ ವಿಧಿವಿಧಾನ ನೆರವೇರಿಸಿದರು.</p><p>ಹಿರಿಯರಿಗೆ ಇಷ್ಟವಾದ ತಿಂಡಿ, ಭಕ್ಷ್ಯಭೋಜನಗಳನ್ನು ಸಿದ್ಧಪಡಿಸಿಕೊಂಡು ತಂದು ಬಾಳೆ ಎಲೆಯಲ್ಲಿ ಎಡೆ ಇಟ್ಟು ನದಿ ದಂಡೆಯಲ್ಲಿ ಪಿತೃಗಳಿಗೆ ಸಮರ್ಪಣೆ ಮಾಡಿ ಹಿರಿಯರನ್ನು ಸ್ಮರಿಸಿದರು.ನಂತರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.</p><p>ತೀರ್ಥಹಳ್ಳಿಯ ತುಂಗಾ ನದಿ ದಂಡೆ, ಸಾಗರದಲ್ಲಿ ವರದೆಯ ಒಡಲು, ಕೂಡಲಿ ಬಳಿಯ ತುಂಗ-ಭದ್ರಾ ಸಂಗಮ ಸ್ಥಳ, ಹೊಸನಗರದಲ್ಲಿ ಶರಾವತಿ ಹಿನ್ನೀರು ಪ್ರದೇಶದಲ್ಲಿ ಪಿತೃಗಳಿಗೆ ತರ್ಪಣ ಬಿಟ್ಡು ಹಿರಿಯರ ಸ್ಮರಣೆ ಮೂಲಕ ಪಕ್ಷಾಚರಣೆ ಮಾಡಿ ನಂತರ ಸಾಮೂಹಿಕ ಭೋಜನ ಮಾಡಲಾಯಿತು.</p><p><strong>ನೀರಲ್ಲಿ ಮುಳುಗಿ ನಾಣ್ಯ ಹೆಕ್ಕಲು ಪೈಪೋಟಿ..!</strong></p><p>ಶಿವಮೊಗ್ಗದ ತುಂಗಾ ನದಿ ದಂಡೆಯಲ್ಲಿ ಪಿತೃಪಕ್ಷ ಆಚರಣೆ ಪೂಜೆಯ ವೇಳೆ ನದಿಗೆ ಹಾಕುತ್ತಿದ್ದ ನಾಣ್ಯ ಹೆಕ್ಕಲು ಪೈಪೋಟಿ ನಡೆದಿತ್ತು.</p><p>ನದಿಯ ನೀರಲ್ಲಿ ಮುಳುಗಿ ಮಣ್ಣು, ಮರಳು ಮೇಲೆ ತಂದು ಅದರಲ್ಲಿ ನಾಣ್ಯಗಳನ್ನು ಹುಡುಕಿ ಹೆಕ್ಕುವ ಅಪಾಯಕಾರಿ ಕಾರ್ಯದಲ್ಲಿ ಕೆಲವರು ನಿರತರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಪಿತೃಪಕ್ಷ ಅಮಾವಾಸ್ಯೆ ಆಚರಣೆ ಶಿವಮೊಗ್ಗ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ನಡೆಯಿತು. ಅಮಾವಾಸ್ಯೆಯ ನಂತರದ ನವರಾತ್ರಿಯ ಸಂಭ್ರಮಕ್ಕೆ ಮುನ್ನುಡಿ ಬರೆಯಲಾಯಿತು.</p><p>ಶಿವಮೊಗ್ಗದ ಕೋಟೆ ಪ್ರದೇಶದ ತುಂಗಾ ನದಿಯ ಭೀಮನ ಮಡು ದಂಡೆಯಲ್ಲಿ ಬೆಳಿಗ್ಗೆಯಿಂದಲೇ ಪಿತೃಗಳಿಗೆ ತರ್ಪಣ ಬಿಡುವ ಧಾರ್ಮಿಕ ಕಾರ್ಯ ನಡೆಯಿತು.</p><p>ನದಿ ದಂಡೆಯ ತಾಲ್ಲೂಕು ಬ್ರಾಹ್ಮಣ ಸಂಘದ ಸಭಾಂಗಣ ಹಾಗೂ ಗುರು ಕರಿಬಸವೇಶ್ವರ ಭವನದಲ್ಲಿ ಪಿತೃಪಕ್ಷದ ಅಂಗವಾಗಿ ವಿಶೇಷ ಆಚರಣೆಗಳು ನಡೆದವು.</p><p>ಕುಟುಂಬ ಸಮೇತರಾಗಿ ಪಿತೃಪಕ್ಷ ಆಚರಣೆಯಲ್ಲಿ ಪಾಲ್ಗೊಂಡ ಸಾರ್ವಜನಿಕರು ಅರ್ಚಕರು ಹಾಗೂ ಪೂಜಾರರ ಸಮ್ಮುಖದಲ್ಲಿ ಅವರ ಮಾರ್ಗದರ್ಶನದಂತೆ ಪೂಜಾ ವಿಧಿವಿಧಾನ ನೆರವೇರಿಸಿದರು.</p><p>ಹಿರಿಯರಿಗೆ ಇಷ್ಟವಾದ ತಿಂಡಿ, ಭಕ್ಷ್ಯಭೋಜನಗಳನ್ನು ಸಿದ್ಧಪಡಿಸಿಕೊಂಡು ತಂದು ಬಾಳೆ ಎಲೆಯಲ್ಲಿ ಎಡೆ ಇಟ್ಟು ನದಿ ದಂಡೆಯಲ್ಲಿ ಪಿತೃಗಳಿಗೆ ಸಮರ್ಪಣೆ ಮಾಡಿ ಹಿರಿಯರನ್ನು ಸ್ಮರಿಸಿದರು.ನಂತರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.</p><p>ತೀರ್ಥಹಳ್ಳಿಯ ತುಂಗಾ ನದಿ ದಂಡೆ, ಸಾಗರದಲ್ಲಿ ವರದೆಯ ಒಡಲು, ಕೂಡಲಿ ಬಳಿಯ ತುಂಗ-ಭದ್ರಾ ಸಂಗಮ ಸ್ಥಳ, ಹೊಸನಗರದಲ್ಲಿ ಶರಾವತಿ ಹಿನ್ನೀರು ಪ್ರದೇಶದಲ್ಲಿ ಪಿತೃಗಳಿಗೆ ತರ್ಪಣ ಬಿಟ್ಡು ಹಿರಿಯರ ಸ್ಮರಣೆ ಮೂಲಕ ಪಕ್ಷಾಚರಣೆ ಮಾಡಿ ನಂತರ ಸಾಮೂಹಿಕ ಭೋಜನ ಮಾಡಲಾಯಿತು.</p><p><strong>ನೀರಲ್ಲಿ ಮುಳುಗಿ ನಾಣ್ಯ ಹೆಕ್ಕಲು ಪೈಪೋಟಿ..!</strong></p><p>ಶಿವಮೊಗ್ಗದ ತುಂಗಾ ನದಿ ದಂಡೆಯಲ್ಲಿ ಪಿತೃಪಕ್ಷ ಆಚರಣೆ ಪೂಜೆಯ ವೇಳೆ ನದಿಗೆ ಹಾಕುತ್ತಿದ್ದ ನಾಣ್ಯ ಹೆಕ್ಕಲು ಪೈಪೋಟಿ ನಡೆದಿತ್ತು.</p><p>ನದಿಯ ನೀರಲ್ಲಿ ಮುಳುಗಿ ಮಣ್ಣು, ಮರಳು ಮೇಲೆ ತಂದು ಅದರಲ್ಲಿ ನಾಣ್ಯಗಳನ್ನು ಹುಡುಕಿ ಹೆಕ್ಕುವ ಅಪಾಯಕಾರಿ ಕಾರ್ಯದಲ್ಲಿ ಕೆಲವರು ನಿರತರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>