ಹಿಂದಿನ ವರ್ಷಕ್ಕೂ ಈಗ ಆಕಾಶ, ಭೂಮಿಯಷ್ಟು ಅಂತರ..
ಸಾಗರ ತಾಲ್ಲೂಕಿನ ಸೈದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು 2023ನೇ ಸಾಲಿನಲ್ಲಿ ಪ್ರತೀ ಹೆಕ್ಟೇರ್ಗೆ ₹ 74 ಸಾವಿರ ವಿಮಾ ಪರಿಹಾರ ಮೊತ್ತ ಪಡೆದಿದ್ದರು. ಈ ಬಾರಿ ಅವರಿಗೆ ಹೆಕ್ಟೇರ್ಗೆ ₹17,200 ಬಂದಿದೆ. ಕಳೆದ ವರ್ಷಕ್ಕಿಂತ ₹ 57 ಸಾವಿರ ಕಡಿಮೆ ಆಗಿದೆ. ಕೋಳೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದಿನ ವರ್ಷ ₹ 74 ಸಾವಿರ ಬಂದಿತ್ತು. ಈ ಬಾರಿ ಅದು ₹ 9,000ಕ್ಕೆ ಇಳಿದಿದೆ. ಕೆಳದಿ ಪಂಚಾಯಿತಿಯಲ್ಲಿ ₹21,000 ಇದ್ದದ್ದು, ₹ 6,800ಕ್ಕೆ ಕುಸಿದಿದೆ. ತ್ಯಾಗರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹64,000 ಇದ್ದದ್ದು, 2024ನೇ ಸಾಲಿನಲ್ಲಿ ₹6,200ಕ್ಕೆ ಇಳಿಕೆಯಾಗಿದೆ. ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2023ರಲ್ಲಿ ₹ 74,000 ಬಂದಿದ್ದ ವಿಮಾ ಮೊತ್ತ ಈ ಬಾರಿ ₹2,200ಕ್ಕೆ ಇಳಿಕೆಯಾಗಿದೆ. ಬರೀ ಸಾಗರ ತಾಲ್ಲೂಕು ಮಾತ್ರವಲ್ಲ ಮಲೆನಾಡು ಭಾಗದ ತೀರ್ಥಹಳ್ಳಿ, ಹೊಸನಗರ ತಾಲ್ಲೂಕುಗಳಲ್ಲೂ ಇದೇ ಪರಿಸ್ಥಿತಿ ಇದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.