<p><strong>ತೀರ್ಥಹಳ್ಳಿ: </strong>ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟರು. ಈ ವಿಚಾರ ತಿಳಿಯುತ್ತಿದ್ದಂತೆ ಮಾಲೀಕನಿಗೂ ಹೃದಯಾಘಾತ ಉಂಟಾಗಿ ಅವರು ಕೂಡ ಅಸುನೀಗಿದರು. ಈ ಮನಕಲಕುವ ಪ್ರಕರಣ ತಾಲ್ಲೂಕಿನ ಆರಗ ಗ್ರಾಮದಲ್ಲಿ ಸೋಮವಾರ ನಡೆದಿದೆ.</p>.<p>ಕಾರ್ಮಿಕ ಬರ್ಮಪ್ಪ (45) ಮತ್ತು ಮಾಲೀಕ ದುಗ್ಗಪ್ಪ ಗೌಡ (75) ಮೃತಪಟ್ಟವರು. ನಿವೃತ್ತ ಶಿಕ್ಷಕರಾಗಿರುವ ದುಗ್ಗಪ್ಪ ಗೌಡರ ತೋಟದ ಕೆಲಸಕ್ಕೆ ಬರ್ಮಪ್ಪ ಬಂದಿದ್ದರು. ಮಧ್ಯಾಹ್ನದವರೆಗೆ ಚೆನ್ನಾಗಿಯೇ ಕೆಲಸ ಮಾಡಿದ್ದರು. ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಅವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಕುಸಿದು ಬಿದ್ದರು. ತಕ್ಷಣ ದುಗ್ಗಪ್ಪ ಗೌಡರ ಮನೆಯ ಸದಸ್ಯರು ಸ್ಥಳಕ್ಕೆ ಬಂದರು.ಅಷ್ಟು ಹೊತ್ತಿಗೆ ಬರ್ಮಪ್ಪ ಮೃತಪಟ್ಟಿದ್ದರು. ಈ ವಿಚಾರವನ್ನು ಬರ್ಮಪ್ಪನ ಮನೆಯವರಿಗೆ ತಿಳಿಸಲು ಹೊರಟಿದ್ದ ದುಗ್ಗಪ್ಪ ಗೌಡ ಅವರೂ ದಾರಿ ಮಧ್ಯೆಯೇ ಕುಸಿದು ಮೃತಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೀರ್ಥಹಳ್ಳಿ: </strong>ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟರು. ಈ ವಿಚಾರ ತಿಳಿಯುತ್ತಿದ್ದಂತೆ ಮಾಲೀಕನಿಗೂ ಹೃದಯಾಘಾತ ಉಂಟಾಗಿ ಅವರು ಕೂಡ ಅಸುನೀಗಿದರು. ಈ ಮನಕಲಕುವ ಪ್ರಕರಣ ತಾಲ್ಲೂಕಿನ ಆರಗ ಗ್ರಾಮದಲ್ಲಿ ಸೋಮವಾರ ನಡೆದಿದೆ.</p>.<p>ಕಾರ್ಮಿಕ ಬರ್ಮಪ್ಪ (45) ಮತ್ತು ಮಾಲೀಕ ದುಗ್ಗಪ್ಪ ಗೌಡ (75) ಮೃತಪಟ್ಟವರು. ನಿವೃತ್ತ ಶಿಕ್ಷಕರಾಗಿರುವ ದುಗ್ಗಪ್ಪ ಗೌಡರ ತೋಟದ ಕೆಲಸಕ್ಕೆ ಬರ್ಮಪ್ಪ ಬಂದಿದ್ದರು. ಮಧ್ಯಾಹ್ನದವರೆಗೆ ಚೆನ್ನಾಗಿಯೇ ಕೆಲಸ ಮಾಡಿದ್ದರು. ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಅವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಕುಸಿದು ಬಿದ್ದರು. ತಕ್ಷಣ ದುಗ್ಗಪ್ಪ ಗೌಡರ ಮನೆಯ ಸದಸ್ಯರು ಸ್ಥಳಕ್ಕೆ ಬಂದರು.ಅಷ್ಟು ಹೊತ್ತಿಗೆ ಬರ್ಮಪ್ಪ ಮೃತಪಟ್ಟಿದ್ದರು. ಈ ವಿಚಾರವನ್ನು ಬರ್ಮಪ್ಪನ ಮನೆಯವರಿಗೆ ತಿಳಿಸಲು ಹೊರಟಿದ್ದ ದುಗ್ಗಪ್ಪ ಗೌಡ ಅವರೂ ದಾರಿ ಮಧ್ಯೆಯೇ ಕುಸಿದು ಮೃತಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>