ಶಿರಾದ ಶಿವಾಜಿನಗರ ನಿವಾಸಿಗಳಾದ ತಿಮ್ಮಣ್ಣ (48) ಹಾಗೂ ಮಗ ಬಸವರಾಜು (26) ಬುಕ್ಕಾಪಟ್ಟಣ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಕಂಬದಹಳ್ಳಿ ಗೇಟ್ ಬಳಿ ಎದುರಿಗೆ ಬರುತ್ತಿದ್ದ ಖಾಸಗಿ ಬಸ್ಗೆ ಮುಖಾಮುಖಿ ಡಿಕ್ಕಿ ಹೊಡೆದಾಗ ದ್ವಿಚಕ್ರ ವಾಹನದಲ್ಲಿದ್ದ ತಿಮ್ಮಣ್ಣ ಮತ್ತು ಆತನ ಮಗ ಬಸವರಾಜು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಶಿರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.