<p><strong>ಚಿಕ್ಕನಾಯಕನಹಳ್ಳಿ:</strong> ಪಟ್ಟಣದ ರೇವಣಸಿದ್ದೇಶ್ವರ ಮಠದ ಬಳಿ ಚಂದ್ರಗುತ್ತಿ ಯಲ್ಲಮ್ಮದೇವಿ ದೇಗುಲ ಪ್ರಾರಂಭೋತ್ಸವ ಪ್ರಯುಕ್ತ ಹೋಮ ಹಾಗೂ ಪೂಜಾ ವಿಧಿ, ವಿಧಾನ ನೆರವೇರಿದವು.</p>.<p>ಭಾನುವಾರ ಧ್ವಜಾರೋಹಣದೊಂದಿಗೆ ಪೂಜಾ ಕಾರ್ಯಕ್ರಮ ಆರಂಭವಾದವು. ನಂತರ ಸಾಮೂಹಿಕ ನಾಗರಪೂಜೆ, ವೀರಲಕ್ಕಮ್ಮದೇವಿ, ರೇವಣಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಮುದ್ದುಲಿಂಗೇಶ್ವರ, ಶಿರುವಾಳ ಬೀರಲಿಂಗೇಶ್ವರ ಪುರಪ್ರವೇಶವಾಯಿತು.</p>.<p>ಚಂದ್ರಗುತ್ತಿ ಯಲ್ಲಮ್ಮದೇವಿ, ಆದ್ವಾನಿ ಯಲ್ಲಮ್ಮದೇವಿ ಹಾಗೂ ಚೌಡಿಕೆ ಯಲ್ಲಮ್ಮದೇವಿ ಮೆರವಣಿಗೆ ಅದ್ದೂರಿಯಾಗಿ ನಡೆಸಲಾಯಿತು. ಸೋಮವಾರ ಚಂದ್ರಗುತ್ತಿ ಯಲ್ಲಮ್ಮದೇವಿ ಸನ್ನಿಧಿಯಲ್ಲಿ ಹೋಮ, ವಿಶೇಷ ಪೂಜೆ ಬಳಿಕ ಎಲ್ಲ ದೇವರುಗಳ ಗಂಗಾಪೂಜೆ ನೆರವೇರಿಸಲಾಯಿತು.</p>.<p>ಶರಣಪ್ಪ ಒಡೆಯರ್ ನೇತೃತ್ವದಲ್ಲಿ ಚಂದ್ರಗುತ್ತಿ ಎಲ್ಲಮ್ಮ ದೇವಿ ಸೇವಾ ಟ್ರಸ್ಟ್ನ ಅಧ್ಯಕ್ಷ ಸಿ.ಎಂ.ಶಂಭು, ಸಿ.ಟಿ ಮುದ್ದುಕುಮಾರ್, ಡಾ.ಸಿ.ಎಸ್. ಸುಶ್ರುತ್, ಸಿ.ಗುರುಮೂರ್ತಿ, ಸಿ.ಡಿ. ಚಂದ್ರಶೇಖರ್, ಸಿ.ಕೆ. ಪುಟ್ಟಸ್ವಾಮಿ ಪಾಲ್ಗೊಂಡಿದ್ದರು.</p>.<p>ಮಂಗಳವಾರ ಮೆರವಣಿಗೆ ಮೂಲಕ ಎಲ್ಲ ದೇವರ ನೂತನ ದೇವಾಲಯ ಪ್ರವೇಶ ಮಾಡಿದವು. ತೀರ್ಥಾಭಿಷೇಕ, ಮೂಲವಿಗ್ರಹ, ಕಳಶ, ತ್ರಿಶೂಲ ಪ್ರತಿಷ್ಠಾಪನೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಓಕಳಿ ಉತ್ಸವ ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕನಾಯಕನಹಳ್ಳಿ:</strong> ಪಟ್ಟಣದ ರೇವಣಸಿದ್ದೇಶ್ವರ ಮಠದ ಬಳಿ ಚಂದ್ರಗುತ್ತಿ ಯಲ್ಲಮ್ಮದೇವಿ ದೇಗುಲ ಪ್ರಾರಂಭೋತ್ಸವ ಪ್ರಯುಕ್ತ ಹೋಮ ಹಾಗೂ ಪೂಜಾ ವಿಧಿ, ವಿಧಾನ ನೆರವೇರಿದವು.</p>.<p>ಭಾನುವಾರ ಧ್ವಜಾರೋಹಣದೊಂದಿಗೆ ಪೂಜಾ ಕಾರ್ಯಕ್ರಮ ಆರಂಭವಾದವು. ನಂತರ ಸಾಮೂಹಿಕ ನಾಗರಪೂಜೆ, ವೀರಲಕ್ಕಮ್ಮದೇವಿ, ರೇವಣಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಮುದ್ದುಲಿಂಗೇಶ್ವರ, ಶಿರುವಾಳ ಬೀರಲಿಂಗೇಶ್ವರ ಪುರಪ್ರವೇಶವಾಯಿತು.</p>.<p>ಚಂದ್ರಗುತ್ತಿ ಯಲ್ಲಮ್ಮದೇವಿ, ಆದ್ವಾನಿ ಯಲ್ಲಮ್ಮದೇವಿ ಹಾಗೂ ಚೌಡಿಕೆ ಯಲ್ಲಮ್ಮದೇವಿ ಮೆರವಣಿಗೆ ಅದ್ದೂರಿಯಾಗಿ ನಡೆಸಲಾಯಿತು. ಸೋಮವಾರ ಚಂದ್ರಗುತ್ತಿ ಯಲ್ಲಮ್ಮದೇವಿ ಸನ್ನಿಧಿಯಲ್ಲಿ ಹೋಮ, ವಿಶೇಷ ಪೂಜೆ ಬಳಿಕ ಎಲ್ಲ ದೇವರುಗಳ ಗಂಗಾಪೂಜೆ ನೆರವೇರಿಸಲಾಯಿತು.</p>.<p>ಶರಣಪ್ಪ ಒಡೆಯರ್ ನೇತೃತ್ವದಲ್ಲಿ ಚಂದ್ರಗುತ್ತಿ ಎಲ್ಲಮ್ಮ ದೇವಿ ಸೇವಾ ಟ್ರಸ್ಟ್ನ ಅಧ್ಯಕ್ಷ ಸಿ.ಎಂ.ಶಂಭು, ಸಿ.ಟಿ ಮುದ್ದುಕುಮಾರ್, ಡಾ.ಸಿ.ಎಸ್. ಸುಶ್ರುತ್, ಸಿ.ಗುರುಮೂರ್ತಿ, ಸಿ.ಡಿ. ಚಂದ್ರಶೇಖರ್, ಸಿ.ಕೆ. ಪುಟ್ಟಸ್ವಾಮಿ ಪಾಲ್ಗೊಂಡಿದ್ದರು.</p>.<p>ಮಂಗಳವಾರ ಮೆರವಣಿಗೆ ಮೂಲಕ ಎಲ್ಲ ದೇವರ ನೂತನ ದೇವಾಲಯ ಪ್ರವೇಶ ಮಾಡಿದವು. ತೀರ್ಥಾಭಿಷೇಕ, ಮೂಲವಿಗ್ರಹ, ಕಳಶ, ತ್ರಿಶೂಲ ಪ್ರತಿಷ್ಠಾಪನೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಓಕಳಿ ಉತ್ಸವ ನಡೆದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>