<p><strong>ಪಾವಗಡ: </strong>ತಾಲ್ಲೂಕಿನ 5 ಮಂದಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ.</p>.<p>ಪಟ್ಟಣದ ಸಾಯಿರಾಂ ಕಲ್ಯಾಣಮಂಟಪ ಬಳಿಯ 28 ವರ್ಷ ಯುವಕ, ಎಸ್.ಆರ್.ಪಾಳ್ಯದ 38 ವರ್ಷದ ಮಹಿಳೆ, ಇದೇ ಗ್ರಾಮದ 5 ವರ್ಷ ವಯಸ್ಸಿನ ಬಾಲಕ, 63 ವರ್ಷದ ವೃದ್ಧನಿಗೆ ಸೋಂಕು ದೃಢಪಟ್ಟಿದೆ. ತಾಲ್ಲೂಕಿನ ಸೂಲನಾಯಕನಹಳ್ಳಿಯ 73 ವರ್ಷ ಸೋಂಕು ತಗುಲಿದೆ.</p>.<p>ಇವರಲ್ಲಿ ಸೂಲನಾಯಕನಹಳ್ಳಿಯ 73 ವರ್ಷದ ವೃದ್ಧ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 4 ಮಂದಿ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿದೆ.</p>.<p>ಪಟ್ಟಣದ ಸಾಯಿರಾಂ ಕಲ್ಯಾಣ ಮಂಟಪ ಬಡಾವಣೆಯನ್ನು ಸೀಲ್ಡೌನ್ ಮಾಡಲಾಗಿದೆ. 28 ವರ್ಷ ವಯಸ್ಸಿನ ಯುವಕನ ಮನೆಗೆ ಬೆಂಗಳೂರಿನಿಂದ ಅವರ ಸಹೋದರ ಬಂದಿದ್ದರು ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.</p>.<p>5 ವರ್ಷದ ಬಾಲಕನಿಗೆ ಚಿಕಿತ್ಸೆ ಕೊಡಿಸಲು ಅವರ ತಾಯಿಯನ್ನು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.</p>.<p>ಪ್ರತ್ಯೇಕ ತುರ್ತು ವಾಹನಕ್ಕೆ ಒತ್ತಾಯ: ಪಟ್ಟಣದ ಸೋಂಕಿತ ಯುವಕ ತನಗೆ ಸೊಂಕು ಇಲ್ಲ ಪ್ರತ್ಯೇಕ ತುರ್ತು ವಾಹನದಲ್ಲಿ ಕಳುಹಿಸಿಕೊಡಿ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಯ ಜತೆ ಮಾತಿನ ಚಕಮಕಿ ನಡೆಸಿದರು. ಸಿಬ್ಬಂದಿ ಸೋಂಕು ದೃಢಪಟ್ಟಿದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಕೊರೊನಾದಿಂದ ಪಾರಾಗಬಹುದು ಎಂದು ಮನವೊಲಿಸಿ ಕಳುಹಿಸಿಕೊಟ್ಟಿದ್ದಾರೆ.</p>.<p>ಸೋಂಕಿತರ ಪತ್ತೆಯಾಗಿರುವ ಸಾಯಿರಾಂ ಕಲ್ಯಾಣಮಂಟಪ ಬಡಾವಣೆಯನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ. ಗ್ರಾಮಗಳನ್ನು ಸೀಲ್ಡೌನ್ ಮಾಡಿ, ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ.</p>.<p>ಪಟ್ಟಣದ ಯುವಕನ ಪ್ರಾಥಮಿಕ ಸಂಪರ್ಕದಲ್ಲಿ 16ಕ್ಕೂ ಹೆಚ್ಚಿನ ಮಂದಿ ಇದ್ದರು ಎಂಬುದು ಜನರಲ್ಲಿ ಆತಂಕ ಮೂಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾವಗಡ: </strong>ತಾಲ್ಲೂಕಿನ 5 ಮಂದಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ.</p>.<p>ಪಟ್ಟಣದ ಸಾಯಿರಾಂ ಕಲ್ಯಾಣಮಂಟಪ ಬಳಿಯ 28 ವರ್ಷ ಯುವಕ, ಎಸ್.ಆರ್.ಪಾಳ್ಯದ 38 ವರ್ಷದ ಮಹಿಳೆ, ಇದೇ ಗ್ರಾಮದ 5 ವರ್ಷ ವಯಸ್ಸಿನ ಬಾಲಕ, 63 ವರ್ಷದ ವೃದ್ಧನಿಗೆ ಸೋಂಕು ದೃಢಪಟ್ಟಿದೆ. ತಾಲ್ಲೂಕಿನ ಸೂಲನಾಯಕನಹಳ್ಳಿಯ 73 ವರ್ಷ ಸೋಂಕು ತಗುಲಿದೆ.</p>.<p>ಇವರಲ್ಲಿ ಸೂಲನಾಯಕನಹಳ್ಳಿಯ 73 ವರ್ಷದ ವೃದ್ಧ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 4 ಮಂದಿ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿದೆ.</p>.<p>ಪಟ್ಟಣದ ಸಾಯಿರಾಂ ಕಲ್ಯಾಣ ಮಂಟಪ ಬಡಾವಣೆಯನ್ನು ಸೀಲ್ಡೌನ್ ಮಾಡಲಾಗಿದೆ. 28 ವರ್ಷ ವಯಸ್ಸಿನ ಯುವಕನ ಮನೆಗೆ ಬೆಂಗಳೂರಿನಿಂದ ಅವರ ಸಹೋದರ ಬಂದಿದ್ದರು ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.</p>.<p>5 ವರ್ಷದ ಬಾಲಕನಿಗೆ ಚಿಕಿತ್ಸೆ ಕೊಡಿಸಲು ಅವರ ತಾಯಿಯನ್ನು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.</p>.<p>ಪ್ರತ್ಯೇಕ ತುರ್ತು ವಾಹನಕ್ಕೆ ಒತ್ತಾಯ: ಪಟ್ಟಣದ ಸೋಂಕಿತ ಯುವಕ ತನಗೆ ಸೊಂಕು ಇಲ್ಲ ಪ್ರತ್ಯೇಕ ತುರ್ತು ವಾಹನದಲ್ಲಿ ಕಳುಹಿಸಿಕೊಡಿ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಯ ಜತೆ ಮಾತಿನ ಚಕಮಕಿ ನಡೆಸಿದರು. ಸಿಬ್ಬಂದಿ ಸೋಂಕು ದೃಢಪಟ್ಟಿದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಕೊರೊನಾದಿಂದ ಪಾರಾಗಬಹುದು ಎಂದು ಮನವೊಲಿಸಿ ಕಳುಹಿಸಿಕೊಟ್ಟಿದ್ದಾರೆ.</p>.<p>ಸೋಂಕಿತರ ಪತ್ತೆಯಾಗಿರುವ ಸಾಯಿರಾಂ ಕಲ್ಯಾಣಮಂಟಪ ಬಡಾವಣೆಯನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ. ಗ್ರಾಮಗಳನ್ನು ಸೀಲ್ಡೌನ್ ಮಾಡಿ, ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ.</p>.<p>ಪಟ್ಟಣದ ಯುವಕನ ಪ್ರಾಥಮಿಕ ಸಂಪರ್ಕದಲ್ಲಿ 16ಕ್ಕೂ ಹೆಚ್ಚಿನ ಮಂದಿ ಇದ್ದರು ಎಂಬುದು ಜನರಲ್ಲಿ ಆತಂಕ ಮೂಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>