<p><strong>ತುಮಕೂರು</strong>: ಸೊಪ್ಪಿನ ಬೆಲೆ ಪಾತಾಳ ಕಂಡಿದ್ದರೆ, ತರಕಾರಿ ಇಳಿಕೆಯತ್ತ ಮುಖ ಮಾಡಿದೆ. ಈರುಳ್ಳಿ, ಬೆಳ್ಳುಳ್ಳಿ ಗಗನಮುಖಿಯಾಗಿದೆ. ಹಣ್ಣು ದುಬಾರಿಯಾಗಿದ್ದು, ಬೇಳೆ, ಧಾನ್ಯ ತುಸು ಏರಿಕೆಯಾಗಿದೆ.</p>.<p>ಧನುರ್ಮಾಸ ಆರಂಭದ ಹೊತ್ತಿಗೆ ಶುಭ ಕಾರ್ಯಗಳು ಕಡಿಮೆಯಾಗಿದ್ದು, ತರಕಾರಿ ಬೆಲೆಯೂ ಇಳಿಕೆಯತ್ತ ಸಾಗಿದೆ. ಬೀನ್ಸ್, ಕ್ಯಾರೇಟ್ ಹೊರತುಪಡಿಸಿದರೆ ಇತರ ತರಕಾರಿಗಳ ದರ ಕಡಿಮೆಯಾಗಿದೆ. ಬೀಟ್ರೂಟ್, ಎಲೆಕೋಸು, ಹೂ ಕೋಸು ತಗ್ಗಿದ್ದರೆ, ಬೆಂಡೆಕಾಯಿ, ಹಸಿರು ಮೆಣಸಿನಕಾಯಿ, ಸೌತೆಕಾಯಿ, ನಿಂಬೆಹಣ್ಣು ಬೆಲೆ ಹೆಚ್ಚಳವಾಗಿದೆ. ಉಳಿದ ತರಕಾರಿಗಳು ಯಥಾಸ್ಥಿತಿ ಕಾಯ್ದುಕೊಂಡಿವೆ. ಟೊಮೆಟೊ ಬೆಲೆ ಮತ್ತಷ್ಟು ಅಗ್ಗವಾಗಿದ್ದು, ಕೆ.ಜಿ ₹15–20ಕ್ಕೆ ತಲುಪಿದೆ. ಅವರೆಕಾಯಿ (ಸ್ಥಳೀಯ) ಕೆ.ಜಿ ₹50–60ಕ್ಕೆ ಮಾರಾಟವಾಗುತ್ತಿದೆ.</p>.<p>ಈರುಳ್ಳಿ ಧಾರಣೆ ಏರುಮುಖ ಮಾಡಿದ್ದು, ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕೆ.ಜಿ ₹65–70ಕ್ಕೆ ಏರಿಕೆ ಕಂಡಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಮತ್ತಷ್ಟು ದುಬಾರಿಯಾಗಿದೆ. ಬೆಳ್ಳುಳ್ಳಿ ಗಗನಮುಖಿಯಾಗಿದ್ದು, ಕೆ.ಜಿ ₹350–400ಕ್ಕೆ ಜಿಗಿದಿದೆ. ಒಂದೇ ವಾರದಲ್ಲಿ ಕೆ.ಜಿಗೆ ₹50 ಹೆಚ್ಚಳವಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ₹400ಕ್ಕೂ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸಾಕಷ್ಟು ಜನರು ಬೆಳ್ಳುಳ್ಳಿ ಖರೀದಿಯನ್ನೇ ಕಡಿಮೆ ಮಾಡಿದ್ದಾರೆ ಎನ್ನಲಾಗಿದೆ.</p>.<p><strong>ಸೊಪ್ಪು ಕೇಳುವವರಿಲ್ಲ</strong>: ಸೊಪ್ಪಿನ ಬೆಲೆ ಪಾತಾಳ ಕಂಡಿದ್ದು, ಮಾರುಕಟ್ಟೆಯಲ್ಲಿ ಕೊಳ್ಳುವವರೇ ಇಲ್ಲವಾಗಿದ್ದಾರೆ. ಕೊತ್ತಂಬರಿ ಸೊಪ್ಪು ಕೆ.ಜಿ ₹25–30, ಸಬ್ಬಕ್ಕಿ ಕೆ.ಜಿ ₹25–30, ಮೆಂತ್ಯ ಸೊಪ್ಪು ಕೆ.ಜಿ ₹15–20, ಪಾಲಕ್ ಸೊಪ್ಪು (ಕಟ್ಟು) ₹30–40ಕ್ಕೆ ಇಳಿಕೆಯಾಗಿದೆ.</p>.<p><strong>ದಾಳಿಂಬೆ ದುಬಾರಿ:</strong> ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದ್ದ ದಾಳಿಂಬೆ ಈಗ ಒಮ್ಮೆಲೆ ದುಬಾರಿಯಾಗಿದ್ದು, ಒಂದೇ ವಾರದಲ್ಲಿ ಕೆ.ಜಿಗೆ ₹100 ಹೆಚ್ಚಳವಾಗಿದೆ. ಸೇಬು ಸಹ ಅಲ್ಪ ಏರಿಕೆಯಾಗಿದ್ದು, ಸೀಬೆ, ಕರಬೂಜ ಸಹ ಏರಿಕೆ ದಾಖಲಿಸಿದೆ.</p>.<p><strong>ಅಡುಗೆ ಎಣ್ಣೆ</strong>: ಹಿಂದಿನ ವಾರಕ್ಕೆ ಹೋಲಿಸಿದರೆ ಅಡುಗೆ ಎಣ್ಣೆ ದರ ಅಲ್ಪ ಇಳಿಕೆಯಾಗಿದೆ. ಗೋಲ್ಡ್ವಿನ್ನರ್ ಕೆ.ಜಿ ₹145–146, ಪಾಮಾಯಿಲ್ ಕೆ.ಜಿ ₹130–132, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.</p>.<p><strong>ಬೇಳೆ, ಧಾನ್ಯ</strong>: ಕಳೆದ ವಾರ ಅಲ್ಪ ಮಟ್ಟಿಗೆ ಇಳಿಕೆಯಾಗಿದ್ದ ಬೇಳೆ, ಧಾನ್ಯಗಳ ಧಾರಣೆ ಈಗ ತುಸು ಏರುಮುಖವಾಗಿದೆ. ಬಟಾಣಿ ಕೆ.ಜಿ ₹210 ದಾಟಿದ್ದು, ದಾಖಲೆ ನಿರ್ಮಿಸುವತ್ತ ಮುನ್ನಡೆದಿದೆ. ಹೊಸ ಬೆಳೆ ಬರುವುದು ಹೆಚ್ಚಾದರೆ ಬೇಳೆ ದರ ಇಳಿಯಬಹುದು ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.</p>.<p><strong>ಮಸಾಲೆ ಪದಾರ್ಥ</strong>: ಒಂದೆರಡು ವಾರದಿಂದ ಏರಿಕೆಯತ್ತ ಸಾಗಿದ್ದ ಏಲಕ್ಕಿ ಈಗ ಕೆ.ಜಿಗೆ ₹1 ಸಾವಿರ ಗಿಜಿತ ಕಂಡಿದೆ. ಬೆಲ್ಲ ತುಸು ಕಡಿಮೆಯಾದಂತೆ ಕಾಣುತ್ತಿದೆ. ಉಳಿದಂತೆ ಯಥಾಸ್ಥಿತಿ ಮುಂದುವರೆದಿದೆ.</p>.<p>ಧನ್ಯ ಕೆ.ಜಿ ₹110–150, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹220–240, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹160–170, ಹುಣಸೆಹಣ್ಣು ₹120–140, ಬೆಲ್ಲ ಕೆ.ಜಿ ₹45–50, ಕಾಳುಮೆಣಸು ಕೆ.ಜಿ ₹680–720, ಜೀರಿಗೆ ಕೆ.ಜಿ ₹300–320, ಚಕ್ಕೆ ಕೆ.ಜಿ ₹250–260, ಲವಂಗ ಕೆ.ಜಿ ₹880–890, ಗುಣಮಟ್ಟದ ಗಸಗಸೆ ಕೆ.ಜಿ ₹1,250–1,300, ಏಲಕ್ಕಿ ಕೆ.ಜಿ ₹3,400–3,600, ಬಾದಾಮಿ ಕೆ.ಜಿ ₹700–720, ಗೋಡಂಬಿ ಕೆ.ಜಿ ₹850–960, ಒಣದ್ರಾಕ್ಷಿ ಕೆ.ಜಿ ₹200–210ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p><strong>ಕೋಳಿ ಮಾಂಸ</strong>: ಕೋಳಿ ಮಾಂಸದ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರೆದಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ ₹100, ರೆಡಿ ಚಿಕನ್ ಕೆ.ಜಿ ₹160, ಸ್ಕಿನ್ಲೆಸ್ ಕೆ.ಜಿ ₹180, ಮೊಟ್ಟೆಕೋಳಿ (ಫಾರಂ) ಕೆ.ಜಿ ₹135ಕ್ಕೆ ಸಿಗುತ್ತಿದೆ.</p>.<p><strong>ಮೀನು ಸಾಮಾನ್ಯ:</strong> ಮೀನಿನ ಧಾರಣೆಯಲ್ಲೂ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಬಂಗುಡೆ ಕೆ.ಜಿ ₹220, ಬೂತಾಯಿ ಕೆ.ಜಿ ₹280, ಬೊಳಿಂಜರ್ ಕೆ.ಜಿ ₹200, ಅಂಜಲ್ ಕೆ.ಜಿ ₹740, ಬಿಳಿಮಾಂಜಿ ಕೆ.ಜಿ ₹1,020, ಕಪ್ಪುಮಾಂಜಿ ಕೆ.ಜಿ ₹780, ಇಂಡಿಯನ್ ಸಾಲ್ಮನ್ ಕೆ.ಜಿ ₹910, ಸೀಗಡಿ ಕೆ.ಜಿ ₹510–740, ಏಡಿ ಕೆ.ಜಿ ₹680ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಸೊಪ್ಪಿನ ಬೆಲೆ ಪಾತಾಳ ಕಂಡಿದ್ದರೆ, ತರಕಾರಿ ಇಳಿಕೆಯತ್ತ ಮುಖ ಮಾಡಿದೆ. ಈರುಳ್ಳಿ, ಬೆಳ್ಳುಳ್ಳಿ ಗಗನಮುಖಿಯಾಗಿದೆ. ಹಣ್ಣು ದುಬಾರಿಯಾಗಿದ್ದು, ಬೇಳೆ, ಧಾನ್ಯ ತುಸು ಏರಿಕೆಯಾಗಿದೆ.</p>.<p>ಧನುರ್ಮಾಸ ಆರಂಭದ ಹೊತ್ತಿಗೆ ಶುಭ ಕಾರ್ಯಗಳು ಕಡಿಮೆಯಾಗಿದ್ದು, ತರಕಾರಿ ಬೆಲೆಯೂ ಇಳಿಕೆಯತ್ತ ಸಾಗಿದೆ. ಬೀನ್ಸ್, ಕ್ಯಾರೇಟ್ ಹೊರತುಪಡಿಸಿದರೆ ಇತರ ತರಕಾರಿಗಳ ದರ ಕಡಿಮೆಯಾಗಿದೆ. ಬೀಟ್ರೂಟ್, ಎಲೆಕೋಸು, ಹೂ ಕೋಸು ತಗ್ಗಿದ್ದರೆ, ಬೆಂಡೆಕಾಯಿ, ಹಸಿರು ಮೆಣಸಿನಕಾಯಿ, ಸೌತೆಕಾಯಿ, ನಿಂಬೆಹಣ್ಣು ಬೆಲೆ ಹೆಚ್ಚಳವಾಗಿದೆ. ಉಳಿದ ತರಕಾರಿಗಳು ಯಥಾಸ್ಥಿತಿ ಕಾಯ್ದುಕೊಂಡಿವೆ. ಟೊಮೆಟೊ ಬೆಲೆ ಮತ್ತಷ್ಟು ಅಗ್ಗವಾಗಿದ್ದು, ಕೆ.ಜಿ ₹15–20ಕ್ಕೆ ತಲುಪಿದೆ. ಅವರೆಕಾಯಿ (ಸ್ಥಳೀಯ) ಕೆ.ಜಿ ₹50–60ಕ್ಕೆ ಮಾರಾಟವಾಗುತ್ತಿದೆ.</p>.<p>ಈರುಳ್ಳಿ ಧಾರಣೆ ಏರುಮುಖ ಮಾಡಿದ್ದು, ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕೆ.ಜಿ ₹65–70ಕ್ಕೆ ಏರಿಕೆ ಕಂಡಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಮತ್ತಷ್ಟು ದುಬಾರಿಯಾಗಿದೆ. ಬೆಳ್ಳುಳ್ಳಿ ಗಗನಮುಖಿಯಾಗಿದ್ದು, ಕೆ.ಜಿ ₹350–400ಕ್ಕೆ ಜಿಗಿದಿದೆ. ಒಂದೇ ವಾರದಲ್ಲಿ ಕೆ.ಜಿಗೆ ₹50 ಹೆಚ್ಚಳವಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ₹400ಕ್ಕೂ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸಾಕಷ್ಟು ಜನರು ಬೆಳ್ಳುಳ್ಳಿ ಖರೀದಿಯನ್ನೇ ಕಡಿಮೆ ಮಾಡಿದ್ದಾರೆ ಎನ್ನಲಾಗಿದೆ.</p>.<p><strong>ಸೊಪ್ಪು ಕೇಳುವವರಿಲ್ಲ</strong>: ಸೊಪ್ಪಿನ ಬೆಲೆ ಪಾತಾಳ ಕಂಡಿದ್ದು, ಮಾರುಕಟ್ಟೆಯಲ್ಲಿ ಕೊಳ್ಳುವವರೇ ಇಲ್ಲವಾಗಿದ್ದಾರೆ. ಕೊತ್ತಂಬರಿ ಸೊಪ್ಪು ಕೆ.ಜಿ ₹25–30, ಸಬ್ಬಕ್ಕಿ ಕೆ.ಜಿ ₹25–30, ಮೆಂತ್ಯ ಸೊಪ್ಪು ಕೆ.ಜಿ ₹15–20, ಪಾಲಕ್ ಸೊಪ್ಪು (ಕಟ್ಟು) ₹30–40ಕ್ಕೆ ಇಳಿಕೆಯಾಗಿದೆ.</p>.<p><strong>ದಾಳಿಂಬೆ ದುಬಾರಿ:</strong> ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದ್ದ ದಾಳಿಂಬೆ ಈಗ ಒಮ್ಮೆಲೆ ದುಬಾರಿಯಾಗಿದ್ದು, ಒಂದೇ ವಾರದಲ್ಲಿ ಕೆ.ಜಿಗೆ ₹100 ಹೆಚ್ಚಳವಾಗಿದೆ. ಸೇಬು ಸಹ ಅಲ್ಪ ಏರಿಕೆಯಾಗಿದ್ದು, ಸೀಬೆ, ಕರಬೂಜ ಸಹ ಏರಿಕೆ ದಾಖಲಿಸಿದೆ.</p>.<p><strong>ಅಡುಗೆ ಎಣ್ಣೆ</strong>: ಹಿಂದಿನ ವಾರಕ್ಕೆ ಹೋಲಿಸಿದರೆ ಅಡುಗೆ ಎಣ್ಣೆ ದರ ಅಲ್ಪ ಇಳಿಕೆಯಾಗಿದೆ. ಗೋಲ್ಡ್ವಿನ್ನರ್ ಕೆ.ಜಿ ₹145–146, ಪಾಮಾಯಿಲ್ ಕೆ.ಜಿ ₹130–132, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.</p>.<p><strong>ಬೇಳೆ, ಧಾನ್ಯ</strong>: ಕಳೆದ ವಾರ ಅಲ್ಪ ಮಟ್ಟಿಗೆ ಇಳಿಕೆಯಾಗಿದ್ದ ಬೇಳೆ, ಧಾನ್ಯಗಳ ಧಾರಣೆ ಈಗ ತುಸು ಏರುಮುಖವಾಗಿದೆ. ಬಟಾಣಿ ಕೆ.ಜಿ ₹210 ದಾಟಿದ್ದು, ದಾಖಲೆ ನಿರ್ಮಿಸುವತ್ತ ಮುನ್ನಡೆದಿದೆ. ಹೊಸ ಬೆಳೆ ಬರುವುದು ಹೆಚ್ಚಾದರೆ ಬೇಳೆ ದರ ಇಳಿಯಬಹುದು ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.</p>.<p><strong>ಮಸಾಲೆ ಪದಾರ್ಥ</strong>: ಒಂದೆರಡು ವಾರದಿಂದ ಏರಿಕೆಯತ್ತ ಸಾಗಿದ್ದ ಏಲಕ್ಕಿ ಈಗ ಕೆ.ಜಿಗೆ ₹1 ಸಾವಿರ ಗಿಜಿತ ಕಂಡಿದೆ. ಬೆಲ್ಲ ತುಸು ಕಡಿಮೆಯಾದಂತೆ ಕಾಣುತ್ತಿದೆ. ಉಳಿದಂತೆ ಯಥಾಸ್ಥಿತಿ ಮುಂದುವರೆದಿದೆ.</p>.<p>ಧನ್ಯ ಕೆ.ಜಿ ₹110–150, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹220–240, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹160–170, ಹುಣಸೆಹಣ್ಣು ₹120–140, ಬೆಲ್ಲ ಕೆ.ಜಿ ₹45–50, ಕಾಳುಮೆಣಸು ಕೆ.ಜಿ ₹680–720, ಜೀರಿಗೆ ಕೆ.ಜಿ ₹300–320, ಚಕ್ಕೆ ಕೆ.ಜಿ ₹250–260, ಲವಂಗ ಕೆ.ಜಿ ₹880–890, ಗುಣಮಟ್ಟದ ಗಸಗಸೆ ಕೆ.ಜಿ ₹1,250–1,300, ಏಲಕ್ಕಿ ಕೆ.ಜಿ ₹3,400–3,600, ಬಾದಾಮಿ ಕೆ.ಜಿ ₹700–720, ಗೋಡಂಬಿ ಕೆ.ಜಿ ₹850–960, ಒಣದ್ರಾಕ್ಷಿ ಕೆ.ಜಿ ₹200–210ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p><strong>ಕೋಳಿ ಮಾಂಸ</strong>: ಕೋಳಿ ಮಾಂಸದ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರೆದಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ ₹100, ರೆಡಿ ಚಿಕನ್ ಕೆ.ಜಿ ₹160, ಸ್ಕಿನ್ಲೆಸ್ ಕೆ.ಜಿ ₹180, ಮೊಟ್ಟೆಕೋಳಿ (ಫಾರಂ) ಕೆ.ಜಿ ₹135ಕ್ಕೆ ಸಿಗುತ್ತಿದೆ.</p>.<p><strong>ಮೀನು ಸಾಮಾನ್ಯ:</strong> ಮೀನಿನ ಧಾರಣೆಯಲ್ಲೂ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಬಂಗುಡೆ ಕೆ.ಜಿ ₹220, ಬೂತಾಯಿ ಕೆ.ಜಿ ₹280, ಬೊಳಿಂಜರ್ ಕೆ.ಜಿ ₹200, ಅಂಜಲ್ ಕೆ.ಜಿ ₹740, ಬಿಳಿಮಾಂಜಿ ಕೆ.ಜಿ ₹1,020, ಕಪ್ಪುಮಾಂಜಿ ಕೆ.ಜಿ ₹780, ಇಂಡಿಯನ್ ಸಾಲ್ಮನ್ ಕೆ.ಜಿ ₹910, ಸೀಗಡಿ ಕೆ.ಜಿ ₹510–740, ಏಡಿ ಕೆ.ಜಿ ₹680ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>