<p><strong>ಚಿಕ್ಕನಾಯಕನಹಳ್ಳಿ:</strong> ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠವು ಗುರು ಮರುಳಸಿದ್ಧೇಶ್ವರನ ಪವಾಡ ಕ್ಷೇತ್ರ. ಲಿಂಗೈಕ್ಯ ಚಂದ್ರಶೇಖರ ಶಿವಾಚಾರ್ಯರು ತಮ್ಮ ತಪಸ್ಸಿನ ಫಲವನ್ನು ಮಠಕ್ಕೆ ಧಾರೆ ಎರೆದಿದ್ದಾರೆ ಎಂದು ಉಜ್ಜೈನಿ ಪೀಠದ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನಲ್ಲಿ ಕುಪ್ಪೂರು ಗದ್ದಿಗೆ ಮರುಳಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಭಾವೈಕ್ಯ ಧಾರ್ಮಿಕ ಸಮಾರಂಭದದಲ್ಲಿ ಗುರುವಾರ ಅವರು ಮಾತನಾಡಿದರು.</p>.<p>ಗದ್ದಿಗೆ ಮಠದಲ್ಲಿ ಮರುಳಸಿದ್ಧರು ನಂಬಿದವರನ್ನು ಕೈಹಿಡಿದಿದ್ದಾರೆ. ಲಿಂಗೈಕ್ಯ ಹಿರಿಯ ಶ್ರೀಗಳು ತತ್ವಜ್ಞಾನ ಮತ್ತು ವಿಜ್ಞಾನವನ್ನು ಅಳವಡಿಸಿಕೊಂಡು ಮಠದ ಅಭಿವೃದ್ಧಿಗೆ ಜೀವನವನ್ನು ಮುಡಿಪಾಗಿಟ್ಟಿದ್ದರು. ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಹೋರಾಟಗಾರರಾಗಿದ್ದರು ಎಂದರು.</p>.<p>ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಲಿಂ. ಚಂದ್ರಶೇಖರ ಶಿವಾಚಾರ್ಯರ ಸರಳತೆ ಮತ್ತು ನಿಷ್ಕಲ್ಮಶ ಸೇವೆ ಮಾಡಿದ್ದಾರೆ. ಮಠದ ಕಟ್ಟಡಕ್ಕಿಂತ ಭಕ್ತರ ಮನಸ್ಸಿನ ಕಟ್ಟಡವೇ ಶ್ರೇಷ್ಠವಾಗಿದೆ. ತೇಜೇಶ್ವರ ಶಿವಾಚಾರ್ಯರು ಲಿಂ. ಹಿರಿಯ ಶ್ರೀಗಳ ಮಾರ್ಗದರ್ಶನ ಅನುಸರಿಸಿ ಭಕ್ತರಲ್ಲಿ ಭಕ್ತಿ ಮೂಡಿಸಬೇಕು ಎಂದರು.</p>.<p>ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಮಠದಲ್ಲಿ ನಿತ್ಯ ದಾಸೋಹ ನಡೆಯುತ್ತಿದೆ. ಶೈಕ್ಷಣಿಕ ಅನುಕೂಲಕ್ಕಾಗಿ ಮಠದ ಭಕ್ತರ ಮಕ್ಕಳಿಗೆ ಹಾಲಪ್ಪ ಪ್ರತಿಷ್ಠಾನದಿಂದ ಪ್ರತಿವರ್ಷ ಧನಸಹಾಯ ನೀಡಲು ನಿಗದಿಪಡಿಸಿದ ಠೇವಣಿಯಲ್ಲಿ ಹಣ ಇರಿಸುವುದಾಗಿ ಭರವಸೆ ನೀಡಿದರು.</p>.<p>ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುಪ್ಪೂರು ಮರುಳಸಿದ್ಧಶ್ರೀ ಪ್ರಶಸ್ತಿ– ಪ್ರೊ. ಎಂ. ಕೃಷ್ಣೇಗೌಡ, ಧರ್ಮರತ್ನಾಕರ ಪ್ರಶಸ್ತಿ– ಡಾ.ಪರಮೇಶ್ (ಸಿದ್ಧಗಂಗಾ ಆಸ್ಪತ್ರೆ), ಧರ್ಮನಂದಿನಿ ಪ್ರಶಸ್ತಿ– ಡಾ. ವಿಜಯಲಕ್ಷ್ಮೀ ಹಾಗೂ ಕಲಾ ಶಿರೋಮಣಿ ಪ್ರಶಸ್ತಿಯನ್ನು ನಟಿ ಪ್ರೇಮಾ ಅವರಿಗೆ ನೀಡಲಾಯಿತು.</p>.<p>ಸಮಾರಂಭದಲ್ಲಿ ಶಿವಗಂಗೆ ಮಠದ ಮಲಯಶಾಂತಮುನಿ ಶಿವಾಚಾರ್ಯ, ಬೀರೂರು ಮಠದ ರುದ್ರಮುನಿ ಶಿವಾಚಾರ್ಯ, ಮಾದಿಹಳ್ಳಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ಹಣ್ಣೇಮಠದ ಮರುಳಸಿದ್ಧೇಶ್ವರ ಶಿವಾಚಾರ್ಯ, ಗಾಯಕ ನಟರಾಜ್ ಶೆಟ್ಟೀಕೆರೆ, ಕಿರುತೆರೆ ನಟ ದಯಾನಂದಸಾಗರ್, ಭಕ್ತರು ಮತ್ತು ಕಲಾವಿದರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕನಾಯಕನಹಳ್ಳಿ:</strong> ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠವು ಗುರು ಮರುಳಸಿದ್ಧೇಶ್ವರನ ಪವಾಡ ಕ್ಷೇತ್ರ. ಲಿಂಗೈಕ್ಯ ಚಂದ್ರಶೇಖರ ಶಿವಾಚಾರ್ಯರು ತಮ್ಮ ತಪಸ್ಸಿನ ಫಲವನ್ನು ಮಠಕ್ಕೆ ಧಾರೆ ಎರೆದಿದ್ದಾರೆ ಎಂದು ಉಜ್ಜೈನಿ ಪೀಠದ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನಲ್ಲಿ ಕುಪ್ಪೂರು ಗದ್ದಿಗೆ ಮರುಳಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಭಾವೈಕ್ಯ ಧಾರ್ಮಿಕ ಸಮಾರಂಭದದಲ್ಲಿ ಗುರುವಾರ ಅವರು ಮಾತನಾಡಿದರು.</p>.<p>ಗದ್ದಿಗೆ ಮಠದಲ್ಲಿ ಮರುಳಸಿದ್ಧರು ನಂಬಿದವರನ್ನು ಕೈಹಿಡಿದಿದ್ದಾರೆ. ಲಿಂಗೈಕ್ಯ ಹಿರಿಯ ಶ್ರೀಗಳು ತತ್ವಜ್ಞಾನ ಮತ್ತು ವಿಜ್ಞಾನವನ್ನು ಅಳವಡಿಸಿಕೊಂಡು ಮಠದ ಅಭಿವೃದ್ಧಿಗೆ ಜೀವನವನ್ನು ಮುಡಿಪಾಗಿಟ್ಟಿದ್ದರು. ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಹೋರಾಟಗಾರರಾಗಿದ್ದರು ಎಂದರು.</p>.<p>ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಲಿಂ. ಚಂದ್ರಶೇಖರ ಶಿವಾಚಾರ್ಯರ ಸರಳತೆ ಮತ್ತು ನಿಷ್ಕಲ್ಮಶ ಸೇವೆ ಮಾಡಿದ್ದಾರೆ. ಮಠದ ಕಟ್ಟಡಕ್ಕಿಂತ ಭಕ್ತರ ಮನಸ್ಸಿನ ಕಟ್ಟಡವೇ ಶ್ರೇಷ್ಠವಾಗಿದೆ. ತೇಜೇಶ್ವರ ಶಿವಾಚಾರ್ಯರು ಲಿಂ. ಹಿರಿಯ ಶ್ರೀಗಳ ಮಾರ್ಗದರ್ಶನ ಅನುಸರಿಸಿ ಭಕ್ತರಲ್ಲಿ ಭಕ್ತಿ ಮೂಡಿಸಬೇಕು ಎಂದರು.</p>.<p>ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಮಠದಲ್ಲಿ ನಿತ್ಯ ದಾಸೋಹ ನಡೆಯುತ್ತಿದೆ. ಶೈಕ್ಷಣಿಕ ಅನುಕೂಲಕ್ಕಾಗಿ ಮಠದ ಭಕ್ತರ ಮಕ್ಕಳಿಗೆ ಹಾಲಪ್ಪ ಪ್ರತಿಷ್ಠಾನದಿಂದ ಪ್ರತಿವರ್ಷ ಧನಸಹಾಯ ನೀಡಲು ನಿಗದಿಪಡಿಸಿದ ಠೇವಣಿಯಲ್ಲಿ ಹಣ ಇರಿಸುವುದಾಗಿ ಭರವಸೆ ನೀಡಿದರು.</p>.<p>ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುಪ್ಪೂರು ಮರುಳಸಿದ್ಧಶ್ರೀ ಪ್ರಶಸ್ತಿ– ಪ್ರೊ. ಎಂ. ಕೃಷ್ಣೇಗೌಡ, ಧರ್ಮರತ್ನಾಕರ ಪ್ರಶಸ್ತಿ– ಡಾ.ಪರಮೇಶ್ (ಸಿದ್ಧಗಂಗಾ ಆಸ್ಪತ್ರೆ), ಧರ್ಮನಂದಿನಿ ಪ್ರಶಸ್ತಿ– ಡಾ. ವಿಜಯಲಕ್ಷ್ಮೀ ಹಾಗೂ ಕಲಾ ಶಿರೋಮಣಿ ಪ್ರಶಸ್ತಿಯನ್ನು ನಟಿ ಪ್ರೇಮಾ ಅವರಿಗೆ ನೀಡಲಾಯಿತು.</p>.<p>ಸಮಾರಂಭದಲ್ಲಿ ಶಿವಗಂಗೆ ಮಠದ ಮಲಯಶಾಂತಮುನಿ ಶಿವಾಚಾರ್ಯ, ಬೀರೂರು ಮಠದ ರುದ್ರಮುನಿ ಶಿವಾಚಾರ್ಯ, ಮಾದಿಹಳ್ಳಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ಹಣ್ಣೇಮಠದ ಮರುಳಸಿದ್ಧೇಶ್ವರ ಶಿವಾಚಾರ್ಯ, ಗಾಯಕ ನಟರಾಜ್ ಶೆಟ್ಟೀಕೆರೆ, ಕಿರುತೆರೆ ನಟ ದಯಾನಂದಸಾಗರ್, ಭಕ್ತರು ಮತ್ತು ಕಲಾವಿದರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>