<p><strong>ತುಮಕೂರು: </strong>ಕಲೆಗಳು ಜೀವನ ಉತ್ಸಾಹ ತುಂಬುವ ಔಷಧಿಗಳು ಎಂದು ರಂಗಾಸಕ್ತ ಗೋವಿಂದೇಗೌಡ ಹೇಳಿದರು.</p>.<p>ಚಿಕ್ಕದಾಳವಟ್ಟದ ಲೋಕಚರಿತ ರಂಗ ಕೇಂದ್ರ, ತುಮಕೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಮೈಸೂರು ರಂಗಾಯಣದ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿರುವ ‘ಮೂರು ದಿನಗಳ ನಾಟಕೋತ್ಸವ–ಬಕಾಲ ಕವಿ ಕೆ.ವಿ.ಸಿದ್ಧಯ್ಯ ಅವರಿಗೆ ರಂಗನಮನ’ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ನಾಟಕ, ಸಂಗೀತ, ಕ್ರೀಡೆಗಳು ಉತ್ತಮ ಜೀವನಕ್ಕೆ ಪ್ರೋತ್ಸಾಹ ನೀಡುತ್ತವೆ. ನಮ್ಮನ್ನು ಆರೋಗ್ಯವಂತರನ್ನಾಗಿ ಇಡುತ್ತವೆ. ಅಂತಹ ಕಲೆಗಳನ್ನು ಉಳಿಸಿ, ಬೆಳೆಸುವುದರಲ್ಲಿ ತುಮಕೂರು ಜಿಲ್ಲೆ ಮುಂದಿದೆ ಎಂದು ಹೇಳಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಸವರಾಜು ಅಪ್ಪಿನಕಟ್ಟೆ ಮಾತನಾಡಿ, ಕೆ.ಬಿ. ಅವರ ನೆನಪುಗಳನ್ನು ಮರುಕಳಿಸುವ ನಿಟ್ಟಿನಲ್ಲಿ ರಾಜ್ಯದ ಆದ್ಯಂತ ಕಾರ್ಯಕ್ರಮಗಳು ನಡೆದಿವೆ. ಮೈಸೂರಿನ ರಂಗಾಯಣದ ರಂಗಸಂಚಾರ ತಂಡದ ಯುವ ಕಲಾವಿದರು ಈ ನಾಟಕೋತ್ಸವದಲ್ಲಿ ರಂಗಪ್ರಯೋಗಗಳನ್ನು ಮಾಡುತ್ತಿದ್ದಾರೆ. ಆಸಕ್ತರು ಈ ಪ್ರದರ್ಶನಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಚಮಾರಯ್ಯ, ಜಿಲ್ಲೆಯಲ್ಲಿ ರಂಗಭೂಮಿಯನ್ನು ಮತ್ತಷ್ಟು ಬೆಳೆಸಲು ಲಕ್ಷ್ಮಣದಾಸ್, ಕಾಮರಾಜ್ ಶ್ರಮಿಸುತ್ತಿದ್ದಾರೆ. ಯುವ ಕಲಾವಿದರ ಈ ನಾಟಕೋತ್ಸವವನ್ನು ಸದಭಿರುಚಿಯ ಪ್ರೇಕ್ಷಕರು ಬಂದು ಯಶಸ್ವಿಗೊಳಿಸಬೇಕು ಎಂದು ಬಯಸಿದರು.</p>.<p>ಯುವ ಮುಖಂಡ ಕೊಟ್ಟ ಶಂಕರ್, ಕೆ.ಬಿ. ನಾಡಿನ ಹೆಮ್ಮೆಯ ಕವಿ. ಬೀದರ್ನಿಂದ–ಚಾಮರಾಜನಗರದ ವರೆಗಿನ ಹಲವಾರು ಊರುಗಳಲ್ಲಿ ಅವರ ಸ್ಮರಣೆಯಲ್ಲಿ ವಿಚಾರ ಸಂಕಿರಣ, ಸ್ಮರಣಾ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ವಿಚಾರ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಕಲೆಗಳು ಜೀವನ ಉತ್ಸಾಹ ತುಂಬುವ ಔಷಧಿಗಳು ಎಂದು ರಂಗಾಸಕ್ತ ಗೋವಿಂದೇಗೌಡ ಹೇಳಿದರು.</p>.<p>ಚಿಕ್ಕದಾಳವಟ್ಟದ ಲೋಕಚರಿತ ರಂಗ ಕೇಂದ್ರ, ತುಮಕೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಮೈಸೂರು ರಂಗಾಯಣದ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿರುವ ‘ಮೂರು ದಿನಗಳ ನಾಟಕೋತ್ಸವ–ಬಕಾಲ ಕವಿ ಕೆ.ವಿ.ಸಿದ್ಧಯ್ಯ ಅವರಿಗೆ ರಂಗನಮನ’ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ನಾಟಕ, ಸಂಗೀತ, ಕ್ರೀಡೆಗಳು ಉತ್ತಮ ಜೀವನಕ್ಕೆ ಪ್ರೋತ್ಸಾಹ ನೀಡುತ್ತವೆ. ನಮ್ಮನ್ನು ಆರೋಗ್ಯವಂತರನ್ನಾಗಿ ಇಡುತ್ತವೆ. ಅಂತಹ ಕಲೆಗಳನ್ನು ಉಳಿಸಿ, ಬೆಳೆಸುವುದರಲ್ಲಿ ತುಮಕೂರು ಜಿಲ್ಲೆ ಮುಂದಿದೆ ಎಂದು ಹೇಳಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಸವರಾಜು ಅಪ್ಪಿನಕಟ್ಟೆ ಮಾತನಾಡಿ, ಕೆ.ಬಿ. ಅವರ ನೆನಪುಗಳನ್ನು ಮರುಕಳಿಸುವ ನಿಟ್ಟಿನಲ್ಲಿ ರಾಜ್ಯದ ಆದ್ಯಂತ ಕಾರ್ಯಕ್ರಮಗಳು ನಡೆದಿವೆ. ಮೈಸೂರಿನ ರಂಗಾಯಣದ ರಂಗಸಂಚಾರ ತಂಡದ ಯುವ ಕಲಾವಿದರು ಈ ನಾಟಕೋತ್ಸವದಲ್ಲಿ ರಂಗಪ್ರಯೋಗಗಳನ್ನು ಮಾಡುತ್ತಿದ್ದಾರೆ. ಆಸಕ್ತರು ಈ ಪ್ರದರ್ಶನಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಚಮಾರಯ್ಯ, ಜಿಲ್ಲೆಯಲ್ಲಿ ರಂಗಭೂಮಿಯನ್ನು ಮತ್ತಷ್ಟು ಬೆಳೆಸಲು ಲಕ್ಷ್ಮಣದಾಸ್, ಕಾಮರಾಜ್ ಶ್ರಮಿಸುತ್ತಿದ್ದಾರೆ. ಯುವ ಕಲಾವಿದರ ಈ ನಾಟಕೋತ್ಸವವನ್ನು ಸದಭಿರುಚಿಯ ಪ್ರೇಕ್ಷಕರು ಬಂದು ಯಶಸ್ವಿಗೊಳಿಸಬೇಕು ಎಂದು ಬಯಸಿದರು.</p>.<p>ಯುವ ಮುಖಂಡ ಕೊಟ್ಟ ಶಂಕರ್, ಕೆ.ಬಿ. ನಾಡಿನ ಹೆಮ್ಮೆಯ ಕವಿ. ಬೀದರ್ನಿಂದ–ಚಾಮರಾಜನಗರದ ವರೆಗಿನ ಹಲವಾರು ಊರುಗಳಲ್ಲಿ ಅವರ ಸ್ಮರಣೆಯಲ್ಲಿ ವಿಚಾರ ಸಂಕಿರಣ, ಸ್ಮರಣಾ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ವಿಚಾರ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>