ರೈತರು ತಿರುಮಣಿ, ರಾಯಚೆರ್ಲು, ಬಳಸಮುದ್ರ, ಅಚ್ಚಮ್ಮನಹಳ್ಳಿ ಸೇರಿದಂತೆ ಈ ಭಾಗದ ಗ್ರಾಮಗಳಿಗೆ ರಸ್ತೆ, ಮೂಲಸೌಕರ್ಯ, ಸ್ಥಳೀಯರಿಗೆ ಉದ್ಯೋಗ, ಶಾಲೆಗಳಲ್ಲಿ ಶಿಕ್ಷಕರ ಅಭಾವ, ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿ ನಿಯೋಜನೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸಂವಾದದಲ್ಲಿ ಸಚಿವರ ಗಮನ ಸೆಳೆಯಬೇಕು ಎಂದು ಗಂಟೆಗಟ್ಟಲೆ ಕಾದು ಕುಳಿತಿದ್ದರು. ಸಂವಾದ ಮೊಟಕುಗೊಳಿಸಿದ್ದರಿಂದ ರೈತರು ಬೇಸರದಿಂದ ಹಿಂದಿರುಗಬೇಕಾಯಿತು. ಕುರ್ಚಿಗಳು ಖಾಲಿ ಇದ್ದರೆ, ಭಾಷಣ ಕೇಳುವವರು ಇಲ್ಲದಿದ್ದರೆ ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ ಎಂಬ ಉದ್ದೇಶದಿಂದ ರೈತರನ್ನು ಕರೆಸಿಕೊಳ್ಳಲಾಗಿತ್ತೇ ಹೊರತು ಸಮಸ್ಯೆ ಬಗೆಹರಿಸುವುದಕ್ಕಲ್ಲ. ಇಂತಹ ಮನೋಭಾವ ಮುಂದುವರೆದರೆ ಕೆಎಸ್ಪಿಡಿಸಿಎಲ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಶಕ್ತಿಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸುಲು, ಮಾರುತಿ ಎಚ್ಚರಿಸಿದ್ದಾರೆ.