<p><strong>ಪಾವಗಡ (ತುಮಕೂರು):</strong> ಅಲ್ಪ ಸಂಬಳದಲ್ಲಿಯೇ ಉಳಿಸಿ, ಕೂಡಿಟ್ಟಿದ್ದ ಹಣದಿಂದ ಖರೀದಿಸಿದ್ದ ನಿವೇಶನವನ್ನು ಓಬೇನಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ಎಂಬವರು ಅಂಗನವಾಡಿ ಕೇಂದ್ರದ ಕಟ್ಟಡ ಕಟ್ಟಲು ಉಚಿತವಾಗಿ ನೀಡಿದ್ದಾರೆ. </p><p>ಗ್ರಾಮದ ಅಂಗನವಾಡಿ ಕೇಂದ್ರ ಹಲವು ವರ್ಷಗಳಿಂದ ಬಾಡಿಗೆ ಕಟ್ಟಡ ದಲ್ಲಿತ್ತು. ಕೆಲ ದಿನ ಗ್ರಾಮದ ದೇಗುಲದಲ್ಲಿ ಕಾರ್ಯನಿರ್ವಹಿಸಿತ್ತು. 2015ರಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ</p><p>ನೇಮಕಗೊಂಡ ದಿನದಿಂದ ಶಾಂತಮ್ಮ ಅವರನ್ನು ಇದು ಕಾಡುತ್ತಿತ್ತು. </p>.<p>ಮನೆ ಕಟ್ಟಿಸಲು ಶಾಂತಮ್ಮ 2022ರಲ್ಲಿ ಗ್ರಾಮದಲ್ಲಿ ಎರಡು ನಿವೇಶನ ಖರೀದಿಸಿದ್ದರು. ಆ ಪೈಕಿ 1,200 ಚದರ ಅಡಿ ಅಳತೆಯ ಒಂದು ನಿವೇಶನವನ್ನು ಕೊಟ್ಟಿದ್ದಾರೆ. ಜೂನ್ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೆಸರಿಗೆ ಇ–ಖಾತೆ ಮಾಡಿಸಿಕೊಟ್ಟಿದ್ದಾರೆ. </p>.<p>ನಿವೇಶನ ಇಂದು ₹3 ಲಕ್ಷ ಬಾಳುತ್ತದೆ. ನಿವೇಶನ ನೀಡುವ ಶಾಂತಮ್ಮ ಅವರ ನಿಲುವಿಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿಲ್ಲ. ಅಂಗನವಾಡಿ ಕೇಂದ್ರದಲ್ಲಿ 16 ಮಕ್ಕಳಿದ್ದಾರೆ. ನಾಲ್ವರು ಗರ್ಭಿಣಿಯರು, ಒಬ್ಬ ಬಾಣಂತಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.</p>.<p>‘ಪುಟಾಣಿಗಳ ಭವಿಷ್ಯಕ್ಕಾಗಿ ನಿವೇಶನ ನೀಡಿದ ಬಗ್ಗೆ ತೃಪ್ತಿ ಇದೆ. ಮನೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರೂ ಬೆಂಬಲ ನೀಡಿದರು. ಸರ್ಕಾರ ಶೀಘ್ರ ಕಟ್ಟಡ ನಿರ್ಮಿಸಿ ಮೂಲಸೌಕರ್ಯ ಕಲ್ಪಿಸಿದರೆ ನನ್ನ ಶ್ರಮ ಸಾರ್ಥಕವಾಗಲಿದೆ’ ಎಂದು ಶಾಂತಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಸಣ್ಣ ಸಂಬಳದಲ್ಲಿ ಕೂಡಿಟ್ಟಿದ್ದ ಹಣದಲ್ಲಿ ಖರೀದಿಸಿದ್ದ ನಿವೇಶನವನ್ನು ಗ್ರಾಮದ ಅಂಗನವಾಡಿಗೆ ನೀಡಿರುವುದು ಶಾಂತಮ್ಮ ಔದಾರ್ಯಕ್ಕೆ ಸಾಕ್ಷಿ ಎಂದು ಓಬೇನಹಳ್ಳಿಯ ರಾಘವೇಂದ್ರ ಹೇಳಿದರು. ಶಾಂತಮ್ಮ ಅವರ ಈ ನಡೆ ಸಮುದಾಯ ಪ್ರಜ್ಞೆಯ ಪ್ರತೀಕ ಎಂದು ಎಸ್.ವಿಜಯಕುಮಾರ್ ಅವರು ಶ್ಲಾಘಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾವಗಡ (ತುಮಕೂರು):</strong> ಅಲ್ಪ ಸಂಬಳದಲ್ಲಿಯೇ ಉಳಿಸಿ, ಕೂಡಿಟ್ಟಿದ್ದ ಹಣದಿಂದ ಖರೀದಿಸಿದ್ದ ನಿವೇಶನವನ್ನು ಓಬೇನಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ಎಂಬವರು ಅಂಗನವಾಡಿ ಕೇಂದ್ರದ ಕಟ್ಟಡ ಕಟ್ಟಲು ಉಚಿತವಾಗಿ ನೀಡಿದ್ದಾರೆ. </p><p>ಗ್ರಾಮದ ಅಂಗನವಾಡಿ ಕೇಂದ್ರ ಹಲವು ವರ್ಷಗಳಿಂದ ಬಾಡಿಗೆ ಕಟ್ಟಡ ದಲ್ಲಿತ್ತು. ಕೆಲ ದಿನ ಗ್ರಾಮದ ದೇಗುಲದಲ್ಲಿ ಕಾರ್ಯನಿರ್ವಹಿಸಿತ್ತು. 2015ರಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ</p><p>ನೇಮಕಗೊಂಡ ದಿನದಿಂದ ಶಾಂತಮ್ಮ ಅವರನ್ನು ಇದು ಕಾಡುತ್ತಿತ್ತು. </p>.<p>ಮನೆ ಕಟ್ಟಿಸಲು ಶಾಂತಮ್ಮ 2022ರಲ್ಲಿ ಗ್ರಾಮದಲ್ಲಿ ಎರಡು ನಿವೇಶನ ಖರೀದಿಸಿದ್ದರು. ಆ ಪೈಕಿ 1,200 ಚದರ ಅಡಿ ಅಳತೆಯ ಒಂದು ನಿವೇಶನವನ್ನು ಕೊಟ್ಟಿದ್ದಾರೆ. ಜೂನ್ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೆಸರಿಗೆ ಇ–ಖಾತೆ ಮಾಡಿಸಿಕೊಟ್ಟಿದ್ದಾರೆ. </p>.<p>ನಿವೇಶನ ಇಂದು ₹3 ಲಕ್ಷ ಬಾಳುತ್ತದೆ. ನಿವೇಶನ ನೀಡುವ ಶಾಂತಮ್ಮ ಅವರ ನಿಲುವಿಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿಲ್ಲ. ಅಂಗನವಾಡಿ ಕೇಂದ್ರದಲ್ಲಿ 16 ಮಕ್ಕಳಿದ್ದಾರೆ. ನಾಲ್ವರು ಗರ್ಭಿಣಿಯರು, ಒಬ್ಬ ಬಾಣಂತಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.</p>.<p>‘ಪುಟಾಣಿಗಳ ಭವಿಷ್ಯಕ್ಕಾಗಿ ನಿವೇಶನ ನೀಡಿದ ಬಗ್ಗೆ ತೃಪ್ತಿ ಇದೆ. ಮನೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರೂ ಬೆಂಬಲ ನೀಡಿದರು. ಸರ್ಕಾರ ಶೀಘ್ರ ಕಟ್ಟಡ ನಿರ್ಮಿಸಿ ಮೂಲಸೌಕರ್ಯ ಕಲ್ಪಿಸಿದರೆ ನನ್ನ ಶ್ರಮ ಸಾರ್ಥಕವಾಗಲಿದೆ’ ಎಂದು ಶಾಂತಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಸಣ್ಣ ಸಂಬಳದಲ್ಲಿ ಕೂಡಿಟ್ಟಿದ್ದ ಹಣದಲ್ಲಿ ಖರೀದಿಸಿದ್ದ ನಿವೇಶನವನ್ನು ಗ್ರಾಮದ ಅಂಗನವಾಡಿಗೆ ನೀಡಿರುವುದು ಶಾಂತಮ್ಮ ಔದಾರ್ಯಕ್ಕೆ ಸಾಕ್ಷಿ ಎಂದು ಓಬೇನಹಳ್ಳಿಯ ರಾಘವೇಂದ್ರ ಹೇಳಿದರು. ಶಾಂತಮ್ಮ ಅವರ ಈ ನಡೆ ಸಮುದಾಯ ಪ್ರಜ್ಞೆಯ ಪ್ರತೀಕ ಎಂದು ಎಸ್.ವಿಜಯಕುಮಾರ್ ಅವರು ಶ್ಲಾಘಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>