ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಲ್ಲ ಬಸ್ಗಳನ್ನು ಸಮಾವೇಶಕ್ಕೆ ಕಳುಹಿಸಿದ್ದಾರೆ. ಜನರಿಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ತಾಲ್ಲೂಕಿನ ಸೀಬಿ ಗ್ರಾಮಕ್ಕೆ ಹೋಗಲು ಬಸ್ ಇಲ್ಲ ಎಂದರೆ ಗಡಿಭಾಗಗಳ ಪರಿಸ್ಥಿತಿ ಹೇಗಾಗಿರಬೇಡ. ವಾರಾಂತ್ಯದಲ್ಲಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಿರುತ್ತದೆ. ಅಧಿಕಾರಿಗಳು ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು. ಲೋಕೇಶ್ ತುಮಕೂರು ಶಿರಾಗೆ ಹೋಗಲೂ ಬಸ್ ಇಲ್ಲ ತುಮಕೂರಿನಿಂದ ಶಿರಾಗೆ ಹೋಗಲು ಬಸ್ಗಳಿಲ್ಲ. ಅಧಿಕಾರಿಗಳನ್ನು ಕೇಳಿದರು ಸ್ವಲ್ಪ ಹೊತ್ತು ಕಾಯಿರಿ ಬಸ್ ಬರುತ್ತದೆ ಎಂದು ಹೇಳುತ್ತಾರೆ. ಬೆಳಗ್ಗೆಯಿಂದ ಕಾಯುತ್ತಿದ್ದೇವೆ ಒಂದೇ ಒಂದೂ ಬಸ್ ಬಂದಿಲ್ಲ.