<p><strong>ತುಮಕೂರು:</strong> ತರಕಾರಿ ಬೆಲೆ ಇಳಿಕೆಯತ್ತ ಮುಖ ಮಾಡಿದ್ದರೆ, ಟೊಮೆಟೊ ಗಗನಮುಖಿಯಾಗಿದೆ. ಸೇಬು ಹಣ್ಣು ಸಾಕಷ್ಟು ಅಗ್ಗವಾಗಿದ್ದರೆ, ಕೋಳಿ ಮೊಟ್ಟೆ ದುಬಾರಿಯಾಗಿದೆ. ಸೊಪ್ಪು ಸ್ವಲ್ಪ ಮಟ್ಟಿಗೆ ತಗ್ಗಿದ್ದು, ಬೇಳೆಕಾಳು, ಧಾನ್ಯಗಳು ತುಸು ಇಳಿಕೆಯಾಗಿವೆ.</p>.<p>ಒಂದು ವರ್ಷದಿಂದಲೂ ಚೇತರಿಕೆ ಕಾಣದ ಟೊಮೆಟೊ ಬೆಲೆ ಈಗ ಒಮ್ಮೆಲೆ ದುಪ್ಪಟ್ಟಾಗಿದ್ದು, ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕೆ.ಜಿ ₹50–60ಕ್ಕೆ ಜಿಗಿದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ₹60–80ರ ವರೆಗೆ ಮಾರಾಟವಾಗುತ್ತಿದೆ. ಟೊಮೆಟೊ ದರ ಚೇತರಿಸುವುದೇ ಇಲ್ಲ ಎನ್ನುವ ಸಮಯದಲ್ಲಿ ಉತ್ತಮ ಸ್ಥಿತಿ ಕಂಡುಕೊಂಡಿದೆ. ಬೆಲೆ ಕುಸಿತದಿಂದ ಬೆಳೆ ಬೆಳೆಯುವುದು ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಆವಕದ ಕುಸಿತದಿಂದ ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗಬಹುದು ಎಂದು ಹೇಳಲಾಗುತ್ತಿದೆ.</p>.<p>ತರಕಾರಿ ಧಾರಣೆಯೂ ಇಳಿಕೆಯತ್ತ ಮುಖ ಮಾಡಿದೆ. ಬೀನ್ಸ್, ಕ್ಯಾರೇಟ್, ಬೀಟ್ರೂಟ್, ಬೆಂಡೆಕಾಯಿ, ಬದನೆಕಾಯಿ, ಈರುಳ್ಳಿ, ಶುಂಠಿ ಬೆಲೆ ತಗ್ಗಿದೆ. ಉಳಿದಂತೆ ಇತರ ತರಕಾರಿಗಳ ದರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.</p>.<p><strong>ಕೊತ್ತಂಬರಿ ಸೊಪ್ಪು ಇಳಿಕೆ:</strong> ದುಬಾರಿಯಾಗಿದ್ದ ಕೊತ್ತಂಬರಿ ಸೊಪ್ಪಿದ ಬೆಲೆ ಹಿಂದಿನ ವಾರಕ್ಕೆ ಹೋಲಿಸಿದರೆ ಅರ್ಧದಷ್ಟು ಕುಸಿತವಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–40ಕ್ಕೆ, ಸಬ್ಬಕ್ಕಿ ಕೆ.ಜಿ ₹50–60, ಮೆಂತ್ಯ ಸೊಪ್ಪು ಕೆ.ಜಿ ₹40–50, ಪಾಲಕ್ ಸೊಪ್ಪು (ಕಟ್ಟು) ₹50ಕ್ಕೆ ಏರಿಕೆಯಾಗಿದೆ.</p>.<p><strong>ಸೇಬು ಅಗ್ಗ:</strong> ಹಣ್ಣುಗಳ ದರ ಇಳಿಕೆಯತ್ತ ಮುಖಮಾಡಿದ್ದು, ಸೇಬು ಕೆ.ಜಿ ₹100ಕ್ಕೆ ಇಳಿಕೆಯಾಗಿದೆ. ಏಲಕ್ಕಿ, ಪಚ್ಚಬಾಳೆ ಅಗ್ಗವಾಗಿದ್ದರೆ, ಪಪ್ಪಾಯ ಕೆ.ಜಿ ₹15ಕ್ಕೆ ಕುಸಿದಿದೆ. ಮೂಸಂಬಿ, ಕಿತ್ತಳೆ, ಕರಬೂಜ, ದ್ರಾಕ್ಷಿ ಬೆಲೆ ತಗ್ಗಿದೆ. ಕಳೆದ ಹಲವು ತಿಂಗಳುಗಳ ನಂತರ ಹಣ್ಣು ದರ ತಗ್ಗಿದೆ.</p>.<p><strong>ಅಡುಗೆ ಎಣ್ಣೆ:</strong> ಗೋಲ್ಡ್ವಿನ್ನರ್ ತುಸು ಏರಿಕೆಯಾಗಿದ್ದರೆ, ಕಡಲೆಕಾಯಿ ಎಣ್ಣೆ ಕೊಂಚ ಕಡಿಮೆಯಾಗಿದೆ. ಗೋಲ್ಡ್ವಿನ್ನರ್ ಕೆ.ಜಿ ₹152–153, ಪಾಮಾಯಿಲ್ ಕೆ.ಜಿ ₹118–120, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.</p>.<p><strong>ಉದ್ದಿನ ಬೇಳೆ ಏರಿಕೆ:</strong> ಬೇಳೆ, ಧಾನ್ಯಗಳ ಧಾರಣೆ ತುಸು ಅಗ್ಗವಾಗಿದೆ. ಕಡಲೆಬೇಳೆ, ಹೆಸರುಬೇಳೆ, ಕಡಲೆಕಾಳು, ಹೆಸರುಕಾಳು, ಅಲಸಂದೆ ಕಡಿಮೆಯಾಗಿದೆ. ಉದ್ದಿನ ಬೇಳೆ ಒಮ್ಮೆಲೆ ಕೆ.ಜಿಗೆ ₹8–15ರ ವರೆಗೆ ಏರಿಕೆ ದಾಖಲಿಸಿದೆ. ಹುರುಳಿಕಾಳು, ಬೆಲ್ಲ ಸಹ ಹೆಚ್ಚಳವಾಗಿದೆ.</p>.<p><strong>ಮಸಾಲೆ ಪದಾರ್ಥ:</strong> ಜೀರಿಗೆ, ಚಕ್ಕೆ, ಲವಂಗ, ಗಸಗಸೆ, ಮೆಣಸಿನಕಾಯಿ ಬೆಲೆ ತುಸು ತೇಜಿಯಾಗಿದೆ. ಒಣಹಣ್ಣು ಕೊಂಚ ಕಡಿಮೆಯಾಗಿದೆ.</p>.<p>ಧನ್ಯ ಕೆ.ಜಿ ₹110–125, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹250–260, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹190–200, ಬೆಲ್ಲ ಕೆ.ಜಿ ₹50–55, ಕಾಳುಮೆಣಸು ಕೆ.ಜಿ ₹740–750, ಜೀರಿಗೆ ಕೆ.ಜಿ ₹250–260, ಚಕ್ಕೆ ಕೆ.ಜಿ ₹250–260, ಲವಂಗ ಕೆ.ಜಿ ₹800–840, ಗುಣಮಟ್ಟದ ಗಸಗಸೆ ಕೆ.ಜಿ ₹1,550–1,650, ಏಲಕ್ಕಿ ಕೆ.ಜಿ ₹3,000–3,200, ಬಾದಾಮಿ ಕೆ.ಜಿ ₹780–800, ಗೋಡಂಬಿ ಕೆ.ಜಿ ₹800–920, ಒಣದ್ರಾಕ್ಷಿ ಕೆ.ಜಿ ₹420–450ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p><strong>ಮೊಟ್ಟೆ ದುಬಾರಿ:</strong> ಕಾರ್ತಿಕ ಮಾಸ ಮುಗಿಯುತ್ತಿದ್ದಂತೆ ಕೋಳಿ ಮಾಂಸ, ಮೊಟ್ಟೆ ದುಬಾರಿಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹160, ರೆಡಿ ಚಿಕನ್ ಕೆ.ಜಿ ₹255, ಸ್ಕಿನ್ಲೆಸ್ ಕೆ.ಜಿ ₹280, ಫಾರಂ ಕೋಳಿ ಕೆ.ಜಿ ₹180ಕ್ಕೆ ಏರಿಕೆಯಾಗಿದೆ. ಮೊಟ್ಟೆ ಮತ್ತಷ್ಟು ದುಬಾರಿಯಾಗಿದ್ದು, ಒಂದು ₹6.80ಕ್ಕೆ ಜಿಗಿದಿದೆ. ಚಿಲ್ಲರೆ ಅಂಗಡಿಗಳಲ್ಲಿ ₹8ರ ವರೆಗೂ ಮಾರಾಟ ಮಾಡಲಾಗುತ್ತಿದೆ.</p>.<p><strong>ಮೀನು:</strong> ಮೀನು ದರದಲ್ಲಿ ಅಲ್ಪ ಮಟ್ಟಿಗೆ ಏರಿಳಿತ ಕಂಡು ಬಂದಿದೆ. ಬಂಗುಡೆ ಕೆ.ಜಿ ₹210, ಬೂತಾಯಿ ಕೆ.ಜಿ ₹340, ಬೊಳಿಂಜರ್ ಕೆ.ಜಿ ₹220, ಅಂಜಲ್ ಕೆ.ಜಿ ₹550, ಬಿಳಿಮಾಂಜಿ ಕೆ.ಜಿ 1,150, ಕಪ್ಪುಮಾಂಜಿ ₹720, ಇಂಡಿಯನ್ ಸಾಲ್ಮನ್ ₹810, ಸೀಗಡಿ ಕೆ.ಜಿ ₹500–720ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ತರಕಾರಿ ಬೆಲೆ ಇಳಿಕೆಯತ್ತ ಮುಖ ಮಾಡಿದ್ದರೆ, ಟೊಮೆಟೊ ಗಗನಮುಖಿಯಾಗಿದೆ. ಸೇಬು ಹಣ್ಣು ಸಾಕಷ್ಟು ಅಗ್ಗವಾಗಿದ್ದರೆ, ಕೋಳಿ ಮೊಟ್ಟೆ ದುಬಾರಿಯಾಗಿದೆ. ಸೊಪ್ಪು ಸ್ವಲ್ಪ ಮಟ್ಟಿಗೆ ತಗ್ಗಿದ್ದು, ಬೇಳೆಕಾಳು, ಧಾನ್ಯಗಳು ತುಸು ಇಳಿಕೆಯಾಗಿವೆ.</p>.<p>ಒಂದು ವರ್ಷದಿಂದಲೂ ಚೇತರಿಕೆ ಕಾಣದ ಟೊಮೆಟೊ ಬೆಲೆ ಈಗ ಒಮ್ಮೆಲೆ ದುಪ್ಪಟ್ಟಾಗಿದ್ದು, ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕೆ.ಜಿ ₹50–60ಕ್ಕೆ ಜಿಗಿದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ₹60–80ರ ವರೆಗೆ ಮಾರಾಟವಾಗುತ್ತಿದೆ. ಟೊಮೆಟೊ ದರ ಚೇತರಿಸುವುದೇ ಇಲ್ಲ ಎನ್ನುವ ಸಮಯದಲ್ಲಿ ಉತ್ತಮ ಸ್ಥಿತಿ ಕಂಡುಕೊಂಡಿದೆ. ಬೆಲೆ ಕುಸಿತದಿಂದ ಬೆಳೆ ಬೆಳೆಯುವುದು ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಆವಕದ ಕುಸಿತದಿಂದ ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗಬಹುದು ಎಂದು ಹೇಳಲಾಗುತ್ತಿದೆ.</p>.<p>ತರಕಾರಿ ಧಾರಣೆಯೂ ಇಳಿಕೆಯತ್ತ ಮುಖ ಮಾಡಿದೆ. ಬೀನ್ಸ್, ಕ್ಯಾರೇಟ್, ಬೀಟ್ರೂಟ್, ಬೆಂಡೆಕಾಯಿ, ಬದನೆಕಾಯಿ, ಈರುಳ್ಳಿ, ಶುಂಠಿ ಬೆಲೆ ತಗ್ಗಿದೆ. ಉಳಿದಂತೆ ಇತರ ತರಕಾರಿಗಳ ದರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.</p>.<p><strong>ಕೊತ್ತಂಬರಿ ಸೊಪ್ಪು ಇಳಿಕೆ:</strong> ದುಬಾರಿಯಾಗಿದ್ದ ಕೊತ್ತಂಬರಿ ಸೊಪ್ಪಿದ ಬೆಲೆ ಹಿಂದಿನ ವಾರಕ್ಕೆ ಹೋಲಿಸಿದರೆ ಅರ್ಧದಷ್ಟು ಕುಸಿತವಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–40ಕ್ಕೆ, ಸಬ್ಬಕ್ಕಿ ಕೆ.ಜಿ ₹50–60, ಮೆಂತ್ಯ ಸೊಪ್ಪು ಕೆ.ಜಿ ₹40–50, ಪಾಲಕ್ ಸೊಪ್ಪು (ಕಟ್ಟು) ₹50ಕ್ಕೆ ಏರಿಕೆಯಾಗಿದೆ.</p>.<p><strong>ಸೇಬು ಅಗ್ಗ:</strong> ಹಣ್ಣುಗಳ ದರ ಇಳಿಕೆಯತ್ತ ಮುಖಮಾಡಿದ್ದು, ಸೇಬು ಕೆ.ಜಿ ₹100ಕ್ಕೆ ಇಳಿಕೆಯಾಗಿದೆ. ಏಲಕ್ಕಿ, ಪಚ್ಚಬಾಳೆ ಅಗ್ಗವಾಗಿದ್ದರೆ, ಪಪ್ಪಾಯ ಕೆ.ಜಿ ₹15ಕ್ಕೆ ಕುಸಿದಿದೆ. ಮೂಸಂಬಿ, ಕಿತ್ತಳೆ, ಕರಬೂಜ, ದ್ರಾಕ್ಷಿ ಬೆಲೆ ತಗ್ಗಿದೆ. ಕಳೆದ ಹಲವು ತಿಂಗಳುಗಳ ನಂತರ ಹಣ್ಣು ದರ ತಗ್ಗಿದೆ.</p>.<p><strong>ಅಡುಗೆ ಎಣ್ಣೆ:</strong> ಗೋಲ್ಡ್ವಿನ್ನರ್ ತುಸು ಏರಿಕೆಯಾಗಿದ್ದರೆ, ಕಡಲೆಕಾಯಿ ಎಣ್ಣೆ ಕೊಂಚ ಕಡಿಮೆಯಾಗಿದೆ. ಗೋಲ್ಡ್ವಿನ್ನರ್ ಕೆ.ಜಿ ₹152–153, ಪಾಮಾಯಿಲ್ ಕೆ.ಜಿ ₹118–120, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.</p>.<p><strong>ಉದ್ದಿನ ಬೇಳೆ ಏರಿಕೆ:</strong> ಬೇಳೆ, ಧಾನ್ಯಗಳ ಧಾರಣೆ ತುಸು ಅಗ್ಗವಾಗಿದೆ. ಕಡಲೆಬೇಳೆ, ಹೆಸರುಬೇಳೆ, ಕಡಲೆಕಾಳು, ಹೆಸರುಕಾಳು, ಅಲಸಂದೆ ಕಡಿಮೆಯಾಗಿದೆ. ಉದ್ದಿನ ಬೇಳೆ ಒಮ್ಮೆಲೆ ಕೆ.ಜಿಗೆ ₹8–15ರ ವರೆಗೆ ಏರಿಕೆ ದಾಖಲಿಸಿದೆ. ಹುರುಳಿಕಾಳು, ಬೆಲ್ಲ ಸಹ ಹೆಚ್ಚಳವಾಗಿದೆ.</p>.<p><strong>ಮಸಾಲೆ ಪದಾರ್ಥ:</strong> ಜೀರಿಗೆ, ಚಕ್ಕೆ, ಲವಂಗ, ಗಸಗಸೆ, ಮೆಣಸಿನಕಾಯಿ ಬೆಲೆ ತುಸು ತೇಜಿಯಾಗಿದೆ. ಒಣಹಣ್ಣು ಕೊಂಚ ಕಡಿಮೆಯಾಗಿದೆ.</p>.<p>ಧನ್ಯ ಕೆ.ಜಿ ₹110–125, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹250–260, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹190–200, ಬೆಲ್ಲ ಕೆ.ಜಿ ₹50–55, ಕಾಳುಮೆಣಸು ಕೆ.ಜಿ ₹740–750, ಜೀರಿಗೆ ಕೆ.ಜಿ ₹250–260, ಚಕ್ಕೆ ಕೆ.ಜಿ ₹250–260, ಲವಂಗ ಕೆ.ಜಿ ₹800–840, ಗುಣಮಟ್ಟದ ಗಸಗಸೆ ಕೆ.ಜಿ ₹1,550–1,650, ಏಲಕ್ಕಿ ಕೆ.ಜಿ ₹3,000–3,200, ಬಾದಾಮಿ ಕೆ.ಜಿ ₹780–800, ಗೋಡಂಬಿ ಕೆ.ಜಿ ₹800–920, ಒಣದ್ರಾಕ್ಷಿ ಕೆ.ಜಿ ₹420–450ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.</p>.<p><strong>ಮೊಟ್ಟೆ ದುಬಾರಿ:</strong> ಕಾರ್ತಿಕ ಮಾಸ ಮುಗಿಯುತ್ತಿದ್ದಂತೆ ಕೋಳಿ ಮಾಂಸ, ಮೊಟ್ಟೆ ದುಬಾರಿಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹160, ರೆಡಿ ಚಿಕನ್ ಕೆ.ಜಿ ₹255, ಸ್ಕಿನ್ಲೆಸ್ ಕೆ.ಜಿ ₹280, ಫಾರಂ ಕೋಳಿ ಕೆ.ಜಿ ₹180ಕ್ಕೆ ಏರಿಕೆಯಾಗಿದೆ. ಮೊಟ್ಟೆ ಮತ್ತಷ್ಟು ದುಬಾರಿಯಾಗಿದ್ದು, ಒಂದು ₹6.80ಕ್ಕೆ ಜಿಗಿದಿದೆ. ಚಿಲ್ಲರೆ ಅಂಗಡಿಗಳಲ್ಲಿ ₹8ರ ವರೆಗೂ ಮಾರಾಟ ಮಾಡಲಾಗುತ್ತಿದೆ.</p>.<p><strong>ಮೀನು:</strong> ಮೀನು ದರದಲ್ಲಿ ಅಲ್ಪ ಮಟ್ಟಿಗೆ ಏರಿಳಿತ ಕಂಡು ಬಂದಿದೆ. ಬಂಗುಡೆ ಕೆ.ಜಿ ₹210, ಬೂತಾಯಿ ಕೆ.ಜಿ ₹340, ಬೊಳಿಂಜರ್ ಕೆ.ಜಿ ₹220, ಅಂಜಲ್ ಕೆ.ಜಿ ₹550, ಬಿಳಿಮಾಂಜಿ ಕೆ.ಜಿ 1,150, ಕಪ್ಪುಮಾಂಜಿ ₹720, ಇಂಡಿಯನ್ ಸಾಲ್ಮನ್ ₹810, ಸೀಗಡಿ ಕೆ.ಜಿ ₹500–720ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>